Friday, October 27, 2017

Shri Krishnana Nooraru Geethegalu - 363

ತೋರಯ್ಯ ಹನುಮ

ತೋರಯ್ಯ ಹನುಮ ನಿನ್ನೊಡೆಯ ರಾಮನ
ಪಾದಸೇವೆಗೆ ಒಲಿದು ಬಿಡದೆ ಸಲಹಿದನ

ಮನುವ ಉದ್ಧರಿಸೆ ಮತ್ಸ್ಯ ತಾನಾದವನ
ಅಮೃತದ ಉದ್ಭವಕೆ ಆಧಾರ ದೇವನ
ಅಸುರನ ದುರುಮುರಿದು ಅವನಿಯನೆ ಎತ್ತಿದನ
ಕಂದನ ಕರೆ ಕೇಳಿ ಕಂಭ ಸೀಳಿದನ (೧)

ಅಂಗೈಯ ದಾನಕ್ಕೆ ಅಗಾಧನಾದವನ
ಕೆಡುಕಿಗೆ ಪರುಶೆಂದು ಮೆರೆದ ಬ್ರಾಹ್ಮಣನ
ಧರ್ಮದ ಕೋದಂಡ ಹಿಡಿದ ಶ್ರೀರಾಮನ
ಕೊಳಲಲ್ಲಿ ಜಗವನೇ ಆಡಿಸಿದ ಕೃಷ್ಣನ (೨)

ಶ್ಯಾಮನ ಸೋದರನ ಧೀರ ಬಲರಾಮನ
ಹಲವು ಅವತಾರದಿ ಸುಜನರ ಪೊರೆದನ
ಕಲಿಯೊಳಗೆ ಎನ್ನ ದೇವ ಶ್ರೀನಿವಾಸ ವಿಠಲ
ರಾಯರಾಯರು ನಂಬಿ ಬಿಡದೆ ಪೂಜಿಪನ (೩)

ತೋರಯ್ಯ ಹನುಮ ನಿನ್ನೊಡೆಯ ರಾಮನ
ಪಾದಸೇವೆಗೆ ಒಲಿದು ಬಿಡದೆ ಸಲಹಿದನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೦.೨೦೧೭

No comments:

Post a Comment