Friday, December 30, 2011

Shri Krishnana Nooraru Geethegalu - 196

ಜೀವ ಓಂಕಾರ

ವೇಂಕಟೇಶ್ವರ ಜಗದೋದ್ಧಾರ
ಧೀರ ಗಂಭೀರ ಜೀವ ಓಂಕಾರ

ವೇದ ಸಂವೇದ ಶ್ರೀಕಲಿಯವರದ
ಶ್ರೀದೇವಿಗೊಲಿದ ವೈಕುಂಠಪುರದ (೧)

ಪ್ರೇಮ ಪರಿಪಾಲ ರಾಧೆಗೋಪಾಲ
ಸಿರಿಲಕುಮಿಲೋಲ ಶ್ರೀನಿವಾಸ ವಿಠಲ (೨)

ವೇಂಕಟೇಶ್ವರ ಜಗದೋದ್ಧಾರ
ಧೀರ ಗಂಭೀರ ಜೀವ ಓಂಕಾರ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೧೨.೨೦೧೧

Wednesday, December 28, 2011

Shri Krishnana Nooraru Geethegalu - 195

ಜಯಜಯ ಗೋವಿಂದ

ಜಯ ಗೋವಿಂದ ಜಯಜಯ ಗೋವಿಂದ
ಕಾಯೆಮ್ಮ ಕರುಣದಿ ಜಗದಾನಂದ

ನಂಬಿ ಬಂದೆವೊ ನಿನ್ನ ರಾಘವ ಗೋವಿಂದ
ನೆಚ್ಚಿ ಬಂದೆವೊ ನಿನ್ನ ಜಾನಕಿ ಗೋವಿಂದ
ಶಬರಿ ಅಹಲ್ಯೆಯ ಸಲಹಿದ ಗೋವಿಂದ
ಸಂಜೀವರಾಯರ ಶ್ರೀಪಾದ ಗೋವಿಂದ(೧)

ಬೇಡಿ ಬಂದೆವೊ ನಿನ್ನ ಗೋಕುಲ ಗೋವಿಂದ
ನೋಡಿ ಬಂದೆವೊ ನಿನ್ನ ಗೋಪಾಲ ಗೋವಿಂದ
ಮಥುರಾ ಸುಜನರ ಸಲಹಿದ ಗೋವಿಂದ
ಪಾಂಡವರೈವರ ಸಿರಿಪುಣ್ಯ ಗೋವಿಂದ (೨)

ಕಲಿಯೊಳು ನಿನ್ನನ್ನೇ ಮರೆತೆವೊ ಗೋವಿಂದ
ಮರೆತರೆ ದುರಿತವು ಅರಿತೆವೊ ಗೋವಿಂದ
ಶ್ರೀನಿವಾಸ ವಿಠಲನೆ ಕ್ಷಮಿಸೆಮ್ಮ ಗೋವಿಂದ
ಆದಿನಾರಾಯಣ ಸಿರಿಲಕುಮಿ ಗೋವಿಂದ (೩)

ಜಯ ಗೋವಿಂದ ಜಯಜಯ ಗೋವಿಂದ
ಕಾಯೆಮ್ಮ ಕರುಣದಿ ಜಗದಾನಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೧

Shri Krishnana Nooraru Geethegalu - 194

ಜಯ ಗೋವಿಂದ

ಜಯ ಗೋವಿಂದ ಜಯಜಯ ಗೋವಿಂದ
ಪೊರೆಯೆಮ್ಮ ಕರುಣದಿ ಜಗದಾನಂದ

ಜಯ ಗೋವಿಂದ ರಾಘವ ಗೋವಿಂದ
ಕೌಸಲ್ಯೆ ಆನಂದ ಜಾನಕಿ ಗೋವಿಂದ
ಸಂಜೀವರಾಯರ ಶ್ರೀಪಾದ ಗೋವಿಂದ
ಶಬರಿಯ ಶ್ರೀದೇವ ಸುಗುಣೇಂದ್ರ ಗೋವಿಂದ (೧)

ಜಯ ಗೋವಿಂದ ದಶದಯ್ಯ ಗೋವಿಂದ
ಮತ್ಸ್ಯ ವರಾಹ ನರಸಿಂಹ ಗೋವಿಂದ
ಶ್ರೀರಾಮ ಜಯಶ್ಯಾಮ ಜಗಕ್ಷೇಮ ಗೋವಿಂದ
ಪರಶುರಾಮ ಶ್ರೀವಾಮನ ಗೋವಿಂದ (೨)

ಜಯ ಗೋವಿಂದ ಗೋಕುಲ ಗೋವಿಂದ
ಸುಜನ ಸುಪಾಲಕ ಶ್ರೀಕೃಷ್ಣ ಗೋವಿಂದ
ಶ್ರೀನಿವಾಸ ವಿಠಲನೆ ತಿರುಮಲ ಗೋವಿಂದ
ನಮ್ಮಮ್ಮ ಸಿರಿಲಕುಮಿ ಗಂಡನೆ ಗೋವಿಂದ (೩)

ಜಯ ಗೋವಿಂದ ಜಯಜಯ ಗೋವಿಂದ
ಪೊರೆಯೆಮ್ಮ ಕರುಣದಿ ಜಗದಾನಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೧

Friday, December 23, 2011

Shri Krishnana Nooraru Geethegalu - 193

ದಿವ್ಯಪಾದ

ಪರಮಪಾದ ಪಾವನ ಪುಣ್ಯಪಾದ
ದಶರೂಪದಿ ಧರೆಯ ಪೊರೆವ ದಿವ್ಯಪಾದ

ಆದಿ ಪಾದ ಅನಾದಿ ಪಾದ
ಶುಭವರದ ಅನಂತನ ದಿಗಂತಪಾದ

ರಾಮಪಾದ ಮೇಘಶ್ಯಾಮಪಾದ
ವಾಯುಭೀಮದೇವಗೊಲಿದ ಕ್ಷೇಮಪಾದ

ಪುಟ್ಟಪಾದ ವಿರಾಟ್ ಬೆಟ್ಟಪಾದ
ದಿಟ್ಟ ತಾನು ಚೊಟ್ಟನವನ ಮೆಟ್ಟಿಪಾದ

ಅಂದ ಪಾದ ಬಲುಚೆಂದ ಪಾದ
ನಂದಗೋಪಿ ಕಂದನೆಮ್ಮ ಗೋವಿಂದಪಾದ

ನವ್ಯ ಪಾದ ನವಕಾವ್ಯ ಪಾದ
ನವನವೀನ ನಾದಗಂಗೆ ಸುಶ್ರಾವ್ಯಪಾದ

ಅಚಲಪಾದ ಶುದ್ಧಸುಚಲಪಾದ
ಶ್ರೀನಿವಾಸ ವಿಠಲದೇವನ ಸಿರಿಯಪಾದ

ಪರಮಪಾದ ಪಾವನ ಪುಣ್ಯಪಾದ
ದಶರೂಪದಿ ಧರೆಯ ಪೊರೆವ ದಿವ್ಯಪಾದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೧೨.೨೦೧೧

Thursday, December 22, 2011

Shri Krishnana Nooraru Geethegalu - 192

ಧೀರ ಸವಾರ

ಗುರಿಯಿರದೆನ್ನ ಮನವೆಂಬೊ ಹಯವು
ಶ್ರೀಹರಿ ನಿನ್ನ ಚಿತ್ತದಂತಿರಲೊ

ಕೆನೆತ ಹಯದ ಧರ್ಮ ಅಂಕೆಯೊಳಿರಲಯ್ಯ
ಕರಪುಟ ನಡಿಗೆಯು ನಿನ್ನ ಸಂಖ್ಯೆಯೊಳು
ಹಸಿವಾದೊಡೆ ನಿನ್ನ ನಾಮಾಮೃತ ಗರಿಕೆ
ಮೆದ್ದು ತಾ ತ್ಯಜಿಸಲೊ ಕೆಡುಕೆಂಬೊ ಮಲವ (೧)

ಜಯವನೆ ಜಯಿಸಲಿ ವಿಜಯಂಗಯ್ಯಲಿ
ಜಾತಿ ಅನೀತಿಯ ಮಡಿ ಗಡಿ ದಾಟಿ
ಜೀವನ ಜೀನವ ಜತನದಿ ಬಿಗಿದೆನ್ನ
ಸರಿದಾರಿ ಸರದಾರ ಬೀಸಯ್ಯ ಚಾಟಿ (೨)

ಧರ್ಮದಿ ಬೆಳೆಸಯ್ಯ ಧರ್ಮವ ಉಣಿಸಯ್ಯ
ದುರಿತದ ಕೊಳೆಯದ ಕಳೆವುದ ಕಲಿಸಯ್ಯ
ಧೀರ ಸವಾರ ಶ್ರೀ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಪಾದದ ಪದದೊಳಗಿರಿಸಯ್ಯ (೩)

ಗುರಿಯಿರದೆನ್ನ ಮನವೆಂಬೊ ಹಯವು
ಶ್ರೀಹರಿ ನಿನ್ನ ಚಿತ್ತದಂತಿರಲೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೨.೨೦೧೧

Thursday, December 15, 2011

Shri Krishnana Nooraru Geethegalu - 191


ನಿನ್ನಂತೆಯೆ ಹನುಮ

ಇರುವುದಾದರೆ ಇರಿಸೊ ನಿನ್ನಂತೆಯೆ ಹನುಮ
ಅನುಕ್ಷಣವು ಹರಿಪಾದ ಮರೆಯದಂತೆ
ಮನದ ತಾಮಸ ಹರಿಸೊ ಶುದ್ಧಕರುಣದಿ ಹರಸೊ
ಎನ್ನೊಳಗೆ ಶ್ರೀರಾಮ ನೆಲೆಸುವಂತೆ

ಜೀವದೀ ಕಣಕಣವು ನಿನ್ನಂತೆಯೆ ಹನುಮ
ಶ್ರೀರಾಮನಾಮವದ ನುಡಿಯುವಂತೆ
ನಾಲಗೆಯು ನೇತ್ರವವು ನಿನ್ನಂತೆಯೆ ಹನುಮ
ರಾಮನಾಮದ ಸಿಹಿಯ ಸವಿಯುವಂತೆ (೧)

ಎನ್ನ ಕರ್ಮದ ಕರವು ನಿನ್ನಂತೆಯೆ ಹನುಮ
ಶ್ರೀರಾಮಸೇವೆಯೊಳು ದಣಿಯದಂತೆ
ನೀನಿತ್ತ ಹೃದಯವದು ನಿನ್ನಂತೆಯೆ ಹನುಮ
ರಾಮರಾಮಯೆನುತ ತಣಿಯುವಂತೆ (೨)

ಸೇವೆಯೆಂಬೀ ಬಕುತಿ ನಿನ್ನಂತೆಯೆ ಹನುಮ
ಎದೆಯೊಳಗೆ ಶ್ರೀರಾಮನುಳಿಯುವಂತೆ
ಜನ್ಮಜನ್ಮಾಂತರದಿ ನಿನ್ನಂತೆಯೆ ಹನುಮ
ಶ್ರೀನಿವಾಸ ವಿಠಲನ್ನ ನೆನೆಯುವಂತೆ (೩)

ಇರುವುದಾದರೆ ಇರಿಸೊ ನಿನ್ನಂತೆಯೆ ಹನುಮ
ಅನುಕ್ಷಣವು ಹರಿಪಾದ ಮರೆಯದಂತೆ
ಮನದ ತಾಮಸ ಹರಿಸೊ ಶುದ್ಧಕರುಣದಿ ಹರಸೊ
ಎನ್ನೊಳಗೆ ಶ್ರೀರಾಮ ನೆಲೆಸುವಂತೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೧೨.೨೦೧೧

Saturday, December 10, 2011

Shri Krishnana Nooraru Geethegalu - 190

ನಿಗಮಗೋಚರ ಕೃಷ್ಣ

ನಿಗಮಗೋಚರ ಕೃಷ್ಣ ಧರಣಿ ಪಾಲ
ಸುಖದಿ ಸಲಹೊ ಎಮ್ಮ ರಾಧೆಲೋಲ

ನಿಜರೂಪ ನಿಷ್ಕಾಮ ನಿಯತಿ ಸೂತ್ರಕ ಕೃಷ್ಣ
ನಿನ್ನೊಡಲ ನೆಪಜೀವದಣುವು ನಾವಯ್ಯ
ಬುವಿ ಬಸಿರು ಹಸಿರುಸಿರ ಹನಿಯು ಅನ್ನವದಾಗಿ
ಎಮ್ಮೊಡಲ ಕಣಕಣದಿ ನೀನೆ ನೆಲೆಸಯ್ಯ (೧)

ಗುಣವಂತ ನಯವಂತ ಛಲವಂತನೆ ಕೃಷ್ಣ
ನಿನ್ನ ನೆರಳಿನಾ ನೆರಳ ಆಶ್ರಿತರು ನಾವಯ್ಯ
ಶಿಕ್ಷಿಸೆಮ್ಮಯ ದುರಿತ ಕುರುಜನರ ತರಿದಂತೆ
ಹಗಲೆಡೆಗೆ ಅಂಧರಥ ನೀನೆ ನಡೆಸಯ್ಯ (೨)

ಆದಿದೇವನು ನೀನು ಅಣುರೇಣುತೃಣ ಕೃಷ್ಣ
ನಿನ್ನ ಉಸಿರಿಗೆ ಕಾದ ಮುರಳಿ ನಾವಯ್ಯ
ಯಮುನೆತೀರದ ಚೆಲುವ ಶ್ರೀನಿವಾಸ ವಿಠಲಯ್ಯ
ಮನಶುದ್ಧಬುದ್ಧಿಯೊಳು ಎಮ್ಮ ಸಲಹಯ್ಯ (೩)

ನಿಗಮಗೋಚರ ಕೃಷ್ಣ ಧರಣಿ ಪಾಲ
ಸುಖದಿ ಸಲಹೊ ಎಮ್ಮ ರಾಧೆಲೋಲ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೧

Tuesday, December 6, 2011

Shri Krishnana Nooraru Geethegalu - 189


ಮೂನಾಮ


ಮನಶುದ್ಧವಿರದಿರೆ ಮೂನಾಮನೊಲಿಯನೊ
ಶುದ್ಧಾತ್ಮರಂಗದೊಳು ಭಜಿಸವನ ಮನುಜ

ಎಂಜಲ ಫಲದವಳ ಬಿನ್ನಹಕ್ಕೊಲಿದವನೊ
ಮುನಿ ಶಾಪಾಂಧಳ ಶಿಲೆಗೊಲಿದವನೊ
ವಿಷಮೊಲೆಯಸುರೆಯ ಮಾತೆ ನೀನೆಂದವನೊ
ಶ್ರೀಪಾದಸೇವಕನ ಸಿರಿಯೆದೆಯಾಶ್ರಿತನೊ (೧)

ಬಹುಕುರು ಕುಲತೊರೆದು ಐವರಿಗೊಲಿದನೊ
ಜಲದೊಳಗಡಗಿದನ ದುರುತೊಡೆ ಮುರಿದನೊ
ಧರ್ಮಾದಿ ದಶದೇವ ಶ್ರೀನಿವಾಸ ವಿಠಲ ತಾ
ಎಂಟು ವಕ್ರದ ಹೆಣ್ಣ ನೆಂಟನಾದವನೊ (೨)

ಮನಶುದ್ಧವಿರದಿರೆ ಮೂನಾಮನೊಲಿಯನೊ
ಶುದ್ಧಾತ್ಮರಂಗದೊಳು ಭಜಿಸವನ ಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೧೨.೨೦೧೧

Tuesday, November 29, 2011

Shri Krishnana Nooraru Geethegalu - 188

ಗೋವಿಂದ ವಂದೆ ವಂದೆ

ಕ್ಷೀರಾಬ್ಧಿವಾಸ ತಿರುವೇಂಕಟೇಶ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೧)

ಶೇಷಾದ್ರಿನಿಲಯ ಸಿರಿಲಕುಮಿಯೊಡೆಯ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೨)

ಶ್ರೀದೇವಿ ರಮಣ ಭೂದೇವಿ ಪ್ರಾಣ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೩)

ವೈಕುಂಠಸಿರಿಯೆ ವೈಭವದ ದೊರೆಯೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೪)

ಕಲ್ಯಾಣ ನಿಧಯೆ ಆನಂದ ಸುಧೆಯೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೫)

ಓ ದಿವ್ಯಮೂರ್ತೇ ತ್ರೈಲೋಕ ಕೀರ್ತೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೬)

ಶ್ರೀಸೋಮವದನ ಕಮಲದಳನಯನ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೭)

ಸಪ್ತಋಷಿ ವಂದ್ಯ ವೇದಾಂತಗಮ್ಯ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೮)

ನಾರದ ತಂಬೂರ ಗಾಯನ ಸಂಪ್ರೀತ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೯)

ಕಮಲ ಮಕರಂದ ಭೃಂಗ ಅರವಿಂದ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೦)

ವಸುದೇವನಾತ್ಮ ಏಕಮತ ತತ್ವ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೧)

ನೀ ಮಂತ್ರಘೋಷ ಗೋಕುಲಾಧೀಶ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೨)

ತ್ರೈಲೋಕ್ಯ ಬಂಧು ಜಗದೈಕ್ಯ ಸಿಂಧು ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೩)

ನಾಗ-ಗರುಡಾದಿ ಸಿಂಹ-ಹಯ ಪೂಜಿತಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೪)

ಸೂರ್ಯಸೋಮಾದಿ ಗ್ರಹನವಪಾಲಕಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೫)

ಬಕುತಜನ ಜೀವ ಜೀವ ಸಂಜೀವ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೬)

ದಶರೂಪ ದೇವಂ ಧರಣಿ ಉದ್ಧಾರಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೭)

ಶ್ರೀವೇಂಕಟಾದ್ರಿ ನಾರಾಯಣಾದ್ರಿ ಗೋವಿಂದ ವಂದೆ ವಂದೆ
ಸಪ್ತಗಿರಿರಾಯ ಶ್ರೀನಿವಾಸ ವಿಠಲ ತಿರುಮಲನೆ ಕಾಯೊ ತಂದೆ    (೧೮)

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೧೧.೨೦೧೧

Sunday, November 27, 2011

Shri Krishnana Nooraru Geethegalu - 187

ಶ್ರೀ ಶ್ರೀನಿವಾಸಾಯ

ನಮೊ ತಿರುಮಲೇಶಾಯ ನಮೊ ವೇಂಕಟೇಶಾಯ
ಶೇಷಾದ್ರಿನಿಲಯ ಹೇ ಶ್ರೀ ಶ್ರೀನಿವಾಸಾಯ

ಶ್ರೀಆದಿದೇವಾಯ ಅನಂತಾಕ್ಷ ಅಚಲಾಯ
ಭವರೋಗಹರನೆ ಶ್ರೀಅಮೃತಾಯ (೧)

ಗರುಡಾದ್ರಿ ದೇವಾಯ ಕಲ್ಯಾಣಗುಣದಾಯ
ದುರಿತಹರ ದೇವ ಶ್ರೀಕೋದಂಡರಾಯ (೨)

ವೈಕುಂಠನಾಥಾಯ ಸಿರಿಲಕುಮಿ ಹೃದಯ
ಪದ್ಮಾವತಿ ದೇವ ಪದುಮನಾಭಾಯ (೩)

ಶ್ರೀಪಾದದೇವಾಯ ತ್ರೈಲೋಕ ಕ್ಷೇಮಾಯ
ಶ್ರೀನಿವಾಸ ವಿಠಲ ಶ್ರೀಗೋವಿಂದರಾಯ (೪)

ನಮೊ ತಿರುಮಲೇಶಾಯ ನಮೊ ವೇಂಕಟೇಶಾಯ
ಶೇಷಾದ್ರಿನಿಲಯ ಹೇ ಶ್ರೀ ಶ್ರೀನಿವಾಸಾಯ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೧.೨೦೧೧

Wednesday, November 23, 2011

Shri Krishnana Nooraru Geethegalu - 186

ಶ್ರೀಹನುಮ

ಭಜಿಸಿರೊ ಇವನೆಮ್ಮ ದೇವ ಶ್ರೀಹನುಮ
ಇವನೊಲಿಯಲು ಅವನೊಲಿವನೊ ರಾಮ ಶ್ರೀರಾಮ

ರಾಮರಾಮರಾಮನೆನುವ ರಾಮನಾಮವ ಜಪಿಸುವ
ರಘುವಂಶಜ ರಾಮಚಂದ್ರನ ಶ್ರೀಪಾದವ ಸವಿಯುವ
ಮೂಲರಾಮರ ನಿಜನೆಂಟನೊ ಪವನಸುತ ಬಲವಂತ
ರಾಮನೆನುವ ನರರ ಕಾವ ಎಮ್ಮ ದೇವ ಹನುಮಂತ (೧)

ತ್ರೇತೆಯೊಳಗೆ ಮಾತೆ ಸೀತೆಯ ಶೋಕಸಾಗರ ನೀಗಿದ
ದುರಿತ ಕಳೆದು ಧರಣಿಯೊಳಗೆ ಧರ್ಮಜಯವನು ಬೀಗಿದ
ಭಾರತದೊಳು ಬಲಭೀಮನೊ ಶ್ರೀಮಧ್ವ ರಾಯರಾಯ
ಶ್ರೀನಿವಾಸ ವಿಠಲಯ್ಯ ಒಲಿದ ಶ್ರೀಮಹನೀಯ (೨)

ಭಜಿಸಿರೊ ಇವನೆಮ್ಮ ದೇವ ಶ್ರೀಹನುಮ
ಇವನೊಲಿಯಲು ಅವನೊಲಿವನೊ ರಾಮ ಶ್ರೀರಾಮ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೧೧.೨೦೧೧

Saturday, November 19, 2011

Shri Krishnana Nooraru Geethegalu - 185


ಶ್ರೀಗೊಲ್ಲ

ಹರಿಹರಿಹರಿಯೆಂದು ಗಿರಗಿರ ಗಿರಿಗಳ
ಅಲೆವುದನು ನಿಲಿಸೊ
ಅಖಿಲಾಂಡನೊ ಹರಿ ಆಕಾರರಹಿತನ
ಆತ್ಮದೊಳು ಭಜಿಸೊ

ಕಟ್ಟೆಯ ಕೆರೆಯೊಳು ಗಳಗಳ ಮುಳುಗಲು
ಒಲಿಯನೊ ಜಲರೂಪಿ
ನಾಸಿಕ ನೇತ್ರವ ಬಂಧಿಸಿ ಉಣದಿರಲು
ನಗುವನೊ ಜಗವ್ಯಾಪಿ (೧)

ಗೀಟಿನ ನಾಮದ ಗರಿಜರಿ ಕುಣಿತವ
ಒಲ್ಲನೊ ಬಹುರೂಪಿ
ಸೊಟ್ಟನೆ ಮನವದು ಇಟ್ಟ ನೈವೇದ್ಯವ
ಒಪ್ಪನೊ ಕುರುಕೋಪಿ (೨)

ದೊಂಬರವಿಲ್ಲದ ದುಂಬಿಯ ಬಕುತಿಗೂ
ನಲಿವನೊ ಶ್ರೀಗೊಲ್ಲ
ಶ್ರೀನಿವಾಸ ವಿಠಲನ ಅರಿಯದ ಹುಂಬಗೆ
ಎಂದಿಗೂ ಮಣಿಯೊಲ್ಲ (೩)

ಹರಿಹರಿಹರಿಯೆಂದು ಗಿರಗಿರ ಗಿರಿಗಳ
ಅಲೆವುದನು ನಿಲಿಸೊ
ಅಖಿಲಾಂಡನೊ ಹರಿ ಆಕಾರರಹಿತನ
ಆತ್ಮದೊಳು ಭಜಿಸೊ

   ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೧೧.೨೦೧೧

Tuesday, November 15, 2011

Shri Krishnana Nooraru Geethegalu - 184

ಭಜಿಸಿರೊ ಕೃಷ್ಣನ

ಭಜಿಸಿರೊ ಕೃಷ್ಣನ ಮೂಜಗವಂದ್ಯನ
ದುರಿತ ನಿವಾರಣ ಶ್ರೀಮೂಲರಾಮನ

ವಸುದೇವ ಕಂದನ ಯದುಕುಲ ನಂದನನ
ನಂದಗೋಪನ ತೋಳ ತೊಟ್ಟಿಲೊಳಾಡುವನ
ಮಾತೆ ಯಶೋದೆಗೆ ತ್ರಿಜಗವ ತೋರಿದನ
ಗೋಕುಲ ಗೋಪಾಲ ಗೋವಿಂದ ದೇವನ (೧)

ದಶಶಿರನೆದೆ ಮೆಟ್ಟಿ ಧರ್ಮವ ಗೆಲಿಸಿದನ
ಕುರುಜನ ಕ್ರೌರ್ಯವ ನಯದೊಳು ಹರಿಸಿದನ
ನಾರಾಯಣನೆನುವ ನರಕುಲ ಸಲಹುವನ
ಶ್ರೀನಿವಾಸ ವಿಠಲ ದಶಮುಖ ದೇವನ (೨)

ಭಜಿಸಿರೊ ಕೃಷ್ಣನ ಮೂಜಗವಂದ್ಯನ
ದುರಿತ ನಿವಾರಣ ಶ್ರೀಮೂಲರಾಮನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೧.೨೦೧೧

Monday, November 7, 2011

Shri Krishnana Nooraru Geethegalu - 183

ಏನೊ ಕಾರಣವರಿಯೆ

ಏನೊ ಕಾರಣವರಿಯೆ ಕೃಷ್ಣನೊಲಿಯನೊ ಎನಗೆ
ಪಡೆವ ಬಗೆ ಬಲ್ಲಿದರೆ ಪೇಳಿರಯ್ಯ

ಹಲವು ಜಲದೊಳು ಮಿಂದೆ ಏಕಪಾದದಿ ನಿಂದೆ
ಮೈಮಡಿಗೆ ಜಗದೊಡೆಯನೊಲಿಯಲಿಲ್ಲ
ಮಸ್ತಕಕೆ ಮೊಗೆಮೊಗೆದು ಕ್ಷೀರವರ್ಷವನೆರೆದೆ
ಶ್ರೀಶವದನದೆ ಹರುಷ ಹಾಡಲಿಲ್ಲ (೧)

ಬಗೆಬಗೆಯ ಫಲಪುಷ್ಪ ಗಂಧಧೂಪಾರತಿಯ
ಹಚ್ಚಿದೊಡೆ ಸ್ವಚ್ಛನವ ಮೆಚ್ಚಲಿಲ್ಲ
ಸ್ವರ್ಣ ರಜತಾದಿ ಜರಿಯಪಟ್ಟೆಯನ್ನುಟ್ಟ
ಶಿಲೆಯೊಳಗೆ ಶ್ರೀಪಾದನಿರಲೇ ಇಲ್ಲ (೨)

ಗಿರಿಯ ಶಿಖರವದೇರಿ ನಾಸಿಕವ ಬಂಧಿಸಿದೆ
ಭಕ್ತವತ್ಸಲ ಹರಿಯು ಬರಲೇ ಇಲ್ಲ
ಮನವಿರದೆ ಬರಿಮೈಯ್ಯ ಮರ್ಕಟನ ಆಟಕ್ಕೆ
ಶ್ರೀನಿವಾಸ ವಿಠಲಯ್ಯ ಮಣಿಯಲಿಲ್ಲ (೩)

ಏನೊ ಕಾರಣವರಿಯೆ ಕೃಷ್ಣನೊಲಿಯನೊ ಎನಗೆ
ಪಡೆವ ಬಗೆ ಬಲ್ಲಿದರೆ ಪೇಳಿರಯ್ಯ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೧೧.೨೦೧೧

Saturday, November 5, 2011

Shri Krishnana Nooraru Geethegalu - 182

ಶ್ರೀಹರಿ ನಿನ್ನವನೊ

ಹರಿ ಎನ್ನವನೊ ಶ್ರೀಹರಿ ನಿನ್ನವನೊ
ಹರಿಹರಿಯೆನುವರ ಒಡಲೊಳಗಿಹನೊ

ಮಡಿಯನು ತಿಳಿಯನೊ ಮೈಲಿಗೆಯರಿಯನೊ
ಮೇಲುಕೀಳೆಂಬೊ ತಾಳಕೆ ಕುಣಿಯನೊ
ಗೋಟುನಾಮವನಿಟ್ಟು ಬರಿಸಟೆಯಾಡುವರ
ಮಂಗಾಟ ಕಂಡೆಮ್ಮ ಕೃಷ್ಣಯ್ಯ ನಗುವನೊ (೧)

ತೆಂಗನು ಒಲ್ಲನೊ ಬಾಳೆಯನೊಲ್ಲನೊ
ಕರ್ಪೂರ-ಕಾಣಿಕೆ ಅವ ಮೊದಲೊಲ್ಲನೊ
ಮಾತಿನ ಮಂತ್ರದ ಗಡಿಬಿಡಿ ಗಣಿತದ
ಎಣಿಕೆಗೆ ನಿಲುಕನೊ ಗೋಪಾಲ ಗೊಲ್ಲನೊ (೨)

ದೀನರ ದೇವನೊ ಶುದ್ಧಗೆ ಒಲಿವನೊ
ಗತಿ ನೀನೆನುವರ ಸಂಗದಿ ನಲಿವನೊ
ತೋರಿಕೆಯದ ತೊರೆದು ನೇರಿಕೆಯೊಳು ನಡೆಯೆ
ಶ್ರೀನಿವಾಸ ವಿಠಲಯ್ಯ ಕರೆದಲ್ಲಿ ಬರುವನೊ (೩)

ಹರಿ ಎನ್ನವನೊ ಶ್ರೀಹರಿ ನಿನ್ನವನೊ
ಹರಿಹರಿಯೆನುವರ ಒಡಲೊಳಗಿಹನೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೧೧.೨೦೧೧

Wednesday, November 2, 2011

Shri Krishnana Nooraru Geethegalu - 181

ಕೃಷ್ಣ ವನಮಾಲಿ

ಕೃಷ್ಣ ವನಮಾಲಿ ಶ್ರೀಹರಿ ಕೃಷ್ಣ ವನಮಾಲಿ
ಮನುಕುಲ ಮಾನಸ ಚಿತ್ತವಿಹಾರಿ

ಶ್ರೀಮೂಲರಾಮಂ ಜಯ ಮೇಘಶ್ಯಾಮಂ
ಸೃಷ್ಟಿಸ್ಥಿತಿಲಯ ಸೂತ್ರಧಾರಂ
ಜಗದೋದ್ಧಾರಕ ದಶಮುಖದೇವಂ
ಶ್ರೀನಾರಾಯಣ ಶ್ರೀನಿವಾಸ ವಿಠಲಂ

ಕೃಷ್ಣ ವನಮಾಲಿ ಶ್ರೀಹರಿ ಕೃಷ್ಣ ವನಮಾಲಿ
ಮನುಕುಲ ಮಾನಸ ಚಿತ್ತವಿಹಾರಿ
  
    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೧೧.೨೦೧೧

Sunday, October 30, 2011

Shri Krishnana Nooraru Geethegalu - 180

ಶ್ರೀಪಂಚವದನಂ

ದೇವಾದಿದೇವಂ ಶ್ರೀಮುಖ್ಯಪ್ರಾಣಂ
ಪಾಲಿಸೈ ಪವನಸುತ ಶ್ರೀಪಂಚವದನಂ

ಶ್ರೀಬಾಲಸೂರ್ಯಂ ಭೀಮಸಹಾಯಂ
ಬಕುತಜನಮಂದಾರ ಬಲಸಿದ್ಧಿದಾಯಂ
ದುರಿತಕುಲಸಂಹಾರ ದಶಬಾಹುದೇವಂ
ದೀನಜನ ಕರುಣ ಶ್ರೀಧೀರಾಧಿಧೀರಂ (೧)

ಶ್ರೀಮಹಾತೇಜಂ ಮಹಾಕಾಯದೇವಂ
ಮಾರುತಾತ್ಮಜ ಶ್ರೀಮನೋಜವಾಯಂ
ಕೇಸರಿಸುತ ವಂದೇ ಕಪಿಸೇನಾನಾಯಕಂ
ಲಂಕಿಣಿಭಂಜನನೆ ಮೂಲೋಕಪೂಜ್ಯಂ (೨)

ನಮೊ ಹನುಮದೇವಂ ಶ್ರೀರಾಮದೂತಂ
ಜಾನಕೀ ಶೋಕಹರ ಜೀವ ಸಂಜೀವಂ
ದ್ವಾಪರನೆ ಭೀಮಯ್ಯ ಮಧ್ವಾದಿರಾಯಂ
ಶ್ರೀನಿವಾಸ ವಿಠಲನ ಶ್ರೀಪಾದ ಸೇವಕಂ (೩)

ದೇವಾದಿದೇವಂ ಶ್ರೀಮುಖ್ಯಪ್ರಾಣಂ
ಪಾಲಿಸೈ ಪವನಸುತ ಶ್ರೀಪಂಚವದನಂ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೧೦.೨೦೧೧

Thursday, October 27, 2011

Shri Krishnana Nooraru Geethegalu - 179

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ ನಿಜ
ನಿನ್ನೊಳ ಕೊಳೆಯದ ತೊಳಕೊಳ್ಳೊ
ಮನವೆಂಬೊ ಗುಡಿಯೊಳ ಗೋಡೆಗೋಪುರಕೆ
ಶುದ್ಧದ ಸುಣ್ಣವ ಬಳಕೊಳ್ಳೊ

ನಾನೆಂಬೊ ಕೂಳನ ಹೊರತಳ್ಳೊ ನಿಜ
ಆರೆಂಬೊ ಅಸುರರ ನೀ ಕೊಲ್ಲೊ
ಮಡಿಮೈಲಿಗೆಯೆಂಬೊ ಗಡಿಬಿಡಿ ಬದಿಗಿಡೊ
ಇಹದೀ ಮೋಹವ ಕಳಕೊಳ್ಳೊ (೧)

ಬಾಡಿಗೆ ಕಾಯವೊ ಬರಕೊಳ್ಳೊ ನಿಜ
ಅವನೇ ದಾತನು ತಿಳಕೊಳ್ಳೊ
ಶ್ರೀನಿವಾಸ ವಿಠಲನ ಸಿರಿ ಶ್ರೀಪಾದವ
ಬಿಡದೇ ಎಂದೆಂದು ಹಿಡಕೊಳ್ಳೊ (೨)

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ
ನಿನ್ನೊಳ ಕೊಳೆಯದ ತೊಳಕೊಳ್ಳೊ
ಮನವೆಂಬೊ ಗುಡಿಯೊಳ ಗೋಡೆಗೋಪುರಕೆ
ಶುದ್ಧದ ಸುಣ್ಣವ ಬಳಕೊಳ್ಳೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೧೦.೨೦೧೧

Tuesday, October 25, 2011

Shri Krishnana Nooraru Geethegalu - 178


ರಾಧೆಯವಳು ನಿಜದಿ ಮುಗುದೆ

ರಾಧೆಯವಳು ನಿಜದಿ ಮುಗುದೆ ಕೃಷ್ಣನಿವನೆ ಚೋರ
ಅರಿಯದವಳ ಹೃದಯ ವನಕೆ ಲಗ್ಗೆಯಿಟ್ಟ ಪೋರ

ಗೋಕುಲದ ತಂಗಾಳಿ ನುಡಿದಿದೆ ಗೋಪಮ್ಮನ ಕಂದನು
ಮಾನಿನಿಯರ ಮನದ ಕದವ ಮೆಲ್ಲಮೆಲ್ಲ ತೆರೆವನೊ
ಮುರಳಿಮೋಹನ ಮದನಮಾಧವ ಚೆಲುವರೊಳಗೆ ಚೆಲ್ವನು
ಮೋಡಿಗಾರ ಮುದ್ದುಕೃಷ್ಣ ರಾಧೆ ನಿದಿರೆ ಕದಿವನೊ (೧)

ಬಲ್ಲೆನಯ್ಯ ಬೆಡಗಿ ಇವಳೊ ಬೃಂದಾವನದ ಚೆಲುವೆಯೊ
ನಸುನಕ್ಕರೆ ಸವಿಸಕ್ಕರೆ ಪೂರ್ಣಚಂದಿರ ವದನೆಯೊ
ಒಲುಮೆ ವೀಣೆಯ ಮೀಟಿ ಕರೆವಳೊ ವಿರಹಗಾನವ ಪಾಡುತ
ಶ್ರೀನಿವಾಸ ವಿಠಲ ಬರುವನೊ ರಾಧೆ ಮಿಲನಕೆ ಓಡುತ (೨)

ರಾಧೆಯವಳು ನಿಜದಿ ಮುಗುದೆ ಕೃಷ್ಣನಿವನೆ ಚೋರ
ಅರಿಯದವಳ ಹೃದಯ ವನಕೆ ಲಗ್ಗೆಯಿಟ್ಟ ಪೋರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೦.೨೦೧೧

Monday, October 24, 2011

Shri Krishnana Nooraru Geethegalu - 177

ಶ್ರೀಕೃಷ್ಣ ಹರೆ

ಕೃಷ್ಣ ಹರೆ ಶ್ರೀಕೃಷ್ಣ ಹರೆ
ಮೂಜಗಪಾಲ ಶ್ರೀವಿಷ್ಣು ಹರೆ

ಯದುವಂಶಜ ಶ್ರೀಯದುಕುಲನಂದನ
ಯಮುನಾಪುರವಾಸ ಕೃಷ್ಣ ಹರೆ
ವಸುದೇವಸುತ ಶ್ರೀದೇವಕಿ ಗರ್ಭನೆ
ನಂದಗೋಪಿಯ ಕಂದ ಕೃಷ್ಣ ಹರೆ (೧)

ಬೃಂದಾವನ ಬಾಲ ಗೋಕುಲ ಗೋಪಾಲ
ನವನೀತಚೋರ ಶ್ರೀಕೃಷ್ಣ ಹರೆ
ರಾಧಾ ಮನಚೋರ ಗೋವರ್ಧನಧರ
ಗಾನಗಂಭೀರಮಾರ ಕೃಷ್ಣ ಹರೆ (೨)

ದ್ವಾರಕಾಧೀಶ ಶ್ರೀಧರಣೀಶ ಶ್ರೀಶ
ಸುಜನ ಸುಪಾಲಕ ಕೃಷ್ಣ ಹರೆ
ದುರಿತ ಸಂಹಾರಕ ಸುಜನ ಸಂರಕ್ಷಕ
ಜಗದೋದ್ಧಾರಕ ಕೃಷ್ಣ ಹರೆ (೩)

ತ್ರೇತಾ ರಾಮನೆ ದ್ವಾಪರ ಶ್ಯಾಮನೆ
ಕಲಿವರದನೆ ಹರಿ ಕೃಷ್ಣ ಹರೆ
ಅಣುರೇಣುತೃಣಪಾಲ ಶ್ರೀನಿವಾಸ ವಿಠಲನೆ
ಕರುಣಾಳು ದೇವ ಶ್ರೀಕೃಷ್ಣ ಹರೆ (೪)

ಕೃಷ್ಣ ಹರೆ ಶ್ರೀಕೃಷ್ಣ ಹರೆ
ಮೂಜಗಪಾಲ ಶ್ರೀವಿಷ್ಣು ಹರೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೧೦.೨೦೧೧

Saturday, October 22, 2011

Shri Krishnana Nooraru Geethegalu - 176

ಜಯಜಯಕೃಷ್ಣ

ಜಯಜಯಕೃಷ್ಣ ಶ್ರೀದೇವಕಿ ಕೃಷ್ಣ
ನರಕುಲಪಾವನ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀವಸುದೇವ ಕೃಷ್ಣ
ದುರಿತ ಸಂಹಾರಕ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀಗೋಕುಲ ಕೃಷ್ಣ
ಸುಜನ ಸುಪಾಲಕ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀಮೋಹನ ಕೃಷ್ಣ
ರಾಧಾ ಮಾಧವ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀದಶದೇವ ಕೃಷ್ಣ
ಶ್ರೀನಿವಾಸ ವಿಠಲ ನಾರಾಯಣ ಕೃಷ್ಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೦.೨೦೧೧

Tuesday, October 18, 2011

Shri Krishnana Nooraru Geethegalu - 175

ಕೋಲನ್ನಾಡು ಬಾರೊ

ಕೋಲನ್ನಾಡು ಬಾರೊ ರಂಗ ಕೋಲನ್ನಾಡು ಬಾರೊ

ಸುಂದರ ಸಗ್ಗದ ಬೃಂದಾವನದಿ
ಯುಗದ ಜಗದ ಸಖನೆ ಮುದದಿ
ಗೋಕುಲ ಚೆಲ್ವೇರ ಚಂದುಳ್ಳಿ ಸಂಗದಿ
ನಂದಗೋಪಿಯ ಆನಂದ ಕಂದ (೧)

ರಾಧೆಯ ನಯನದೆ ನಯನವನಿರಿಸಿ
ಹೃದಯದ ವಿರಹವ ಚುಂಬಿಸಿ ರಮಿಸಿ
ಗೆಜ್ಜೆಯ ಹೆಜ್ಜೆಯ ಸಮದೊಳಗಿರಿಸಿ
ಮೋಹನ ಮಾಧವ ಶ್ರೀಕೃಷ್ಣ ಸರಸಿ (೨)

ದಶವರ್ಣದ ಕೋಲ ದಶರೂಪದೊಳಗೆ
ಧರ್ಮದೊಳಾಡುತ ಧರೆಯ ಕಾದವನೆ
ಶ್ರೀರಾಯರಾಯನೆ ಶ್ರೀನಿವಾಸ ವಿಠಲನೆ
ನರಕುಲ ಸಂಜೀವ ಶ್ರೀಮಧ್ವರೊಡೆಯನೆ (೩)

ಕೋಲನ್ನಾಡು ಬಾರೊ ರಂಗ ಕೋಲನ್ನಾಡು ಬಾರೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೧೦.೨೦೧೧

Sunday, October 16, 2011

Shri Krishnana Nooraru Geethegalu - 174

ಸುಗುಣೋದ್ಧಾಮ

ಜಯ ಜಯ ರಾಮ ಜಯ ಶ್ರೀರಾಮ
ಶುಭಮಂಗಳಕರ ರಘುಕುಲಸೋಮ

ಉತ್ತಮ ರಾಮ ಪುರುಷೋತ್ತಮ ರಾಮ
ಅಕ್ಷಯವರದ ಸುಗುಣೋದ್ಧಾಮ
ಶಿಕ್ಷಕ ರಾಮ ಪರೀಕ್ಷಕ ರಾಮ
ನೆಚ್ಚಿದ ಸುಜನ ಸುರಕ್ಷಕ ರಾಮ (೧)

ಮಾನ್ಯನೊ ರಾಮ ಸನ್ಮಾನ್ಯನೊ ರಾಮ
ಜನಕಸುತೆ ಮಾತೆ ಜಾನಕಿ ಪ್ರೇಮ
ಶ್ಯಾಮನೊ ರಾಮ ಅಕ್ಷಾಮನೊ ರಾಮ
ಶ್ರೀನಿವಾಸ ವಿಠಲನ ಶ್ರೀಆದಿನಾಮ (೨)

ಜಯ ಜಯ ರಾಮ ಜಯ ಶ್ರೀರಾಮ
ಶುಭಮಂಗಳಕರ ರಘುಕುಲಸೋಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೧೦.೨೦೧೧

Saturday, October 15, 2011

Shri Krishnana Nooraru Geethegalu - 173

ಶ್ರೀಹರಿಯೆ ಕೃಷ್ಣ

ನೀನಿರದೆ ನಾನ್ಯಾರೊ ನಿನ್ನದೀ ಅವನಿಯೊಳು
ನಿನ್ನಿಂದಲೆನ್ನಿರುವೊ ಶ್ರೀಹರಿಯೆ ಕೃಷ್ಣ

ಈ ಬುವಿಯು ನಿನ್ನದೊ ಭಾನು ರವಿ ಸೋಮ
ಜಲವಾಯು ಚರಾಚರಕೆ ನೀ ಜೀವಕಾಮ
ಅಖಿಲಾಂಡನು ನೀನೊ ಅಣುವಿನೊಳ ಅಣುವು ನಾ
ಕರುಣದೊಳು ಕಾಯೆಮ್ಮ ಗೋವಿಂದ ಕೃಷ್ಣ (೧)

ಮತ್ಸ್ಯರೂಪನೊ ನೀನು ವರಾಹಾದಿಕೂರ್ಮನೊ
ಪರಶುಧರ ನರಸಿಂಹ ನಾರಾಯಣ
ಹಲವು ರೂಪದೊಳುದಿಸಿ ಸುಜನ ಶಾಪವನಳಿಸಿ
ನರಕುಲವನುಳಿಸಿದನೆ ದಶದೇವ ಕೃಷ್ಣ (೨)

ತ್ರೇತೆಯೊಳ ಮೂಲರಾಮ ದ್ವಾಪರದೆ ಮೇಘಶ್ಯಾಮ
ಮುಖ್ಯಪ್ರಾಣ ಮಧ್ವಾದಿ ರಾಯರಾಯ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲಯ್ಯ
ಸಕಲರೊಳು ಸಲಹೆನ್ನ ಸುಖದೊಳಗೆ ಕೃಷ್ಣ (೩)

ನೀನಿರದೆ ನಾನ್ಯಾರೊ ನಿನ್ನದೀ ಅವನಿಯೊಳು
ನಿನ್ನಿಂದಲೆನ್ನಿರುವೊ ಶ್ರೀಹರಿಯೆ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೦.೨೦೧೧

Friday, October 14, 2011

Shri Krishnana Nooraru Geethegalu - 172


ಬೃಂದಾವನ ದೊರೆಯೆ


ಕಲಿಯುಗದೆ ಕಾಮಧೇನು ಕಲ್ಪವೃಕ್ಷ ಶ್ರೀಗುರುವೆ
ಮೊರೆಬಂದೆ ನಿನ್ನ ಪಾದ ಬೃಂದಾವನ ದೊರೆಯೆ

ಕಾರ್ಯಕಾರಣ ನೀನೊ ನಾನಿಲ್ಲಿ ಬರೀ ಶೂನ್ಯ
ಸಕಲ ಪಾಲಕ ಗುರುವೆ ನೀನೇ ಜಗಮಾನ್ಯ
ಬಕುತಜನ ಭವಹರನೆ ಭುವನಗಿರಿ ಗುರುರಾಯ
ಬೇಡುವೆನು ಕರುಣದೊಳು ಕಾಯೊ ಮಹನೀಯ (೧)

ಧರ್ಮ ಕಾವನು ನೀನೊ ಧರೆಯ ಸಲಹುವ ದೇವ
ಶ್ರೀರಾಮ ಗುಣಧಾಮ ಶ್ರೀರಾಘವೇಂದ್ರ
ಅಸುರಹಾರಕ ಗುರುವೆ ಶುಭವರವ ಕರುಣಿಸೊ
ಶ್ರೀಮಧ್ವಮತ ಸೋಮ ಕಾಯೊ ಯೋಗೇಂದ್ರ (೨)

ಸುಮತೀಂದ್ರ ಯತಿ ನೀನೊ ಮತಿಯಿರದಿ ಮೂಢಂಗೆ
ಎನ್ನನ್ಯವನು ಕ್ಷಮಿಸೊ ಭುವನವಂದ್ಯ
ಶ್ರೀನಿವಾಸ ವಿಠಲನ ಪದಪದ್ಮ ಶ್ರೀಗುರುವೆ
ನರಕದೊಳು ನಾಕವಿಡೊ ಬದುಕಸಂಧ್ಯಾ (೩)

ಕಲಿಯುಗದೆ ಕಾಮಧೇನು ಕಲ್ಪವೃಕ್ಷ ಶ್ರೀಗುರುವೆ
ಮೊರೆಬಂದೆ ನಿನ್ನ ಪಾದ ಬೃಂದಾವನ ದೊರೆಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೧೦.೨೦೧೧

Thursday, October 13, 2011

Shri Krishnana Nooraru Geethegalu - 171

ಶಿಷ್ಟ ಸುರಕ್ಷ

ಮಾತೆ ಗೋಪಿಯ ಮಮತೆ ತೋಳೊಳು ನಲಿವನೆ ಶ್ರೀಕೃಷ್ಣ
ಅಮ್ಮ ಲಕುಮಿಯ ಸರಸಾಂಗ ರಂಗನೆ ಕಾಯೊ ಶಿಷ್ಟ ಸುರಕ್ಷ

ನಲುಮೆ ಗೆಲುಮೆಯ ಚಿಲುಮೆ ನೀನೊ ಮಾತೆಯೊಲವದ ಧರಿಸೊ
ಸಕಲ ಸುಜನ ಸುಪಾಲ ಕೃಷ್ಣನೆ ನಿನ್ನೊಲುಮೆಯ ಅನುಗ್ರಹಿಸೊ (೧)

ತ್ರೇತೆಯೊಳು ಮುಖ್ಯಪ್ರಾಣಗೆ ಶಬರಿಗೊಲಿದ ಒಲುಮೆಯ
ದ್ವಾಪರದೊಳು ಧರ್ಮದೈವಗೆ ನೀ ಹರಸಿದ ಗೆಲುಮೆಯ (೨)

ಧರೆಯೊಳಗೆ ಕಲಿಯೊಡೆಯನೆ ಶ್ರೀನಿವಾಸ ವಿಠಲ ರಾಯ
ನೆಚ್ಚಿಬಂದ ನರರೊ ನಾವು ಮೆಚ್ಚಿ ಎಮ್ಮ ಸಲಹೆಯಾ? (೩)

ಮಾತೆ ಗೋಪಿಯ ಮಮತೆ ತೋಳೊಳು ನಲಿವನೆ ಶ್ರೀಕೃಷ್ಣ
ಅಮ್ಮ ಲಕುಮಿಯ ಸರಸಾಂಗ ರಂಗನೆ ಕಾಯೊ ಶಿಷ್ಟ ಸುರಕ್ಷ

            ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೧೦.೨೦೧೧

Tuesday, October 11, 2011

Shri Krishnana Nooraru Geethegalu - 170

ನರಿಯು ಮಜ್ಜನ ಮಾಡಿತೊ

ನರಿಯು ಮಜ್ಜನ ಮಾಡಿತೊ ನರಿಹರಿ
ನರಿಯು ಮಜ್ಜನ ಮಾಡಿತೊ

ಕೇಡ ಬಗೆಯೇನೆಂದು ಊರ ಹೊಳೆಗೆ ಬಂದು
ಗಂಧ ಸುಗಂಧದ ಮಾರ್ಜಕ ತಂದು
ಒಳಶುದ್ಧಿ ಅರಿಯದೆ ಬರಿ ತೊಗಲನೆ ತೊಳೆದು
ಶುದ್ಧಾತಿ ಪರಿಶುದ್ಧ ತಾನೆಂದು ಪಾಡುತ (೧)

ಪಟ್ಟೆಬಟ್ಟೆಯನುಟ್ಟು ಗೋಟುನಾಮವನಿಟ್ಟು
ಉಗ್ರುಪವಾಸದ ಪಣವನು ತೊಟ್ಟು
ವಣಮಂತ್ರ ವಟಗುಡುತ ಒಳಹಲ್ಲ ಮಸೆಯುತ
ಧನ್ಯಾತಿ ಧನ್ಯನು ತಾನೆಂದು ತೋರುತ (೨)

ಆರೆಂಬೊ ಅಸುರರು ಆಸೆಮಾಂಸವ ಸುಟ್ಟು
ಬಡಿಯೆ ನಾಸಿಕಕೆ ನರಿಯದು ದಿಕ್ಕೆಟ್ಟು
ಠುಸ್ಸಾಯ್ತೊ ಠಕ್ಕನ ಪಾರಮಾರ್ಥದ ಗುಟ್ಟು
ಓಡಿತೊ ಶ್ರೀನಿವಾಸ ವಿಠಲನ್ನೇ ಬಿಟ್ಟು (೩)

ನರಿಯು ಮಜ್ಜನ ಮಾಡಿತೊ ನರಿಹರಿ
ನರಿಯು ಮಜ್ಜನ ಮಾಡಿತೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೧

Saturday, October 8, 2011

Shri Krishnana Nooraru Geethegalu - 169

ವೈಣಿಕ ನೀ ನುಡಿಸೊ

ಹರಿಹರಿ ಹರಿಯೆನ್ನ ನರಹರಿಯೆ ಕೃಷ್ಣ
ಎನ್ನೊಳು ನೀ ನೆಲೆಸೊ
ಜೀವವು ನಿನ್ನದೊ ಜೀವನರಾಗವೂ
ಹರಿಯೆನುವುದ ಕಲಿಸೊ

ಹೃದಯವೆನ್ನಯ ಗುಡಿಯು ನಿನ್ನದೈ ಕೃಷ್ಣ
ದೇವನೆ ನೀ ನೆಲೆಸೊ
ಅಣುದೇಹದೀ ಪ್ರಾಣ ವೀಣೆ ನಿನ್ನದೋ ಕೃಷ್ಣ
ವೈಣಿಕ ನೀ ನುಡಿಸೊ (೧)

ನಿನ್ನ ಕೈಯೊಳ ಬೊಂಬೆಯೊ ನಾ ಕೃಷ್ಣ
ಬಲ್ಲಿದ ನೀ ಕುಣಿಸೊ
ಶ್ರೀನಿವಾಸ ವಿಠಲನೆ ಗೋಕುಲ ಕೃಷ್ಣಯ್ಯ
ಶ್ರೀಪಾದವ ತೋರಿಸೊ (೨)

ಹರಿಹರಿ ಹರಿಯೆನ್ನ ನರಹರಿಯೆ ಕೃಷ್ಣ
ಎನ್ನೊಳು ನೀ ನೆಲೆಸೊ
ಜೀವವು ನಿನ್ನದೊ ಜೀವನರಾಗವೂ
ಹರಿಯೆನುವುದ ಕಲಿಸೊ


ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೧೦.೨೦೧೧

Thursday, October 6, 2011

Shri Krishnana Nooraru Geethegalu - 168

ಅವನೀಶ ಹೃದಯೆ

ಕ್ಷೀರಾಬ್ಧಿಸುತೆಯೆ ಶ್ರೀಸರ್ವಮಂಗಳೆ ಲಕುಮಿ
ಅಣುರೇಣುತೃಣ ಕಾವ ಅವನೀಶ ಹೃದಯೆ

ಪದ್ಮೋದ್ಭವೆ ದೇವಿ ಪದ್ಮಸುಂದರಿಯೆ
ಪದ್ಮನಯನೆ ವರದೆ ಪುಣ್ಯಗಂಧಿನಿಯೆ
ವಿಮಲೆ ವಿಶ್ವಜನನಿ ವಿಷ್ಣುವಲ್ಲಭೆಯೆ
ಪಾಲಿಸೆಮ್ಮನು ತಾಯೆ ಸರ್ವಶುಭೆಯೆ (೧)

ಸಕಲಸಂಪದೆ ದೇವಿ ಸುರವಂದ್ಯೆ ಸಂಪ್ರೀತೆ
ಶಕ್ತಿದಾಯಿನಿ ಕರುಣಿ ಸಿರಿಜ್ಞಾನದಾತೆ
ಭಕ್ತವತ್ಸಲ ಹರಿಯ ನಿತ್ಯ ಸೇವಿಪ ಮಾತೆ
ಪಾಲಿಸೆಮ್ಮನು ತಾಯೆ ಮೂಲೋಕಪೂಜಿತೆ (೨)

ತ್ರೇತೆಯೊಳು ಶ್ರೀರಾಮ ಹೃದಯ ಜಾನಕಿಯೆ
ದ್ವಾಪರದೆ ಕೃಷ್ಣಯ್ಯನೊಲಿದ ರುಕ್ಮಿಣಿಯೆ
ಶ್ರೀನಿವಾಸ ವಿಠಲನ ಸರಸಾಂಗಿ ಸುಖಸತಿಯೆ
ಪಾಲಿಸೆಮ್ಮನು ತಾಯೆ ಜಗದೊಡತಿಯೆ (೩)

ಕ್ಷೀರಾಬ್ಧಿಸುತೆಯೆ ಶ್ರೀಸರ್ವಮಂಗಳೆ ಲಕುಮಿ
ಅಣುರೇಣುತೃಣ ಕಾವ ಅವನೀಶ ಹೃದಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೧೦.೨೦೧೧

Tuesday, October 4, 2011

Shri Krishnana Nooraru Geethegalu - 167

ಮನವ ನಿನ್ನೊಳು ನಿಲಿಸೊ

ಮನವ ನಿನ್ನೊಳು ನಿಲಿಸೊ ಮಾಧವ ಎನ್ನ
ಮನದ ತಮವ ಹರಿಸೊ

ಮೃಗಶಿರವೆನ್ನ ಚಿತ್ತ ನಿಲ್ಲದೊ ಒಂದತ್ತ
ಸಂಚಿನೊಳಾರೆಂಬೊ ಪಾಶ-ಮೋಹದ ಹುತ್ತ
ಹರಿ ನಿನ್ನ ಇರುವನೆ ಅರಿಯದೆ ಅತ್ತಿತ್ತ
ಚಂಚಲ ಕಾಲಿಂದಿ ಎನ್ನೊಳು ಬುಸುಗುಡುತ (೧)

ತ್ರೇತೆಯೊಳು ರಾವಣಗೆ ಕಾಮವಾಗೆರಗಿತ್ತೊ
ಜಾನಕಿಗೆ ಜಗನಿಂದೆ ಮಾಯೆಯಾಗಿತ್ತೊ
ಧರ್ಮದಂಬಿಗೆ ಬೆದರಿ ದೂರ ಓಡಿತ್ತೊ
ಶ್ರೀರಾಮ ಪಾದದೊಳು ಶರಣಾಗಿತ್ತೊ (೨)

ಕುರುಕುಲನ ದುರಿತದಾ ತೊಡೆಯೊಳಗಡಗಿತ್ತೊ
ದ್ರೌಪದಿಯ ಮಾನಕ್ಕೆ ಕೈಯ್ಯ ಚಾಚಿತ್ತೊ
ಹದಿನೆಂಟೆ ದಿನಗಳಲಿ ಅಂಕೆಯೊಳ ಬಂತೊ
ಶ್ರೀನಿವಾಸ ವಿಠಲಂಗೆ ಶಿರಬಾಗಿ ನಿಂತೊ (೩)

ಮನವ ನಿನ್ನೊಳು ನಿಲಿಸೊ ಮಾಧವ ಎನ್ನ
ಮನದ ತಮವ ಹರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೧೦.೨೦೧೧

Saturday, October 1, 2011

Shri Krishnana Nooraru Geethegalu - 166

ಜಯಜಯ ದುರ್ಗೆ

ಜಯಜಯ ದುರ್ಗೆ ಜಯ ಸನ್ಮಾರ್ಗೆ
ಮಂಗಳೆ ಮಾಂಗಲ್ಯೆ ಸುಜನ ಸುಸ್ವರ್ಗೆ

ಶಕ್ತಿಸ್ವರೂಪಿಣಿ ಭವಭಯಹಾರಿಣಿ
ಜಗದೋದ್ಧಾರಿ ಶ್ರೀರುದ್ರನರಾಣಿ
ಶಂಖಗದಾಶೂಲ ಸುಚಕ್ರಧಾರಿಣಿ
ಜಗಕಾರಣಿ ಕರುಣಿ ಕಾತ್ಯಾಯನಿ (೧)

ರುದ್ರೆ ಭಯಂಕರಿ ಭಾಸ್ಕರಿ ಶಂಕರಿ
ದುರುಳಾಸುರ ಮಹಿಷ ಸಂಹಾರಿ
ಕುಂಡಲಕರ್ಣೆ ಶ್ರೀನವರತ್ನಹಾರೆ
ನರಕುಲಪೋಷಿತೆ ಸುಖಸಿದ್ಧಿಧಾರೆ (೨)

ಶ್ರೀಲಕುಮಿಯೆ ವಂದೇ ವಾಗ್ದೇವಿಯೆ ವಂದೇ
ಮೂಜಗ ಕಾವ ಶ್ರೀದೇವಿಯೆ ವಂದೇ
ಶ್ರೀನಿವಾಸ ವಿಠಲನ ಅನುಜೆಯೆ ವಂದೇ
ಕರುಣದಿ ಸಲಹೆಮ್ಮ ಧರೆಯೊಳು ಮುಂದೆ (೩)

ಜಯಜಯ ದುರ್ಗೆ ಜಯ ಸನ್ಮಾರ್ಗೆ
ಮಂಗಳೆ ಮಾಂಗಲ್ಯೆ ಸುಜನ ಸುಸ್ವರ್ಗೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೧೦.೨೦೧೧

Friday, September 30, 2011

Shri Krishnana Nooraru Geethegalu - 165

ದುರ್ಗಾ-ವಾಣಿ-ವರ್ಷಿಣಿ

ಸಕಲ ಸುಶೋಭಿತೆ ಸುರವಂದ್ಯೆ ವಿನುತೆ
ಶಂಕರಿ ಶಾಂಭವಿ ಸಿರಿವರದಾತೆ
ಶ್ರೀರುದ್ರಾತ್ಮಿಕೆ ಶ್ರೀಹರಿಯನುಜೆ
ಕರುಣದಿಂ ಪಾಲಿಸೆ ಶ್ರೀದುರ್ಗೆ ಮಾತೆ (೧)

ವಂದೇ ವಾಗ್ದೇವಿ ಶೃಂಗೇರಿಪುರವಾಸಿ
ವೀಣಾಪಾಣಿಯೆ ವೈಷ್ಣವಿಯೆ
ಮಯೂರವಾಹಿನಿ ಸುಜ್ಞಾನದಾಯಿನಿ
ಸುಜನರ ಪೊರೆಯೆ ಸರಸ್ವತಿಯೆ (೨)

ಶಂಖಚಕ್ರಗದಾ ಶಕ್ತಿಸ್ವರೂಪಿಣಿ
ದುರಿತಸಂಹಾರಿ ಸಂಪದವರ್ಷಿಣಿ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲ
ಶ್ರೀಪಾದಸೇವಿತೆ ಸಲಹಮ್ಮ ಲಕುಮಿ (೩)

     ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೧

Wednesday, September 28, 2011

Shri Krishnana Nooraru Geethegalu - 164

ಮಾನಜನ ಮನದೇವ

ಸಲಹೊ ಸುಖದೊಳಗೆನ್ನ ಶ್ರೀಹರಿಯೆ
ಸಲಹಯ್ಯ ಸಲಹೆನ್ನ ಶುಭನಿಧಿಯೆ

ಕರೆತಂದವ ನೀನೊ ನೆಚ್ಚಿಬಂದವ ನಾನೊ
ಪೊರೆವುದೆನ್ನನು ದೇವ ನಿನ್ನ ಧರ್ಮ
ಜಗನೇಮಕ ನೀನೊ ತ್ರಿಜಗದೇವನೆ ಕೃಷ್ಣ
ಎನಗಾರೊ ನಿನ್ನನ್ಯವೆನುವ ಮರ್ಮ (೧)

ಮಾತೆ ಕೌಸಲ್ಯೆಯ ಮಡಿಲ ಮಮತೆಯ ಸುಖವ
ದ್ವಾಪರದೆ ದೇವಕಿಯ ಗರ್ಭದಾ ಸುಖವ
ನಂದಗೋಪಿಯ ತೋಳ ತೊಟ್ಟಿಲೊಳ ಅತಿಸುಖವ
ಉಂಡವನೆ ಸಲಹೆನ್ನ ಸೌಖ್ಯದೊಳು ಕೇಶವ (೨)

ತ್ರೇತೆಯೊಳು ಸುಜನರನು ಸಲಹಿದನೆ ರಾಮಯ್ಯ
ಗೋಕುಲದ ಮಾನಜನ ಮನದೇವ ಶ್ಯಾಮಯ್ಯ
ನರಕುಲವ ಧರಣಿಯೊಳು ಕರುಣದೊಳು ಕಾಯಯ್ಯ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲಯ್ಯ (೩)

ಸಲಹೊ ಸುಖದೊಳಗೆನ್ನ ಶ್ರೀಹರಿಯೆ
ಸಲಹಯ್ಯ ಸಲಹೆನ್ನ ಶುಭನಿಧಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೯.೨೦೧೧

Saturday, September 24, 2011

Shri Krishnana Nooraru Geethegalu - 163

ಕಾಯುವುದೊ ಕರುಣದೊಳು

ಕಾಯುವುದೊ ಕರುಣದೊಳು ಕಾಮನಯ್ಯನೆ ಎಮ್ಮ
ದಶದೊಳಗೆ ಧರಣಿಯನು ಸಲಹಿದನೆ ಕೃಷ್ಣ

ಕರಿಯದುವು ಆದಿಯೊಳು ಹರಿ ನೀನೆ ಗತಿಯೆನಲು
ಅರಿಯದೆ ಅಜಮಿಳನು ಹರಿ ಹರಿ ಹರಿಯೆನಲು
ಅಸುರಸುತ ಹರಿಯೆಂದು ಬಕುತಿಯೊಳು ಧ್ಯಾನಿಸಲು
ಆ ಕ್ಷಣವೇ ಅವತರಿಸಿ ಹರಿಸಿದನೆ ಕೃಷ್ಣ (೧)

ಪಾಂಡವರು ಧರ್ಮವನು ಗೆಲಿಸೊ ಶ್ರೀಹರಿಯೆನಲು
ದ್ರೌಪದಿಯು ಮಾನವದ ಕಾಯೊ ಕೃಷ್ಣಯೆನಲು
ಮಥುರೆಯೊಳು ಮಾನಜನ ಹರಿಯೆಂದು ಮೊರೆಯಿಡಲು
ಅವಸರಿಸಿ ಅವತರಿಸಿ ಹರಿಸಿದನೆ ಕೃಷ್ಣ (೨)

ತ್ರೇತೆಯೊಳು ಹನುಮಯ್ಯ ದ್ವಾಪರದೆ ಭೀಮಯ್ಯ
ನೆಚ್ಚಿದೊಳು ಕಲಿಯೊಳಗೆ ಶ್ರೀಮಧ್ವರಾಯ
ಪೊರೆದವನೆ ಜಗದೊಡೆಯ ಶ್ರೀನಿವಾಸ ವಿಠಲಯ್ಯ
ಮೊರೆಬಂದೆ ಶ್ರೀಪಾದ ಕಾಯೊ ಮಹನೀಯ (೩)

ಕಾಯುವುದೊ ಕರುಣದೊಳು ಕಾಮನಯ್ಯನೆ ಎಮ್ಮ
ದಶದೊಳಗೆ ಧರಣಿಯನು ಸಲಹಿದನೆ ಕೃಷ್ಣ

       ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ದಿನಾಂಕ ೨೪.೦೯.೨೦೧೧

Friday, September 23, 2011

Shri Krishnana Nooraru Geethegalu - 162

ರಂಗ ವಿಠಲ

ರಂಗ ರಂಗ ರಂಗ ವಿಠಲ
ಪಾಂಡುರಂಗ ರಂಗ ವಿಠಲ

ಎನ್ನಂತರಂಗ ಜೀವತರಂಗ
ಪಾಂಡುರಂಗ ರಂಗ ವಿಠಲ
ವೇದಾಂಗಾಂಗ ಸುಜನಸಂಗ
ಪಾಂಡುರಂಗ ರಂಗ ವಿಠಲ (೧)

ತ್ರೇತೆಯೊಳು ರಾಮರಂಗ
ದ್ವಾಪರದೆ ಶ್ಯಾಮರಂಗ
ಶ್ರೀನಿವಾಸ ವಿಠಲ ದಶದೊಳು
ಎಮ್ಮ ಕಾವ ಪಾಂಡುರಂಗ (೨)

ರಂಗ ರಂಗ ರಂಗ ವಿಠಲ
ಪಾಂಡುರಂಗ ರಂಗ ವಿಠಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೯.೨೦೧೧

Thursday, September 22, 2011

Shri Krishnana Nooraru Geethegalu - 161

ಗಜವದನಂ ವಂದೇ

ಗಜವದನಂ ವಂದೇ ಗೌರಿತನಯಂ
ಸುರಗುಣವಂದಿತ ನಿಟಿಲಾಕ್ಷನಂದಂ

ಮೊರಕರ್ಣಂ ವಂದೇ ಮೂಷಕವಾಹನಂ
ಮಂಗಳಮೂರುತಿ ಮುಕ್ತಿಪ್ರದಾಯಕಂ
ಭಾರತಲಿಪಿಕಾರಂ ಮುನಿವ್ಯಾಸಪ್ರೇಮಂ
ಪಾರ್ವತಿಸುತ ವಂದೇ ಓಂಕಾರರೂಪಂ (೧)

ಗಜವಕ್ರಂ ವಂದೇ ಗಾನವಿನೋದಂ
ಬಾಲಚಂದ್ರ ಶ್ರೀಸಿದ್ಧಿ ಪ್ರಮೋದಂ
ಶ್ರೀಶಿವ ಪುತ್ರಂ ಸ್ಕಂದಾಪೂರ್ವಜಂ
ಶುಭಗುಣ ವಂದೇ ಶ್ರೀಆದಿದೇವಂ (೨)

ವಿಶ್ವಮುಖಂ ವಂದೇ ವಿಘ್ನನಿವಾರಕಂ
ವಿದ್ಯಾವಾರಿಧಿ ಸಿರಿವರದಾಯಕಂ
ಶ್ರೀನಿವಾಸ ವಿಠಲಾದಿ ದೇವಗಣಪೂಜಿತಂ
ಮೋದಕಪ್ರಿಯ ವಂದೇ ಸಲಹೋ ಸುಮುಖಂ (೩)

ಗಜವದನಂ ವಂದೇ ಗೌರಿತನಯಂ
ಸುರಗುಣವಂದಿತ ನಿಟಿಲಾಕ್ಷನಂದಂ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೯.೨೦೧೧

Shri Krishnana Nooraru Geethegalu - 160

ಶ್ರೀಸಿಗಂದೂರೇಶ್ವರಿ

ವಂದೇ ಶುಭದಾಯಿನಿ ದೇವಿ
ಶ್ರೀಸಿಗಂದೂರೇಶ್ವರಿ ಶಂಕರಿ

ಸುಂದರವದನೆ ಕುಂಕುಮಚಂದನೆ
ಸ್ಥಿರಮಾಂಗಲ್ಯೆ ಮಂಗಳವರ್ಷಿಣಿ
ಭವಭಯಹರೆ ಶ್ರೀದುರಿತಸಂಹಾರಿಣಿ
ಆದಿಶಕ್ತಿಯೆ ಮೂಜಗಪಾಲಿನಿ (೧)

ಸಸ್ಯಶ್ಯಾಮಲೆ ಸಹ್ಯಾದ್ರಿಸ್ಥಿತೆ ದೇವಿ
ತುಂಗಾತಟ ಪುಣ್ಯೆ ಶೃಂಗನಿವಾಸಿನಿ
ಶರಣರ ಸುಜನರ ಸುಖದೊಳು ಪೊರೆಯಮ್ಮ
ಶ್ರೀನಿವಾಸ ವಿಠಲನ ವೈಕುಂಠವಾಸಿನಿ (೨)

ವಂದೇ ಶುಭದಾಯಿನಿ ದೇವಿ
ಶ್ರೀಸಿಗಂದೂರೇಶ್ವರಿ ಶಂಕರಿ

(ದಿನಾಂಕ ೨೧.೦೯.೨೦೧೧ರಂದು ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ, ಸಿಗಂದೂರು ಶ್ರೀಕ್ಷೇತ್ರದಲ್ಲಿ ರಚಿಸಿದ್ದು.)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ.

Saturday, September 17, 2011

Shri Krishnana Nooraru Geethegalu - 159


ಮೊರೆ ಕೇಳೊ ಮಾಧವ

ಮೊರೆ ಕೇಳೊ ಮಾಧವ ಈ ರಾಧೆ ವಿರಹದಾ

ಸುಡುವೆನ್ನ ಎದೆಗೊಲವ ಮುರಳಿಯನು ಕೃಷ್ಣ

ತನುಮನಧನ ನೀನೊ ಮದನಮೋಹನ ಕೃಷ್ಣ

ಶ್ರೀನಿವಾಸ ವಿಠಲನೆ ಪ್ರೇಮಪಾಲಕ ಕೃಷ್ಣ

(ಶ್ರೀಮತಿ ಸುಲೇಖಾಭಟ್ ಹಾಡಿದ ರಾಗ ಪುರಿಯಾ ಕಲ್ಯಾಣ್ ಸ್ಫೂರ್ತಿಯಿಂದ)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೧

Shri Krishnana Nooraru Geethegalu - 158


ಧರಣಿ ಧರ್ಮಸಾರಥಿ

ರಾಮರಾಮರಾಮನೆನಿರೊ ರಾಮನಾಮವ ಪಾಡಿರೊ
ಅಳಿದು ಇಹದ ಕ್ಷಾಮ ಪೊರೆವ ಸುಗುಣ ಪ್ರೇಮಧಾಮ

ಕೌಸಲ್ಯೆಯ ಕಂದನಿವನೊ ಕರುಣಾಂಬುಧಿ ಮೂರುತಿ
ರಘುವಂಶಜ ರಾಮಚಂದಿರ ಧರಣಿ ಧರ್ಮಸಾರಥಿ
ಉತ್ತಮರೊಳು ಪುರುಷೋತ್ತಮ ರಾಮನಿವನ ಕಿರುತಿ
ಹಾಡಿಪೊಗಳಿರೊ ಆದಿದೇವನ ಒಲಿವನೆಮ್ಮ ಮಾರುತಿ (೧)

ದ್ವಾಪರದೊಳು ಗೋಪಾಲನು ಗೋಕುಲವನು ಕಾದನು
ಯದುವಂಶಜ ವಾಸುದೇವ ನಂದಗೋಪಿಯ ಕಂದನು
ದುರಿತ ಸಂಹಾರ ಕೃಷ್ಣ ಶರಣ ಸುಜನರ ಕಾವನು
ಹಾಡಿಪೊಗಳಿರೊ ರಾಧೆಶ್ಯಾಮನ ಒಲಿವ ಭೀಮರಾಯನು (೨)

ಕಲಿಯೊಳಗೆ ನಾರಾಯಣ ನರರ ಪೊರೆವ ದೇವನು
ವ್ಯಾಸವಾದಿರಾಯ ರೂಪದಿ ಧರೆಯ ಸಲಹುತಿರುವನು
ಹರಿ-ವಾಯು-ಗುರುವೆಮಗೆ ಶ್ರೀನಿವಾಸ ವಿಠಲನು
ಹಾಡಿಪೊಗಳಿರೊ ದಶದದೇವನ ಒಲಿವ ಮಧ್ವರಾಯನು (೩)

ರಾಮರಾಮರಾಮನೆನಿರೊ ರಾಮನಾಮವ ಪಾಡಿರೊ
ಅಳಿದು ಇಹದ ಕ್ಷಾಮ ಪೊರೆವ ಸುಗುಣ ಪ್ರೇಮಧಾಮ

     ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೧

Thursday, September 15, 2011

Shri Krishnana Nooraru Geethegalu - 157

ನಾ ನೀನಾಗುವ

ನೀ ಎಮ್ಮವನೊ ನಾ ನಿನ್ನವನೊ
ನಾ ನೀನಾಗುವ ಪರಿಯೆನಿತೊ ಕೃಷ್ಣ

ಎನ್ನೊಳ ನಾನು ನಿನ್ನೊಳು ಬಾಗುವ
ನಾ ನೀನಾಗುವ ಪರಿಯೆನಿತೊ ಕೃಷ್ಣ

ನಾನು ನಗಣ್ಯನಾಗಿ ನೀನಾಗ್ರಗುಣನಾಗಿ
ನಾ ನೀನಾಗುವ ಪರಿಯೆನಿತೊ ಕೃಷ್ಣ

ನಾನು ನಶ್ವರವಾಗಿ ನೀ ಈಶ್ವರನಾಗಿ
ನಾ ನೀನಾಗುವ ಪರಿಯೆನಿತೊ ಕೃಷ್ಣ

ಶ್ರೀನಿವಾಸ ವಿಠಲನೆ ನೀ ನಾ ಎಲ್ಲವಾಗಿ
ಶ್ರೀಪಾದಸೇವೆಯ ಬಗೆಯೆನಿತೊ ಕೃಷ್ಣ

ನೀ ಎಮ್ಮವನೊ ನಾ ನಿನ್ನವನೊ
ನಾ ನೀನಾಗುವ ಪರಿಯೆನಿತೊ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೯.೨೦೧೧

Sunday, September 11, 2011

Shri Krishnana Nooraru Geethegalu - 156

ಜಗಕಾರುಣ ಕರುಣ

ಕಂಡಿರೇನಯ್ಯ ಎಮ್ಮ ಜಗವಂದ್ಯನ
ಜಗಕಾರಣ ಕರುಣ ಶ್ರೀಕೃಷ್ಣನ

ಜಗರೂಪನ ಜಗದಾದಿ ರೂಪನ
ರೂಪರೂಪದಿ ಧರೆಯ ಪೊರೆದವನ
ಮತ್ಸ್ಯವರಾಹಕೂರ್ಮಾದಿ ದಶದೊಲು
ಶರಣಾರ್ಥಿ ಸುಜನರ ತಲೆಕಾದನ (೧)

ರಾಮನಾದನ ಶ್ರೀ ಶ್ಯಾಮನಾದನ
ತ್ರೇತೆದ್ವಾಪರದೊಳು ಕ್ಷೇಮನಾದನ
ನರಕೇಸರಿಯಾಗಿ ದುರುಳನ ಬಗೆದನ
ಗೋವಿಂದ ಕಾದನ ಪ್ರಹ್ಲಾದನ (೨)

ವಾಮನನ ಶ್ರೀಬಲಿ ಸಂಹಾರನ
ಕ್ಷತ್ರಿಯಕುಲಹರ ಪರಶುಧರನ
ಹಯಮುಖರಾಯ ಎಮ್ಮ ಶ್ರೀನಿವಾಸ ವಿಠಲ
ಕಲಿಯೊಳು ಸಲಹೊ ನಾರಾಯಣ (೩)

ಕಂಡಿರೇನಯ್ಯ ಎಮ್ಮ ಜಗವಂದ್ಯನ
ಜಗಕಾರಣ ಕರುಣ ಶ್ರೀಕೃಷ್ಣನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೯.೨೦೧೧

Thursday, September 8, 2011

Shri Krishnana Nooraru Geethegalu - 155

ಪಾಡುವೆನೊ ಪವನಸುತ

ಪಾಡುವೆನೊ ಪವನಸುತ ಪಾಲಿಪುದು ಅನವರತ
ಹರಿವಾಯುಗುರುವೆನಗೆ ನೀನೆ ದೇವ

ಎನಿತು ಜನುಮಗಳರಿಯೆ ಎನಿತು ಯೋನಿಗಳರಿಯೆ
ನೀ ಜೀವದೊಡೆಯನು ಬೊಂಬೆ ನಾನು
ಅರಿಯದೆ ಎನ್ನೆಡೆಯ ಅನ್ಯಾಂಧವನಳಿದು
ಸುಖದಿ ಪೊರೆಯುವುದೆನ್ನ ತಂದೆ ನೀನು (೧)

ತ್ರೇತೆಯೊಳು ಜನಕಸುತೆ ಶೋಕ ಪರಿಹರಿಸೆ
ದಶಶಿರನ ದುರುಮುರಿದ ಹನುಮದೇವ
ದ್ವಾಪರದೆ ಕುರುಸುತನ ಅಸುರತೊಡೆ ಹರಿದನೆ
ಶ್ರೀಧರ್ಮನನುಜ ನಮೋ ಭೀಮದೇವ (೨)

ಕಲಿಯೊಳಗೆ ಶ್ರೀಮಧ್ವ ರಾಯರೂಪದೊಲು
ಧರಣಿ ಧರ್ಮವ ಪೊರೆದ ರಾಯರಾಯ
ಶ್ರೀನಿವಾಸ ವಿಠಲನ ಶ್ರೀಪಾದ ಸೇವೆಯನು
ಪಾಲಿಪನೆ ಕರುಣದೊಳು ಸಲಹೊ ಜೀಯ (೩)

ಪಾಡುವೆನೊ ಪವನಸುತ ಪಾಲಿಪುದು ಅನವರತ
ಹರಿವಾಯುಗುರುವೆನಗೆ ನೀನೆ ದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೯.೨೦೧೧

Wednesday, September 7, 2011

Shri Krishnana Nooraru Geethegalu - 154

ಕಾಯುವುದು ಕರುಣದೊಳು

ಕಾಯುವುದು ಕರುಣದೊಳು ಕೇಸರಿಸುತನೆಮ್ಮ
ಅಂಜನಾಸಂಭೂತ ಶ್ರೀಆಂಜನೇಯ

ರಾಘವ ದೂತನೆ ಶ್ರೀರಾಮ ಬಕುತ
ಧೀಮಂತ ಗುಣವಂತ ಶ್ರೀಹನುಮಂತ
ಸಿರಿಹೃದಯಸೇವೆಯಿಂ ಪುಣ್ಯ ಶ್ರೀಚರಣಕೆ
ಸೇತುಬಂಧವ ಬೆಸೆದ ಪಾವನ ಬಲವಂತ (೧)

ಜಾಂಬವಪ್ರೀತನೆ ಜಾನಕೀ ಶೋಕಹರ
ವಾನರ ಕುಲದೀಪ ದಶಶಿರ ಸಂಹಾರ
ಸಂಕಟಮೋಚಕನೆ ಸುಚರಿತ ಸಂಜೀವ
ಪವನಪುತ್ರನೆ ಶ್ರೀಮಾರುತಿ ದೇವದೇವ (೨)

ಪಂಚವದನನೆ ಅರ್ಜುನ ಧ್ವಜವಾಸ
ದ್ವಾಪರ ಭೀಮಯ್ಯ ಕೃಷ್ಣವಿಶೇಷ
ಎಮ್ಮಮ್ಮ ಲಕುಮಿಯ ತ್ರೇತಾ ಅಭಯನೆ
ಶ್ರೀನಿವಾಸ ವಿಠಲನ ರಾಮರೂಪದಿ ಭಜಿಪ (೩)

ಕಾಯುವುದು ಕರುಣದೊಳು ಕೇಸರಿಸುತನೆಮ್ಮ
ಅಂಜನಾಸಂಭೂತ ಶ್ರೀಆಂಜನೇಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೧

Thursday, September 1, 2011

Shri Krishnana Nooraru Geethegalu - 153

ಜೀವ ಸಂಜೀವ

ಅಂಜನಾಸುತ ವಂದೇ ಆಂಜನೇಯ
ರಾಮಸೇವಕ ಶರಣು ಕಾಯೋ ಮಹನೀಯ

ಬಕುತಾಭರಣನೊ ಶ್ರೀರಾಮ ಮುಖ್ಯಪ್ರಾಣ
ರಘುಕುಲಜ ಲಕ್ಷ್ಮಣಗೆ ಜೀವ ಸಂಜೀವ
ವೀರಕೇಸರಿಪುತ್ರ ವಿಭೀಷಣ ಮಿತ್ರ
ಲೋಕಪೂಜಿತ ಹನುಮ ಶ್ರೀರಾಮದೂತ (೧)

ಆ ಶೋಕೆ ಜಾನಕಿಗೆ ಅಭಯಮುದ್ರೆಯನಿತ್ತು
ಅಸುರನಾ ಲಂಕೆಯನು ದಹಿಸಿದವನೆ
ಪಾಪಹಾರಕದೇವ ಪವನಪುತ್ರನೆ ಹನುಮ
ಭಕ್ತವತ್ಸಲ ಕಾಯೋ ದಶಬಾಹವೆ (೨)

ರತ್ನಕುಂಡಲಧರಿತ ರುದ್ರವೀರ್ಯನೆ ದೇವ
ದೀನಬಂಧವೆ ಶರಣು ದುರಿತಾಂತಕ
ಶ್ರೀನಿವಾಸ ವಿಠಲನ್ನ ಆದಿರೂಪದೊಳುಂಡ
ರಾಮಪಾದನೆ ಸಲಹೊ ವರದಾಯಕ (೩)

ಅಂಜನಾಸುತ ವಂದೇ ಆಂಜನೇಯ
ರಾಮಸೇವಕ ಶರಣು ಕಾಯೋ ಮಹನೀಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೯.೨೦೧೧

Wednesday, August 31, 2011

Shri Krishnana Nooraru Geethegalu - 152

ಶ್ರೀಆದಿಕೂರ್ಮ ನಿತ್ಯಧ್ಯಾನಮಂತ್ರ

ಮಂದಾರಧರಂ ದೇವಂ ಶ್ರೀವಿಷ್ಣು ದ್ವಿತೀಯಾವತಾರಂ
ಅಮೃತಂ ಸುರಗಣಪರಂ ಶ್ರೀಆದಿಕೂರ್ಮಂ ಉಪಾಸ್ಮಹೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೮.೨೦೧೧

Tuesday, August 30, 2011

Shri Krishnana Nooraru Geethegalu - 151

ಕರ್ಮನೇಮಕ ಕೃಷ್ಣ

ಹರಿ ಅದ್ಭುತನೊ ಗೋಗಿರಿ ಎತ್ತಿದನೊ
ಇಂದ್ರಗರ್ವವನಿಳಿಸಿ ಕರ್ಮನೇಮಕ ಕೃಷ್ಣ

ಸೆರೆಯೊಳುದ್ಭವಿಸಿ ನಂದನೊಳು ನೆಲೆಸಿ
ಮಥುರಾಂಧನ ವಧಿಸಿ ಸುಜನರುದ್ಧರಿಸಿದಾ (೧)

ಕಾಲಿಯ ಹೆಡೆಮೆಟ್ಟಿ ದ್ವಾರಕೆಯನು ಕಟ್ಟಿ
ಪೂತನಾದಿ ದುರಿತರ ಯಮಪುರಿಗಟ್ಟಿದಾ (೨)

ಯದುಕುಲ ಶ್ರೀತಿಲಕ ಗೋಪಜನ ಮೈಪುಳಕ
ರಾಧೆಯ ಹೃದಯದ ಸರಿಗಮ ನುಡಿಸುವಾ (೩)

ಮೂಜಗ ಶ್ರೀಲೋಲ ಗೋವಿಂದ ಗೋಪಾಲ
ದಶರೂಪದಿ ಸಲಹೋ ಶ್ರೀನಿವಾಸ ವಿಠಲ (೪)

ಹರಿ ಅದ್ಭುತನೊ ಗೋಗಿರಿ ಎತ್ತಿದನೊ
ಇಂದ್ರಗರ್ವವನಿಳಿಸಿ ಕರ್ಮನೇಮಕ ಕೃಷ್ಣ

              ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೧

Friday, August 26, 2011

Shri Krishnana Nooraru Geethegalu - 150

ಬಾರೋ ಯದುನಂದನ

ಬಾರೋ ಯದುನಂದನ ಬಾರೋ ಸುಂದರನಯನ
ಬಾರಯ್ಯ ಬಾ ಕೃಷ್ಣ ಇಂದಿರಾರಮಣ

ಬಾರೋ ದೇವಕಿಕಂದ ಬಾರೋ ಗೋಕುಲನಂದ
ಬಾರಯ್ಯ ಬಾ ಕೃಷ್ಣ ಬಾಲಮುಕುಂದ

ಬಾರೋ ಮೂಜಗಲೋಲ ಬಾರೋ ಗೋಪಾಲ
ಬಾರಯ್ಯ ಬಾ ಕೃಷ್ಣ ಸುಜನಪಾಲ

ಬಾರೋ ಸುಂದರದೇವ ಬಾರೋ ದೇವರದೇವ
ಬಾರಯ್ಯ ಬಾ ಕೃಷ್ಣ ವಾಸುದೇವ

ಬಾರೋ ಭಕ್ತಾಭರಣ ಬಾರೋ ವೇಂಕಟರಮಣ
ಬಾರಯ್ಯ ಬಾ ಕೃಷ್ಣ ನಾರಾಯಣ

ಬಾರೋ ಶ್ರೀರಾಮರೂಪ ಬಾರೋ ಶ್ರೀಪುಣ್ಯದೀಪ
ಬಾರಯ್ಯ ಬಾ ಕೃಷ್ಣ ಮಥುರಾಧಿಪ

ಬಾರೋ ಶ್ರೀಜಗಬೋಧ ಬಾರೋ ಶ್ರೀವೇದವೇದ
ಬಾರಯ್ಯ ಬಾ ಕೃಷ್ಣ ತೀರ್ಥಪಾದ

ಬಾರೋ ಶುಭಕಲ್ಯಾಣ ಬಾರೋ ದೀನರಪ್ರಾಣ
ಬಾರಯ್ಯ ಬಾ ಕೃಷ್ಣ ರಾಧೆರಮಣ

ಬಾರೋ ಮಲ್ಲರಮಲ್ಲ ಬಾರೋ ಶ್ರೀಪರಿಪಾಲ
ಬಾರಯ್ಯ ಬಾ ಕೃಷ್ಣ ಶ್ರೀನಿವಾಸ ವಿಠಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೮.೨೦೧೧

Saturday, August 20, 2011

Shri Krishnana Nooraru Geethegalu - 149

ವಾಗ್ನಿಧಿ

ಸಲಹೊ ವಾಗ್ನಿಧಿಯೆ ಕರುಣಿಯೆನ್ನಯ ದೊರೆಯೆ
ಶಾಪಾನುಗ್ರಹದೇವ ಶ್ರೀರಾಘವೇಂದ್ರ

ಹರಿವಾಯುವೊಲಿದವನೆ ಅಣುರೇಣ ಪೊರೆವವನೆ
ಅವನಿಯೊಳು ಶ್ರೀಹರಿಯ ಶೇಷ ಮಹನೀಯ
ಸಕಲಬಲ್ಲಿದ ಗುರುವೆ ಎನ್ನ ಮರೆವುದು ಸರಿಯೆ
ಮೊರೆಬಂದೆ ನಿನ್ನ ಪಾದ ಕಾಯೊ ಗುರುರಾಯ (೧)

ನಿನ್ನ ಕರುಣೆಯೆ ಗುರುವೆ ಕ್ಷಯಗೆ ಅಕ್ಷಯವು
ಅಂಧಕಗೆ ಹರಿಬೆಳಕು ಮೂಢನಾ ತಿಳಿವು
ಮಮತೆಮಾರುತ ನೀನೊ ಧರಣಿಮಡಿಲಿನ ತಣಿವು
ನರಜನುಮದುಲ್ಲಾಸ ಅನ್ನ ಉಳಿವು (೨)

ಕಲಿಯ ಕತ್ತಲೆಯೊಳಗೆ ಅರಿಯದೆ ನಿನ್ನಿರುವ
ಹಲವನ್ಯವೆಸಗಿಹೆನು ಕ್ಷಮಿಸೆನ್ನನು
ಕರೆತಂದ ಶ್ರೀಗುರುವೆ ಮರೆತೆನ್ನ ಮೋಸಗಳ
ಶ್ರೀನಿವಾಸ ವಿಠಲನ್ನ ತೋರಿಸಿನ್ನು (೩)

ಸಲಹೊ ವಾಗ್ನಿಧಿಯೆ ಕರುಣಿಯೆನ್ನಯ ದೊರೆಯೆ
ಶಾಪಾನುಗ್ರಹದೇವ ಶ್ರೀರಾಘವೇಂದ್ರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೮.೨೦೧೧

Wednesday, August 17, 2011

Shri Krishnana Nooraru Geethegalu - 148

ಸುಜ್ಞಾನ ರಾಜ

ಮೂಲರಾಮ ಮೇಘಶ್ಯಾಮ ಮುಖ್ಯಪ್ರಾಣರೊಲಿದನೆ
ತುಂಗಾತೀರದಿ ನೆಲೆಸಿ ಸುಜನರ ಕಾವ ರಾಘವೇಂದ್ರನೆ

ಧರೆಯ ನರರ ಸಲಹೆ ಭುವನಗಿರಿಯೊಳುದಿತ ಸೂರ್ಯನೆ
ಜ್ಞಾನ ತೇಜನೆ ಸುಜ್ಞಾನ ರಾಜನೆ ವೃಂದಾವನದ ರಾಯನೆ (೧)

ಕಲಿಯ ಕರ್ಮವ ಕಳೆಯೆ ಮೋಕ್ಷವನೊಲ್ಲೆನೆಂದ ವಿಶೇಷನೆ
ಸತ್ಯಧರ್ಮದಾದಿ ಗುರುವೆ ಶಾಪಾನುಗ್ರಹ ಹರಿಶೇಷನೆ (೨)

ಭಜಿತ ಶರಣರ ಕಲ್ಪವೃಕ್ಷವೆ ನಮಿಸೆ ಕಾಮಧೇನುವೆ
ಶ್ರೀನಿವಾಸ ವಿಠಲನೊಲಿದನೆ ಪೊರೆಯೆಮ್ಮನು ಬೇಡುವೆ (೩)

ಮೂಲರಾಮ ಮೇಘಶ್ಯಾಮ ಮುಖ್ಯಪ್ರಾಣರೊಲಿದನೆ
ತುಂಗಾತೀರದಿ ನೆಲೆಸಿ ಸುಜನರ ಕಾವ ರಾಘವೇಂದ್ರನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೮.೨೦೧೧

Saturday, August 13, 2011

Shri Krishnana Nooraru Geethegalu - 147

ಕಲಿಕರ್ಮಹಾರಿ

ಕೃಷ್ಣ ತ್ರಿಜಗ ಸಂಚಾರಿ ಶ್ರೀಹರಿ
ಶ್ರೀಕೃಷ್ಣ ತ್ರಿಜಗ ಸಂಚಾರಿ

ಜಲಮೂಲರೂಪ ಶ್ರೀಹರಿ ನರಕೇಸರಿ
ದಶದವತಾರಿ ಶ್ರೀದುರಿತ ಸಂಹಾರಿ (೧)

ವನಮಾಲಿ ಶ್ರೀವಸುದೇವಸುತ ಶೌರಿ
ಜಗದೋದ್ಧಾರ ಶ್ರೀಪಾಲ ಮುರಾರಿ (೨)

ವೈಕುಂಠವಾಸ ಶ್ರೀಗೋಗಿರಿಧಾರಿ
ಶ್ರೀನಿವಾಸ ವಿಠಲ ಶ್ರೀಕಲಿಕರ್ಮಹಾರಿ (೩)

ಕೃಷ್ಣ ತ್ರಿಜಗ ಸಂಚಾರಿ ಶ್ರೀಹರಿ
ಶ್ರೀಕೃಷ್ಣ ತ್ರಿಜಗ ಸಂಚಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೮.೨೦೧೧

Wednesday, August 10, 2011

Shri Krishnana Nooraru Geethegalu - 146

ಗೋಕುಲ ಗೋವಿಂದ

ಗೋಕುಲ ಗೋವಿಂದ ಬಲು ಚೆಂದ
ಬೃಂದಾವನ ಕಂದ ಮುಕುಂದ

ಸುಂದರ ನಯನ ಚಂದಿರ ವದನ
ನೊಸಲೊಳು ನಗುವ ಸುಮಧುರ ಚಂದನ
ಅಧರದಿಂ ಉದಯಿಸೊ ಆನಂದ ನಗುವನ
ಸಾಟಿಯೇ ಅವನಿಗೆ ಅವನೇ ಮೋಹನ (೧)

ಮುರಳೀ ಮಾಧವ ಮಥುರಾ ಕೇಶವ
ಎದೆಯೊಳು ಪ್ರೇಮದ ವೇಣುವ ನುಡಿಸುವ
ವಂದಿಗೆ ಕಾಲ್ಗೆಜ್ಜೆ ಘಲಿಘಲಿರೆನಿಸುತ
ಶ್ರೀನಿವಾಸ ವಿಠಲ ತಾ ಜಗವನೆ ಕುಣಿಸುವ (೨)

ಗೋಕುಲ ಗೋವಿಂದ ಬಲು ಚೆಂದ
ಬೃಂದಾವನ ಕಂದ ಮುಕುಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೮.೨೦೧೧

Tuesday, August 9, 2011

Shri Krishnana Nooraru Geethegalu - 145

ಆದಿವರಾಹ ಧ್ಯಾನಮಂತ್ರ

ವಸುಧಾಹೃದಯಂ ದೇವಂ ಶ್ರೀವಿಷ್ಣು ತೃತೀಯಾವತಾರಂ
ಚತುರ್ಭುಜಂ ಹಿರಣ್ಯಾಕ್ಷಹರಂ ಆದಿವರಾಹಂ ಉಪಾಸ್ಮಹೇ

                                  ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೮.೨೦೧೧

Wednesday, August 3, 2011

Shri Krishnana Nooraru Geethegalu - 144

ಬರುವನೆ ಮಾಧವ

ಬರುವನೆ ಮಾಧವ ಹೇಳೆ ಸಖಿ ಇಂದು
ಬಾರನೇ ದುಗುಡವು ಕೇಳೆ ಸಖಿ

ಹಿಂದಿನ ಇರುಳು ತಡವಾಗಿ ಬಂದ
ಮನ್ನಿಸೆ ರಾಧೆ ಎನುತ ಗೋವಿಂದ
ಲೋಕಕಾರ್ಯವೆ ಅದಕೆ ಕಾರಣವೆನುತ
ಅಧರದೊಳಧರವ ಇರಿಸುತ ರಮಿಸುತ (೧)

ಬರುವವಸರದಿ ಮುರಳಿಯ ಮರೆತೆ
ನಾದವಾಲಿಸುವೆ ವೀಣೆಯ ನುಡಿಸೆಂದ
ಎನ್ನೆದೆ ವಿರಹದ ಬಯಕೆ ಬೃಂದಾವನದಿ
ಒಲವಿನ ಹೂಗಳ ಅರಳಿಸಿ ಅರವಿಂದ (೨)

ಮೂಜಗ ಮೋಹಿಸೊ ಮೋಹನನೆ ಅವನು
ಗೋಕುಲ ಪ್ರೀತಿಸೊ ಮದನನ ಪಿತನು
ಕರೆದೊಡೆ ಒಲುಮೆಯೊಳ್ ಓಡೋಡಿಬರುವ
ಎನ್ನಕ್ಕ ಲಕುಮಿಯ ಶ್ರೀನಿವಾಸ ವಿಠಲನು (೩)

ಬರುವನೆ ಮಾಧವ ಹೇಳೆ ಸಖಿ ಇಂದು
ಬಾರನೇ ದುಗುಡವು ಕೇಳೆ ಸಖಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೮.೨೦೧೧

Sunday, July 31, 2011

Shri Krishnana Nooraru Geethegalu - 143

ಪಾದ ಕರುಣ

ಕರೆ ಕೇಳದೇ ಕೃಷ್ಣ ಈ ದೀನ ಪಾಮರನ
ಮೊರೆಬಂದೆ ಪಾಲಿಸೈ ಪದುಮನಾಭ

ಶಿಲೆಯಾದಹಲ್ಯೆಯ ಸಕಲ ಶಾಪವನಳಿದು
ಸಲಹಿದನೆ ಕಾಯೆನ್ನ ಕರುಣಾಕರ
ಶಬರಿ ಸಹನೆಯೊಳು ಶ್ರೀರಾಮ ಬಾರೆನಲು
ಕರುಣಿಸಿ ಕಂಡವನೆ ದಯಾಸಾಗರ (೧)

ಕರಿಯದುವು ಹರಿಯೆನಲು ಅಗ್ನಿಸುರಳಿಯೊಳ
ರಳಿ ನೋವನೀಗಿದ ಪ್ರಭುವೆ ದೇವದೇವ
ಕಂದನವ ತಂದೆ ನೀ ಕಾಯೆಂದು ಮೊರೆಯಿಡಲು
ಕಂಭವನೆ ಸೀಳಿದನೆ ವಾಸುದೇವ (೨)

ಕಲಿಯ ಕತ್ತಲೆಯೊಳಗೆ ಹಾದಿಕಾಣೆನೊ ಹರಿಯೆ
ಗತಿಯಾಗೊ ಸುಜನಂಗೆ ನಾರಾಯಣ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲಯ್ಯ
ಎನಗಿರಲೊ ನಿನ್ನ ಪಾದಕರುಣ (೩)

ಕರೆ ಕೇಳದೇ ಕೃಷ್ಣ ಈ ದೀನ ಪಾಮರನ
ಮೊರೆಬಂದೆ ಪಾಲಿಸೈ ಪದುಮನಾಭ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೭.೨೦೧೧

Friday, July 29, 2011

Shri Krishnana Nooraru Geethegalu - 142

ರಾಯ ಗುರುರಾಯ

ರಾಯ ಗುರುರಾಯ ರಾಘವೇಂದ್ರ ಮಹನೀಯ
ಜ್ಞಾನ ಸುಜ್ಞಾನ ವಿಜ್ಞಾನ ನಿಧಯೆ

ಭವದುಃಖಶಮನಾಯ ಸುಖಧೈರ್ಯವರದಾಯ
ಸಂಶಯಾಪಸ್ಮೃತಿಭ್ರಾಂತಿನಾಶಕಾಯ
ಶ್ರೀಮಹಾಮಹಿಮಾಯ ಮಧ್ವಮತಸೋಮಾಯ
ರಾಮಮಾನಸ ಶ್ರೀಪುಣ್ಯವರ್ಧನಾಯ (೧)

ಪ್ರಹ್ಲಾದಪ್ರತಿರೂಪ ಭುವನಗಿರಿ ಪುಣ್ಯದೀಪ
ಸಕಲಸಿರಿ ಸುಪುತ್ರ ಸುಪ್ರದಾಯ
ಸುರಗಣಾಧೀಶಾಯ ಅಣುರೇಣುಕ್ಷೇಮಾಯ
ಶ್ರೀನಿವಾಸ ವಿಠಲ ವರದರಾಯ (೨)

ರಾಯ ಗುರುರಾಯ ರಾಘವೇಂದ್ರ ಮಹನೀಯ
ಜ್ಞಾನ ಸುಜ್ಞಾನ ವಿಜ್ಞಾನ ನಿಧಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೭.೨೦೧೧

Thursday, July 28, 2011

Shri Krishnana Nooraru Geethegalu - 141

ಪಾಲಿಸೈ ಪರಮಾತ್ಮ

ಪಾತಕದ ಪಾತಳಿಯೊಳ್ ಮುಳುಗಿಹೆನೊ ಮುರಹರನೆ
ಪಾಪವೆನ್ನವನಳಿದು ಪಾಲಿಸೈ ಕೃಷ್ಣ

ನೇತ್ರವೆನ್ನವು ನಿನ್ನ ನೋಡದ ಪಾತಕವ
ಕರ್ಣವೆನ್ನವು ನಿನ್ನ ಕೇಳದ ಪಾತಕವ
ನಾಲಗೆಯೆನ್ನದು ನಿನ್ನ ನುಡಿಯದ ಪಾತಕವ
ಹೃದಯವೆನ್ನದು ನಿನಗೆ ಮಿಡಿಯದ ಪಾತಕವ (೧)

ಎನ್ನ ಪಂಚಾಂಗಗಳ ಚಂಚಲದ ಪಾತಕವ
ಎನ್ನಾರು ಅಸುರರ ಸಂಚಿನೊಳ ಪಾತಕವ
ಸಕಲದೊಳು ಹರಿಯಿರುವ ಅರಿಯದಾ ಪಾತಕವ
ಶ್ರೀನಿವಾಸ ವಿಠಲ ನಿನ್ನ ಧ್ಯಾನಿಸದ ಪಾತಕವ (೨)

ಪಾತಕದ ಪಾತಳಿಯೊಳ್ ಮುಳುಗಿಹೆನೊ ಮುರಹರನೆ
ಪಾಪವೆನ್ನವನಳಿದು ಪಾಲಿಸೈ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೭.೨೦೧೧

Sunday, July 24, 2011

Shri Krishnana Nooraru Geethegalu - 140

ಕೃಷ್ಣ ಶ್ರೀಶೌರಿ

ಶ್ರೀಹರಿ ಮುರಾರಿ ಜಗದೋದ್ಧಾರಿ
ಗೋವರ್ಧನಧಾರಿ ಶ್ರೀಶೌರೀಂ

ಆದಿದೇವ ಆನಂದಸಾಗರ
ಅಚಲಾದ್ಭುತ ಹರಿ ವಿಸ್ತಾರಂ
ಅಕ್ಷಯಾನಂತ ಅಜೇಯಾಚ್ಯುತ ಹರಿ
ಅಪರಾಜಿತ ಅವ್ಯಕ್ತಂ (೧)

ಕಮಲನಯನ ಕುಂಡಲಧರಿತ
ಕಂಸಾಂತಕ ಶ್ರೀಕೃಷ್ಣಂ
ಮುರಳೀಮೋಹನ ಮದನಮಾಧವ
ಮಹಾಮಹಿಮ ಶ್ರೀವಿಷ್ಣುಂ (೨)

ದೀನರಕ್ಷಕ ಶ್ರೀದಯಾನಿಧೆ
ದೇವಕಿನಂದನ ಧರಣೀಶಂ
ದೇವಾದಿದೇವ ಧರ್ಮರಕ್ಷಕಂ
ದ್ವಾರಕಾಪತೆ ಅವನೀಶಂ (೩)

ಪ್ರಜಾಪತಿ ಶ್ರೀಪಾರ್ಥಸಾರಥೆ
ಪುರುಷೋತ್ತಮ ಶ್ರೀಲೋಲಂ
ವೈಕುಂಠಪತೆಯೆ ಶ್ರೀನಿವಾಸ ವಿಠಲಂ
ವಂದೇ ಕಲಿಯುಗ ಶ್ರೀವರದಂ (೪)

ಶ್ರೀಹರಿ ಮುರಾರಿ ಜಗದೋದ್ಧಾರಿ
ಗೋವರ್ಧನಧಾರಿ ಶ್ರೀಶೌರೀಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೧

Friday, July 22, 2011

Shri Krishnana Nooraru Geethegalu - 139

ನಾರಾಯಣಂ ವಂದೇ

ನಾರಾಯಣಂ ವಂದೇ ಶ್ರೀಮೂಲರಾಮಂ
ರಘುವಂಶತಿಲಕ ಶ್ರೀ ತ್ರಿಜಗಕ್ಷೇಮಂ

ನಾರಾಯಣಂ ವಂದೇ ಶ್ರೀವಾಸುದೇವಂ
ದ್ವಾರಕಾನಿಲಯ ಶ್ರೀ ಧರಣೀಶ್ವರಂ

ನಾರಾಯಣಂ ವಂದೇ ಶ್ರೀವಿಷ್ಣುರೂಪಂ
ಶ್ರೀನಿವಾಸ ವಿಠಲ ಶ್ರೀ ಸುಜನದೀಪಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೭.೨೦೧೧

Wednesday, July 20, 2011

Shri Krishnana Nooraru Geethegalu - 138


ವೇಂಕಟನ ರಾಣಿ


ವಂದೇ ಜನನಿ ಶುಭಕಲ್ಯಾಣಿ
ಮಂಗಳೆ ಪಾವನಿ ವೇಂಕಟನ ರಾಣಿ

ಕ್ಷೀರಸಾಗರತನಯೆ ಕ್ಷಿಪ್ರಪ್ರದಾಯನಿ
ಚಂದ ಚಂದಿರವದನೆ ಚಂದ್ರಸಹೋದರಿ
ಅಷ್ಟದಶಾಂಭುಜೆ ಐಶ್ವರ್ಯದಾಯಿನಿ
ಮುತೈದೆ ಮಹಾಲಕ್ಷ್ಮಿ ವೈಕುಂಠವಾಸಿನಿ (೧)

ಪದ್ಮಪುಷ್ಪಸ್ಥಿತೆ ಪದ್ಮಾಸ್ತೆ ದೇವಿ
ಪುಣ್ಯವರ್ಷಿಣಿಯೆ ಪ್ರಕೃತೆ ಭಾರ್ಗವಿ
ಪದುಮನಯನೆ ತಾಯಿ ಪದುಮನಾಭನ ಪ್ರೇಮಿ
ಪರಮಪವಿತ್ರೆಯೆ ಶ್ರೀಪುರಂದರಿ (೨)

ಲೋಕಮಾತೆಯೆ ಲಕುಮಿ ಶ್ರೀಹರಿವಲ್ಲಭೆ
ಅಷ್ಟಮುಖೆ ಶುಭೆ ಜಯಮಂಗಳೆ ಪ್ರಭೆ
ಶ್ರೀನಿವಾಸ ವಿಠಲನ ನಿತ್ಯಸೇವಿತೆ ಲಕುಮಿ
ಕರುಣಿಸಿ ಕಾಯೆಮ್ಮ ಮೂಜಗಕ್ಷೇಮಿ (೩)

ವಂದೇ ಜನನಿ ಶುಭಕಲ್ಯಾಣಿ
ಮಂಗಳೆ ಪಾವನಿ ವೇಂಕಟನ ರಾಣಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೭.೨೦೧೧

Sunday, July 17, 2011

Shri Krishnana Nooraru Geethegalu - 137

ವೇಣು ವಿಹಾರಿ

ಗೋಕುಲ ಗೋಪಾಲ ಶ್ರೀಲೋಲ
ಸುರಗಣ ವಂದಿತ ಮೂಜಗಪಾಲ

ಮದನ ಮೋಹನ ವೇಣು ವಿಹಾರಿ
ವಿರಹಿ ರಾಧಾ ಪ್ರೇಮ ತಿಜೋರಿ (೧)

ಶ್ರೀಕರ ಶುಭಕರ ಸುಖನಿಧಿ ಶ್ರೀಹರಿ
ಸುಜನ ಸುಪಾಲ ದುರಿತಸಂಹಾರಿ (೨)

ಆದಿ ಅನಾದಿ ಶ್ರೀ ಅನಂತ ಅವತಾರಿ
ಶ್ರೀನಿವಾಸ ವಿಠಲ ವೈಕುಂಠದಾರಿ (೩)

ಗೋಕುಲ ಗೋಪಾಲ ಶ್ರೀಲೋಲ
ಸುರಗಣ ವಂದಿತ ಮೂಜಗಪಾಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೭.೨೦೧೧

Friday, July 15, 2011

Shri Krishnana Nooraru Geethegalu - 136

ಗೋವಿಂದರಾಯ

ಕಾಯುವುದೊ ಕೃಷ್ಣಯ್ಯ ಯಶೋದೆ ಪ್ರಿಯಸುತನೆ
ದ್ವಾಪರದ ಗೋಕುಲನೆ ಗೋವಿಂದರಾಯ

ಸೃಷ್ಟಿಯೊಳು ಸುಜನಂಗೆ ಸರ್ವಮಂಗಳ ನೀನೊ
ದುರಿತಸಂಹಾರಿ ಶ್ರೀದೇವದೇವ
ಅರಿಯದೆ ಹರಿಯೆಂದ ಅಜಮಿಳನ ಹರಸಿದನೆ
ಕಾಯುವುದು ಕಡೆವರೆಗು ಈ ಮೂಢನ (೧)

ಹೊನ್ನುಮಣ್ಣಿನ ದಾಹ ಮಡದಿಮಕ್ಕಳ ಮೋಹ
ಒಳಗಿರಿಸಿದವ ನೀನೊ ನಾನು ಬೊಂಬೆ
ಕಳೆದೆಲ್ಲ ಜಂಜಡವ ಕರುಣಿಸೊ ಶ್ರೀಪದವ
ಶ್ರೀನಿವಾಸ ವಿಠಲ ನೀ ಎನ್ನ ತಂದೆ (೨)

ಕಾಯುವುದೊ ಕೃಷ್ಣಯ್ಯ ಯಶೋದೆ ಪ್ರಿಯಸುತನೆ
ದ್ವಾಪರದ ಗೋಕುಲನೆ ಗೋವಿಂದರಾಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೭.೨೦೧೧

Wednesday, July 13, 2011

Shri Krishnana Nooraru Geethegalu - 135

ಶ್ರೀಕೃಷ್ಣ ಹರೆ

ಕೃಷ್ಣ ಹರೆ ಶ್ರೀಕೃಷ್ಣ ಹರೆ
ಕೃಷ್ಣ ಹರೆ ಶ್ರೀಕೃಷ್ಣ ಹರೆ

ಶ್ರೀ ಆದಿದೇವಂ ಕೃಷ್ಣ ಹರೆ
ಮೂಜಗಕಾವಂ ಕೃಷ್ಣ ಹರೆ
ಅಣುರೇಣುಪಾಲಂ ಕೃಷ್ಣ ಹರೆ
ಶ್ರೀಮೂಲರಾಮಂ ಕೃಷ್ಣ ಹರೆ

ಯದುಕುಲತಿಲಕಂ ಕೃಷ್ಣ ಹರೆ
ದ್ವಾಪರ ಪುಳಕಂ ಕೃಷ್ಣ ಹರೆ
ವಸುದೇವಕಂದಂ ಕೃಷ್ಣ ಹರೆ
ದೇವಕೀನಂದನಂ ಕೃಷ್ಣ ಹರೆ

ಚಂದನ ತಿಲಕಂ ಕೃಷ್ಣ ಹರೆ
ಚಂದಿರ ವದನಂ ಕೃಷ್ಣ ಹರೆ
ಕುಂಡಲ ಧರಿತಂ ಕೃಷ್ಣ ಹರೆ
ಮೂಜಗಸ್ಮರಿತಂ ಕೃಷ್ಣ ಹರೆ

ಮಥುರಾ ಜನಿಪಂ ಕೃಷ್ಣ ಹರೆ
ಗೋಕುಲ ನೆಲಿಪಂ ಕೃಷ್ಣ ಹರೆ
ಗೋಪಿ ಕಿಶೋರಂ ಕೃಷ್ಣ ಹರೆ
ನವನೀತಚೋರಂ ಕೃಷ್ಣ ಹರೆ

ಮುರಳೀಮೋಹನಂ ಕೃಷ್ಣ ಹರೆ
ಮನಸಮ್ಮೋಹನಂ ಕೃಷ್ಣ ಹರೆ
ಮದನಮಾಧವಂ ಕೃಷ್ಣ ಹರೆ
ಮಧುಸೂದನಂ ಕೃಷ್ಣ ಹರೆ

ಶ್ಯಾಮಲವರ್ಣಂ ಕೃಷ್ಣ ಹರೆ
ಕೋಮಲಾಂಗಂ ಕೃಷ್ಣ ಹರೆ
ಕೇಯೂರಧರಿತಂ ಕೃಷ್ಣ ಹರೆ
ಕೇಶವ ದೇವಂ ಕೃಷ್ಣ ಹರೆ

ವನಮಾಲಾಧರಂ ಕೃಷ್ಣ ಹರೆ
ಕೌಸ್ತುಭಧರಂ ಕೃಷ್ಣ ಹರೆ
ಶಂಖಚಕ್ರಾಧರಂ ಕೃಷ್ಣ ಹರೆ
ಗದಾಧರಂ ಶ್ರೀಕೃಷ್ಣ ಹರೆ

ರಾಧಾ ರಮಣಂ ಕೃಷ್ಣ ಹರೆ
ಭಾಮಾ ಪ್ರಣಯಂ ಕೃಷ್ಣ ಹರೆ
ರುಕ್ಮಿಣಿ ಹೃದಯಂ ಕೃಷ್ಣ ಹರೆ
ಮೀರಾ ಮಾನಸಂ ಕೃಷ್ಣ ಹರೆ

ಕಮಲನಯನಂ ಕೃಷ್ಣ ಹರೆ
ಕಮಲನಾಥಂ ಕೃಷ್ಣ ಹರೆ
ಕಂಜಲೋಚನಂ ಕೃಷ್ಣ ಹರೆ
ಕಂಸಾಂತಂಕಂ ಕೃಷ್ಣ ಹರೆ

ದ್ವಾರಕಾಧೀಶಂ ಕೃಷ್ಣ ಹರೆ
ಧರಣಿ ಮಹೇಶಂ ಕೃಷ್ಣ ಹರೆ
ದುರಿತಸಂಹಾರಂ ಕೃಷ್ಣ ಹರೆ
ದೇವಾದಿದೇವಂ ಕೃಷ್ಣ ಹರೆ

ಜಯಜನಾರ್ದನಂ ಕೃಷ್ಣ ಹರೆ
ಜಯಜಗದೀಶ್ವರಂ ಕೃಷ್ಣ ಹರೆ
ಜ್ಯೋತಿರಾದಿತ್ಯಂ ಕೃಷ್ಣ ಹರೆ
ಜಗದೋದ್ಧಾರಂ ಕೃಷ್ಣ ಹರೆ

ಪರಮಪುರುಷಂ ಕೃಷ್ಣ ಹರೆ
ಪುಣ್ಯಹಸ್ತಂ ಕೃಷ್ಣ ಹರೆ
ಪರಬ್ರಹ್ಮಂ ಕೃಷ್ಣ ಹರೆ
ಪರಮಾತ್ಮಂ ಕೃಷ್ಣ ಹರೆ

ಪಕ್ಷಿವಾಹನಂ ಕೃಷ್ಣ ಹರೆ
ಪಾರ್ಥಸಾರಥೀಂ ಕೃಷ್ಣ ಹರೆ
ಪುರುಷೋತ್ತಮಂ ಶ್ರೀಕೃಷ್ಣ ಹರೆ
ಪದ್ಮನಾಭಂ ಶ್ರೀಕೃಷ್ಣ ಹರೆ

ದಶ ಅವತಾರೀಂ ಕೃಷ್ಣ ಹರೆ
ಬಲಿ ಸಂಹಾರೀಂ ಕೃಷ್ಣ ಹರೆ
ನರಕೇಸರೀಂ ಶ್ರೀಕೃಷ್ಣ ಹರೆ
ಹರಿ ಮುರಾರೀಂ ಕೃಷ್ಣ ಹರೆ

ನಾರಾಯಣಂ ಕೃಷ್ಣ ಹರೆ
ನಿರಂಜನಂ ಕೃಷ್ಣ ಹರೆ
ನಿರ್ಗುಣಧಾಮಂ ಕೃಷ್ಣ ಹರೆ
ನಂದಗೋಪಾಲಂ ಕೃಷ್ಣ ಹರೆ

ಶ್ರೀಅರವಿಂದಂ ಕೃಷ್ಣ ಹರೆ
ಶ್ರೀಗೋವಿಂದಂ ಕೃಷ್ಣ ಹರೆ
ಯಶೋದಾನಂದಂ ಕೃಷ್ಣ ಹರೆ
ಯದುಮುಕುಂದಂ ಕೃಷ್ಣ ಹರೆ

ಶ್ರೀರಾಮರೂಪಂ ಕೃಷ್ಣ ಹರೆ
ಶ್ರೀಶ್ಯಾಮರೂಪಂ ಕೃಷ್ಣ ಹರೆ
ಶ್ರೀನಿವಾಸ ವಿಠಲಂ ಕೃಷ್ಣ ಹರೆ
ಸುಜನ ಸಂಪ್ರೀತಂ ಕೃಷ್ಣ ಹರೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೭.೨೦೧೧

Friday, July 8, 2011

Shri Krishnana Nooraru Geethegalu - 134

ಬೇಡುವೆನೊ ನಿನ್ನ

ಬೇಡುವೆನೊ ನಿನ್ನ ದೇವಕಿಕಂದನೆ
ಸಲಹೊ ಶ್ರೀನಿಧಿ ಹರಿಗೋವಿಂದನೆ

ಚಂದನತಿಲಕನೆ ಚಂದಿರವದನನೆ
ಮಂಗಳಾಕ್ಷ ಶ್ರೀ ಮಂದಸ್ಮಿತನೆ
ನವರತ್ನಾಭರಣ ವಜ್ರಕಿರೀಟನೆ
ಶಂಖಚಕ್ರಗದಾ ಶ್ರೀಕೌಸ್ತುಭನೆ (೧)

ಸಿರಿಗಿರಿಧಾರಿ ಶ್ರೀಗೋವರ್ಧನನೆ
ರಾಧಾ ಪ್ರಿಯಕರ ಮಾಧವನೆ
ಗೋಕುಲನಂದನ ಮುರಳೀಧರನೆ
ದ್ವಾರಕಾಧೀಶ ಶ್ರೀಕೇಶವನೆ (೨)

ಮೀರೆಯ ಬಕುತಿಗೆ ಸೋತೊಲಿದವನೆ
ಅಷ್ಟವಕ್ರೆಯ ಕೃಷ್ಣ ಅಕ್ಕರೆಯವನೆ
ಶ್ರೀಶೇಷಶಯನ ಶ್ರೀನಿವಾಸ ವಿಠಲನೆ
ವೈಕುಂಠಪತಿ ಕಾಯೊ ಶ್ರೀವೇಂಕಟನೆ

ಬೇಡುವೆನೊ ನಿನ್ನ ದೇವಕಿಕಂದನೆ
ಸಲಹೊ ಶ್ರೀನಿಧಿ ಹರಿಗೋವಿಂದನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೭.೨೦೧೧

Shri Krishnana Nooraru Geethegalu - 133

ಸಕಲ ಸುಪಾಲಂ

ಯದುಕುಲ ನಂದನನೆ ಮಾಧವ ದೇವಕಿ ಪ್ರಿಯಸುತನೆ

ಗೋಕುಲ ಪುರಜನ ಜೀವಸಂಪ್ರೀತಂ
ಮಥುರಾಧಿಪನೆ ನವನೀತಚೋರಂ (೧)

ಸುಶ್ರವ ಸರಿಗಮ ಶೃಂಗಾರಲೋಲಂ
ಸೃಷ್ಟಿಸ್ಥಿತಿಲಯ ಸಕಲ ಸುಪಾಲಂ (೨)

ಶ್ರೀನಿವಾಸ ವಿಠಲ ವೈಕುಂಠದೇವಂ
ಶ್ರೀನಿಧಿ ಸುಖಪತಿ ಮೂಜಗಕಾವಂ (೩)

ಯದುಕುಲ ನಂದನನೆ ಮಾಧವ ದೇವಕಿ ಪ್ರಿಯಸುತನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೭.೨೦೧೧

Sunday, July 3, 2011

Shri Krishnana Nooraru Geethegalu - 132

ಶ್ರೀರಾಯ ಗುರುರಾಯ

ನೆಚ್ಚಿಬಂದೆನೊ ನಿನ್ನ ನರಹರಿಯೊಲಿದವನೆ
ಶ್ರೀರಾಯ ಗುರುರಾಯ ಗುರುಸಾರ್ವಭೌಮ

ಅಕ್ಷಯನೆ ಗುಣಧಾಮ ಸುಜನಕುಲ ಕ್ಷೇಮ
ಶ್ರೀಮಧ್ವಮತಸೋಮ ಸುಜ್ಞಾನದುಗಮ
ಶ್ರೀರಾಮ ಮಾನಸನೆ ಶ್ರೀಪಾದ ಪೂಜಿತನೆ
ಯತಿರಾಜ ಗುರುರಾಜ ಗುರುಸಾರ್ವಭೌಮ (೧)

ಹರಿಬಕುತಿಲೋಲ ಶ್ರೀ ಮುದ್ರಾಕ್ಷಮಾಲ
ಇಷ್ಟಾರ್ಥದಾಯಕನೆ ಶರಣ ಪರಿಪಾಲ
ಪುಣ್ಯವರ್ಧನ ದೇವ ಗುರುರಾಘವೇಂದ್ರನೆ
ಸುರೇಂದ್ರ ಸುಮತೀಂದ್ರ ಗುರುಸಾರ್ವಭೌಮ (೨)

ಭವದೆನ್ನ ಭಯಹರಿಸೊ ಭುವನಗಿರಿದೇವ
ಪ್ರಹ್ಲಾದ ಪ್ರತಿರೂಪ ಕಲಿಯುಗವ ಕಾವ
ಶ್ರೀನಿವಾಸ ವಿಠಲನ ಶ್ರೀಪಾದ ಸೇವಿಪನೆ
ಸಕಲರನು ಸಲಹಯ್ಯ ಗುರುಸಾರ್ವಭೌಮ (೩)

ನೆಚ್ಚಿಬಂದೆನೊ ನಿನ್ನ ನರಹರಿಯೊಲಿದವನೆ
ಶ್ರೀರಾಯ ಗುರುರಾಯ ಗುರುಸಾರ್ವಭೌಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೧

Thursday, June 30, 2011

Shri Krishnana Nooraru Geethegalu - 131

ಶ್ರೀಹರಿಯೆ ಅಂಬುಜಾಕ್ಷ

ಶ್ರೀಹರಿಯೆ ಅಂಬುಜಾಕ್ಷ ಅವನೀಶನೆ ನಳಿನಾಕ್ಷ
ಪೊರೆಯುವುದೊ ಪಾಮರನ ಪರಮೇಶ್ವರ... ಕೃಷ್ಣ

ಬೇಡುವೆನೊ ಬಕುತಿಯೊಳು ಭವತುಂಬಿದಂಧದೊಳು
ಕೈಯಿಡಿದು ನಡೆಸೆನ್ನ ಜಗದೀಶ್ವರ...ಕೃಷ್ಣ (೧)

ಇನಿತೆನ್ನ ಜನುಮಗಳ ನಿನ್ನನಿತು ರೂಪದೊಳು
ಆದರದಿ ಸಲಹಿದನೆ ಸರ್ವೇಶ್ವರ...ಕೃಷ್ಣ (೨)

ಶ್ರೀಪಾದ ಸೇವಿಸುವೆ ಉಸಿರದುವೆಯಿರುವನಕ
ಶ್ರೀನಿವಾಸ ವಿಠಲನೆ ಸುಖಸಾಗರ...ಕೃಷ್ಣ (೩)

ಶ್ರೀಹರಿಯೆ ಅಂಬುಜಾಕ್ಷ ಅವನೀಶನೆ ನಳಿನಾಕ್ಷ
ಪೊರೆಯುವುದೊ ಪಾಮರನ ಪರಮೇಶ್ವರ... ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೬.೨೦೧೧

Sunday, June 26, 2011

Shri Krishnana Nooraru Geethegalu - 130

ಕರಮುಗಿವೆನೊ ದೇವ

ಕರಮುಗಿವೆನೊ ದೇವ ನಾರಾಯಣ
ಶ್ರೀಕರ ಶುಭಕರ ಶ್ರೀಶೇಷಶಯನ

ಸಿರಿಲಕುಮೀರಮಣ ಮೂಜಗಕಾರಣ
ಪಂಕಜನಯನ ಶ್ರೀ ನರಕುಲಕಲ್ಯಾಣ
ಭಕ್ತವತ್ಸಲ ದೇವ ಭವಭಯಹರಣ
ಮುನಿಜನಕರುಣ ಶ್ರೀವೇಂಕಟರಮಣ (೧)

ದ್ವಾರಕಾವಾಸಶ್ರೀ ಗೋಕುಲಪಾಲನೆ
ಗೋಪಪ್ರಿಯಾಶ್ರಿತ ಗೋವರ್ಧನನೆ
ಪಾಂಡವಪರಪಕ್ಷ ರಾಧಾಮಾಧವನೆ
ಮದನಮೋಹನಕೃಷ್ಣ ಮುರಳೀಧರನೆ (೨)

ಆದಿನಾರಾಯಣ ಪುರುಷೋತ್ತಮನೆ
ಸೀತಾಹೃದಯ ಶ್ರೀಕೌಸಲ್ಯಾಸುತನೆ
ಬಿಡದೆ ಭಜಿಪೆನೊ ನಿನ್ನ ಮಾರುತಿ ದೇವನೆ
ಸಕಲರ ಸಲಹಯ್ಯ ಶ್ರೀನಿವಾಸ ವಿಠಲನೆ (೩)

ಕರಮುಗಿವೆನೊ ದೇವ ನಾರಾಯಣ
ಶ್ರೀಕರ ಶುಭಕರ ಶ್ರೀಶೇಷಶಯನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೬.೨೦೧೧

Monday, June 20, 2011

Shri Krishnana Nooraru Geethegalu - 129

ಕರೆತಂದವ ನೀನು

ಕರೆತಂದವ ನೀನೊ ಇಲ್ಲವೆನದಿರು ರಂಗ
ಕಾಯುವುದು ನಿನ್ನ ಧರ್ಮ ಕಾಯಕವೊ ಗೋವಿಂದ

ನೀನೆತ್ತ ಪೋಗುವೆಯೊ ಕರೆದೋಗು ಎಂದೆ ನಾ
ನಿನ್ನ ಶ್ರೀಪಾದದೊಳು ಎನ್ನಿರುವು ಎಂದೆ ನಾ
ಆವುದೋ ಯೋನಿಯಲಿ ಜೀವವಾಗಿಸಿ ಎನ್ನ
ಕರೆತಂದ ಕರುಣಾಳೆ ಕಾಪಾಡೊ ಗೋವಿಂದ (೧)

ಹಸಿವನಿಟ್ಟವ ನೀನು ಅನ್ನವನು ಇಕ್ಕುವುದು
ಹರಸಿ ಆಶೀರ್ವದಿಸಿ ಆಶ್ರಯದೊಳು
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲನೆ
ಸರ್ವಮಂಗಳ ಸುಖದಿ ಸಲಹಯ್ಯ ಎನ್ನ (೨)

ಕರೆತಂದವ ನೀನೊ ಇಲ್ಲವೆನದಿರು ರಂಗ
ಕಾಯುವುದು ನಿನ್ನ ಧರ್ಮ ಕಾಯಕವೊ ಗೋವಿಂದ

(ದಿನಾಂಕ ೨೦.೦೬.೨೦೧೧ರಂದು ತಿರುಮಲ ಶ್ರೀನಿವಾಸ ಸನ್ನಿಧಿಯಲ್ಲಿ ರಚಿಸಿದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೧

Saturday, June 18, 2011

Shri Krishnana Nooraru Geethegalu - 128

ಆದಿನಾಥ ಶ್ರೀನಾಥ

ಸನಾತನ ಸಲಹೀ ಅನಾಥನ ದೀನ
ನಾಥನಾಮದಾದಿನಾಥ ಶ್ರೀನಾಥ

ನೀನಿತ್ತ ತನುಮನವೊ ಬಹುಶುದ್ಧದೊಳು ಹರಿಯೆ
ಪಂಚಾಬ್ಧಿಯೊಳರಂಗ ಸರಿಶುದ್ಧವೊ
ನಡೆ ನೇರ ನುಡಿ ನೇರ ನಿಯತಿ ನಿನ್ನೊಳು ಹರಿಯೆ
ವೈಕುಂಠಪತಿ ಪೊರೆಯೊ ನಾರಾಯಣ (೧)

ಆದಿಯೊಳು ಅಜಮಿಳನ ಹರಿಯೆಂದಸುರಸುತನ
ಧರ್ಮವ ಗೆಲಿಸೆಂದು ಮೊರೆಬಂದ ಪಾಂಡವನ
ನೇಮದೊಳು ನಡೆಸಿದೆಯೊ ಶ್ರೀನಿವಾಸ ವಿಠಲಯ್ಯ
ಸುಖದೊಳಗೆ ನಡೆಸಿನ್ನು ಈ ದೀನನ (೨)

ಸನಾತನ ಸಲಹೀ ಅನಾಥನ ದೀನ
ನಾಥನಾಮದಾದಿನಾಥ ಶ್ರೀನಾಥ

(ದಿನಾಂಕ ೨೦.೦೬.೨೦೧೧ರಂದು ತಿರುಮಲ ಶ್ರೀನಿವಾಸ ಸನ್ನಿಧಿಯಲ್ಲಿ ಪರಿಷ್ಕರಿಸಿ ಬರೆದದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೧

Saturday, June 11, 2011

Shri Krishnana Nooraru Geethegalu - 127

ಸ್ಮರಣೆಯೆ ಪುಣ್ಯವೊ

ಸ್ಮರಣೆಯೆ ಪುಣ್ಯವೊ ಹರಿನಾಮ..ನಾಮ
ಇಹಗತಿ ಮುಕುತಿಗೆ ಸುಖಧಾಮ..ರಾಮ

ಬ್ರಹ್ಮಮಾನಸಸುತ ತಂಬೂರನಾರದರು
ನಾದದೊಳ್ಹಾಡಿದ ಹರಿನಾಮ
ದ್ವೈಪಾಯನ ಶ್ರೀಮುನಿವೇದವ್ಯಾಸರು
ವೇದದೊಳೋದಿದ ಹರಿನಾಮ (೧)

ಮಧ್ಯಮಪಾಂಡವ ವೀರಾರ್ಜುನ ಧರ್ಮ
ವಿಜಯಕೆ ನೆಚ್ಚಿದ ಹರಿನಾಮ
ಕೇಸರಿಸುತ ಶ್ರೀಹನುಮಂತದೇವನು ಬಕುತಿ
ಯೊಳೊಪ್ಪಿದ ಹರಿನಾಮ (೨)

ದಾಸಾದಿದಾಸ ಶ್ರೀಪುರಂದರದಾಸರು ಕಲಿ
ಯೊಳು ಜಪಿಸಿದ ಹರಿನಾಮ
ಶ್ರೀನಿವಾಸ ವಿಠಲನೆ ನೀನೆಮ್ಮ ಗತಿಯೆನಲು
ಕರುಣಿಸಿ ಕಾಯುವ ಹರಿನಾಮ (೩)

ಸ್ಮರಣೆಯೆ ಪುಣ್ಯವೊ ಹರಿನಾಮ..ನಾಮ
ಇಹಗತಿ ಮುಕುತಿಗೆ ಸುಖಧಾಮ..ರಾಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೬.೨೦೧೧

Thursday, June 9, 2011

Shri Krishnana Nooraru Geethegalu - 126


ದೇವಂ ಅಕ್ಷಯನಿಧೇ


ದೇವಂ ಅಕ್ಷಯನಿಧೇ ಶ್ರೀಹರಿ
ಶ್ರೀನಿಧೇ ಸುನಿಧೇ ಕರುಣಾನಿಧೇ

ಸೃಷ್ಟಿದಾಯಕಂ ಶ್ರೀಹರಿ ತ್ರಿಜಗಪಾಲಕಂ
ಅಣುರೇಣು ಸಕಲಸುಜನ ಸುಖದಾಯಕಂ

ಶುಭದಾಯಕಂ ಶ್ರೀಹರಿ ಸುಫಲಪೂರಿತಂ
ಸತ್ಸಂಗ ಮಂಗಳಾಂಗ ಮಹಾಮೂರುತೀಂ

ಶಕ್ತಿದಾಯಕಂ ಶ್ರೀಹರಿ ಯುಕುತಿಧಾರಿತಂ
ಧರಣೀಶಂ ದುರಿತಹರಂ ಧರ್ಮಪಾಲಕಂ

ಪುಣ್ಯಪೋಷಿತಂ ಶ್ರೀಹರಿ ಪಾಪನಾಶಿತಂ
ಶ್ರೀನಿವಾಸ ವಿಠಲದೇವಂ ಸರ್ವರಕ್ಷಿತಂ

ದೇವಂ ಅಕ್ಷಯನಿಧೇ ಶ್ರೀಹರಿ
ಶ್ರೀನಿಧೇ ಸುನಿಧೇ ಕರುಣಾನಿಧೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೬.೨೦೧೧

Monday, June 6, 2011

Shri Krishnana Nooraru Geethegalu - 125

ನಾರಾಯಣಂ ವಂದೇ

ನಾರಾಯಣಂ ವಂದೇ ಆದಿರೂಪಂ
ನಾರಾಯಣಂ ವಂದೇ ದೇವದೇವಂ

ನಾರಾಯಣಂ ವಂದೇ ತ್ರೇತಾರಾಮಂ
ನಾರಾಯಣಂ ವಂದೇ ತ್ರಿಜಗಕ್ಷೇಮಂ

ನಾರಾಯಣಂ ವಂದೇ ವಾಸುದೇವಂ
ನಾರಾಯಣಂ ವಂದೇ ಶ್ರೀಮಾಧವಂ

ನಾರಾಯಣಂ ವಂದೇ ಪಾಪಹಾರಂ
ನಾರಾಯಣಂ ವಂದೇ ಪುಣ್ಯದಾಯಂ

ನಾರಾಯಣಂ ವಂದೇ ಶ್ರೀಗಂಧತಿಲಕಂ
ನಾರಾಯಣಂ ವಂದೇ ಸುಜನಪುಳಕಂ

ನಾರಾಯಣಂ ವಂದೇ ತ್ರಿಜಗಪಾಲಂ
ದಶರೂಪಂ ವಂದೇ ಶ್ರೀನಿವಾಸ ವಿಠಲಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೬.೨೦೧೧

Shri Krishnana Nooraru Geethegalu - 124

ನಾಮಸ್ಮರಣೆಯ ಮಾಡೊ

ನಾಮಸ್ಮರಣೆಯ ಮಾಡೊ ಶ್ರೀಕೃಷ್ಣನ
ಇಂದಿರಾರಮಣ ಶ್ರೀಗೋವಿಂದನ

ಇನಿತು ಜನುಮಗಳಲ್ಲಿ ನೀಗೈದ ದುರಿತಗಳ
ಕಳೆದು ಕರುಣಿಸಿ ಕಾಯೊ ವಸುದೇವಕಂದನ
ಮುನ್ನಾರು ಜನುಮದೊಳು ಕಾಡುವ ಕರ್ಮಗಳ
ಮೆಟ್ಟಿ ಹರಸುವಯೆಮ್ಮ ರುಕ್ಮಿಣಿಯೊಡೆಯನ (೧)

ತ್ರೇತೆರಾಮನೊ ಇವನು ಪಿತವಾಕ್ಯ ಪಾಲಕನು
ಧರೆಯ ಧರ್ಮವ ಕಾಯ್ದ ಪುರುಷೋತ್ತಮ
ಸತ್ಯವಚನನೊ ರಾಮ ಸುಖದಿ ಸುಜನರ ಕಾವ
ಹನುಮ ಭೀಮರ ದೇವ ಸುಗುಣಧಾಮ (೨)

ಮದನನಯ್ಯನೊ ಇವನು ಕಂಸಕೇಡನು ಕೆಡುವಿ
ಮಾನಜನರನು ಕಾಯ್ದ ಮೇಘಶ್ಯಾಮ
ಶ್ರೀನಿವಾಸ ವಿಠಲಯ್ಯ ಗತಿ ನೀನೆ ಸಲಹೆನಲು
ಬಿಡದೆ ಕಲಿಯೊಳು ಕಾವ ಜೀವಕಾಮ (೩)

ನಾಮಸ್ಮರಣೆಯ ಮಾಡೊ ಶ್ರೀಕೃಷ್ಣನ
ಇಂದಿರಾರಮಣ ಶ್ರೀಗೋವಿಂದನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೬.೨೦೧೧

Sunday, June 5, 2011

Shri Krishnana Nooraru Geethegalu - 123

ತಿರುಮಲೆ ಪುಣ್ಯನೆಲೆ

ಧನ್ಯ ಧನ್ಯವೀ ತಿರುಮಲೆ
ಜಗದಾದಿವಂದಿತನ ಪುಣ್ಯನೆಲೆ

ಅಣುರೇಣುತೃಣರನು ಅನುಗಾಲವು ಕಾವ
ದಶರೂಪದೇವ ಶ್ರೀ ವೇಂಕಟರಾಯರು
ಶ್ರೀಆದಿಶೇಷನ ಸಪ್ತಾದ್ರಿ ನಿಲಯದೊಳು
ಸುಖದೊಳು ನೆಲೆಸಿಹ ನಿಜನೆಲೆ (೧)

ಪುಣ್ಯದಾಯಿನಿ ಧರಣಿ ಪಾಪಹಾರಿಣಿ ಕರುಣಿ
ಮುಕ್ಕೋಟಿ ದೇವಗಣ ಆಶ್ರಿತೆ ಪಾವನಿ
ಶ್ರೀನಿವಾಸ ವಿಠಲನ ಸಿರಿಲಕುಮಿ ಆದಿಯೊಳು
ಶ್ರೀಪಾದ ಸೇವಿಪ ಸಿರಿನೆಲೆ (೨)

ಧನ್ಯ ಧನ್ಯವೀ ತಿರುಮಲೆ
ಜಗದಾದಿವಂದಿತನ ಪುಣ್ಯನೆಲೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೬.೨೦೧೧

Wednesday, June 1, 2011

Shri Krishnana Nooraru Geethegalu - 122

ನಿನ್ನ ಗೂಡಿನಾಶ್ರಯದೊಳು

ಜಗದ್ಹಗಲವೊಡಲೊಳುದಿಸುವಾದಿತ್ಯನಾದಿ
ಕಿರಣಾಂತರಂಗದೊಳು ನೀನಿರುವೆ ಹರಿಯೆ

ಬುವಿಬಸುರಿನಾಳವ್ಹರಿದು ಕಣ್ತೆರೆವ ಜೀವ
ಬೀಜದಾಶಯದೊಳು ನೀನಿರುವೆ ಹರಿಯೆ

ಚಿಗುರಿದಾ ಚಿಗುರೆಯ್ಹಸಿರುಗಿಡಮರದ್ಯೌವ್ವನದ
ಮೈಮನಪುಳಕಿತದಂದದಿ ನೀನಿರುವೆ ಹರಿಯೆ

ಮೈದುಂಬಿದಾವೃಕ್ಷದ್ಹೂಯೀಚುಕಾಯಣ್ಣ ಸವಿದ
ಕೋಕಿಲಶಾರೀರದೊಳು ನೀನಿರುವೆ ಹರಿಯೆ

ಇಂತಿರ್ಪ ಶ್ರೀನಿವಾಸ ವಿಠಲನೆಂಬೀ ಕಲ್ಪವೃಕ್ಷದಾ
ಕೊನೆಗೂಡಿನಾಶ್ರಯದೊಳು ನಾನಿರುವೆ ಹರಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೬.೨೦೧೧

Monday, May 30, 2011

Shri Krishnana Nooraru Geethegalu - 121

ಶ್ರೀಪಾದಸೇವೆಯೆ

ಅರಸುತನವಿಲ್ಲೆನಗೆ ಆಸ್ಥಾನ ದೊರೆತನವು
ಅಂತಃಪುರ ಮೊದಲಿಲ್ಲ ಅರಸಿ ಸಖಿಬಳಗ
ಮಂತ್ರಿಮಾಗಧರಿಲ್ಲ ಸೆಣೆವ ಸೈನಿಕರಿಲ್ಲ
ಕಪ್ಪಕಾಣಿಕೆಯೊಪ್ಪಿಸುವ ಅಂಗರಾಜರು
ಒಡ್ಡೋಲಗವಿಲ್ಲ ಪರಾಕು ಪರಿಚಾರಕರಿಲ್ಲ
ಗಾಯಕ ನೃತ್ಯಕರಿಲ್ಲ ಮೇಣ್ ನೆಲಜಲದ
ಧಿಕಾರವೆನಗಿಲ್ಲವೊ ಹರಿಯೆ

ವಜ್ರವೈಢೂರ್ಯಗಳಿಲ್ಲ ನವಮುಕುಟ ಮಣಿಮಾಲೆ
ಇಲ್ಲವೊ ವಡವೆವಡ್ಯಾಣನವರತ್ನಾಭರಣ ಕಿರೀಟವು
ಗಜಾಶ್ವದಕ್ಷೋಯಿಣಿಯಿಲ್ಲ ಖಡ್ಗ ಗುರಾಣಿಗಳಿಲ್ಲ
ಕೋಟೆಕೊತ್ತಲವ ವಿಜಯಿಸುವ ಹುರಿಮೀಸೆ ಗುರಿಯಾಳು

ಶ್ರೀಪಾದ ಸೇವೆಯೆ ಅರಸುತನವೆನಗೆ
ಪರಮುಕುತಿ ಆಸ್ಥಾನ ದೊರೆತನವು
ನಿನ್ನ ವೈಕುಂಠವೆ ಅಂತಃಪುರವೆನಗೆ
ಹರಿದಾಸ ಸಖ್ಯವೆ ಅರಸಿ ಸಖಿಬಳಗ
ಮಂತ್ರಿಮಾಗಧರು ಸುಜನ ಸೈನಿಕರು
ಅವರಿಡುವನ್ನವೆ ಕಪ್ಪಕಾಣಿಕೆಯೆನಗೆ
ನಿನ್ನ ಒಗ್ಗೂಡಿ ಪಾಡುವುದೆ ಒಡ್ಡೋಲಗ
ಪರಾಕು ಸೇವೆಯದು ಪರಿಚಾರಿಕ ಧರ್ಮ ಗಾನನಾಟ್ಯವೆಲ್ಲ

ನಿನ್ನ ಶ್ರೀನಾಮವದು ವಜ್ರವೈಢೂರ್ಯವು
ಧರಿಸಿದರಂತರಂಗದಿ ನವಮುಕುಟಮಣಿಮಾಲೆ ವಡವೆವಡ್ಯಾಣ
ಶಿರಬಾಗಿದೊಡೆ ನಿನಗೆ ನವರತ್ನಾಭರಣ ಕಿರೀಟ
ನಿನ್ನ ಶ್ರೀರಕ್ಷೆಯೆ ಗಜಾಶ್ವಸೇನೆ ಖಡ್ಗ ಗುರಾಣಿ
ಕೋಟೆಕೊತ್ತಲವ ಜಯಿಸುವ ಹುರಿಮೀಸೆ ಗುರಿಯಾಳು

ಇಂತಿರ್ಪ ಶ್ರೀನಿವಾಸ ವಿಠಲನ ಅಡಿಯಾಳು ನಾನೆನಲು
ಅದಾವ ಅರಸಗೆ ಕೀಳು ಕಾಯೊ ಮೂಜಗದಯ್ಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೫.೨೦೧೧

Sunday, May 29, 2011

Shri Krishnana Nooraru Geethegalu - 120

ರಂಗ ಶ್ರೀರಂಗ

ರಂಗ ಶ್ರೀರಂಗ ವೇದಾಂಗಾಂಗ
ನಿನ್ನ ಸಂಗದಿ ಸಲಹೊ ಶ್ರೀಹರಿ ಪಾಂಡುರಂಗ

ಕೇಸರಿಸುತನ ಶಬರಿ ಅಹಲ್ಯೆಯ
ಸಲಹಿದಂದದಿ ಸಲಹೊ ತ್ರೇತೆಯ ರಾಮಯ್ಯ
ಅಸುರನನುಜಗೆ ಅರಸು ಪಟ್ಟಕಟ್ಟಿದ ದೊರೆಯೆ
ಶ್ರೀಪಾದಸೇವೆಯನು ಎನಗಿತ್ತು ಸಲಹೊ

ಆದಿಯೊಳು ಅಜಮಿಳನು ನಾರಾಯಣನೆನಲು
ಆ ಕ್ಷಣದಿ ಕಂಡವನೆ ದೇವದೇವ
ಕರಿಯ ಕುಚೇಲರ ಕರುಣದಿಂ ಕಾಯ್ದವನೆ
ಶ್ರೀಚರಣಸೇವೆಯನು ಎನಗಿತ್ತು ಸಲಹೊ

ಮೂಜಗದೊಡಯನೆ ನೀನೆನ್ನಯ ಜಗವೊ
ನಿನ್ನ ಶ್ರೀನಾಮನುಡಿ ಜೀವಾಮೃತ
ಭಕ್ತವತ್ಸಲ ಸಲಹೊ ಶ್ರೀನಿವಾಸ ವಿಠಲಯ್ಯ
ಕಲಿಯೊಳಿಹ ಜೀವರನು ಬಿಡದೆ ಸತತ

ರಂಗ ಶ್ರೀರಂಗ ವೇದಾಂಗಾಂಗ
ನಿನ್ನ ಸಂಗದಿ ಸಲಹೊ ಶ್ರೀಹರಿ ಪಾಂಡುರಂಗ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೫.೨೦೧೧

Saturday, May 28, 2011

Shri Krishnana Nooraru Geethegalu - 119

ಹಯಗ್ರೀವಂ ಮಹಾವಿಷ್ಣುಂ

ನಮೋ ದೇವಂ ಹಯಗ್ರೀವಂ ಸಕಲ ವಿದ್ಯಾಧೀಶ್ವರಂ
ಸ್ಮರೇನಿತ್ಯಂ ಮಹಾವಿಷ್ಣುಂ ಸರ್ವಮಂಗಳದಾಯಕಂ

ತುರಂಗವದನಂ ಮಹಾಮಂತ್ರಶರೀರಂ ಲಕ್ಷ್ಮೀಸಹಿತಂ
ಶ್ವೇತಪದ್ಮಾಸ್ಥಿತಂ ಶ್ರೀದೇವಂ ಶ್ವೇತಧರಂ ಶುಭ್ರಂ

ಸತ್ವಮೂರ್ತಿಂ ದಿವ್ಯತೇಜಂ ಬ್ರಹ್ಮಗರ್ವಶಮನಂ
ಮಧುಕೈಟಭಾಸುರಾಂತಕಂ ಚತುರ್ವೇದ ಸಂರಕ್ಷಕಂ

ನೀಳನಾಸಿಕಂ ಹಯಶಿರಂ ಸ್ಫಟಿಕಾಕೃತಿಂ ಲೋಕಕರ್ಣಂ
ರವಿಕಿರಣಕೇಶಂ ಭೂನೊಸಲನ್ ಸೋಮಸೂರ್ಯಾಕ್ಷಂ

ಸಂಧ್ಯಾದೇವಿ ನಾಸಿಕದೊರಳನ್ ಪಿತೃದೇವತಾದಂತಂ
ಗೋಬ್ರಹ್ಮಲೋಕಾಧರಂ ಸಾಮವೇದಸ್ವರವುದ್ಗೀತಂ

ನಮೋ ದೇವಂ ಹಯಗ್ರೀವಂ ಶ್ರೀನಿವಾಸ ವಿಠಲಂ
ಭಜೇ ನಿತ್ಯಂ ಕಾವಂ ದಶರೂಪಂ ಮೂಜಗಪಾಲಂ

(ದಿನಾಂಕ ೨೮.೦೫.೨೦೧೧ರಂದು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಪರಕಾಲಮಠದ ಶ್ರೀಲಕ್ಷ್ಮೀಹಯಗ್ರೀವ ದೇವಳದಲ್ಲಿ ಭಗವಂತನ ದರ್ಶನದ ನಂತರದ ರಚಿಸಿದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೫.೨೦೧೧

Friday, May 27, 2011

Shri Krishnana Nooraru Geethegalu - 118

ನೀನಲ್ಲವೇ ಕೃಷ್ಣ

ಏನ ಕೇಳಲೊ ಹರಿಯೆ ಎಲ್ಲವೂ ನಿನ್ನದೇ
ಎನ್ನ ಕರೆತಂದವನೂ ನೀನಲ್ಲವೇ ಕೃಷ್ಣ

ಅಣುವಿನೀ ದೇಹದೊಳು ಗುಣಾವಗುಣ ಗೊಂಬೆ
ಆಡಿಸುವ ಸೂತ್ರಕನು ನೀನಲ್ಲವೆ
ಮತ್ತಾರು ಮತ್ತರನು ಅಂಕೆಯಿಲ್ಲದೆ ಬಿಟ್ಟು
ಮಾಯೆಯಾಟದೊಳಿಹನು ನೀನಲ್ಲವೆ (೧)

ತಲೆಗುಣಿಸಿದರಸರು ಧರೆಯಾಳುವೆವೆಂದು
ಆರ್ಭಟಿಸೆ ನಕ್ಕವನು ನೀನಲ್ಲವೆ
ತೊಡೆಮುರಿದ ಕೌರವನು ದೈನ್ಯನಾಗಿರಲಾಗ
ಧರ್ಮವನು ಗೆಲಿಸಿದನು ನೀನಲ್ಲವೆ (೨)

ಪಂಚಭೂತಾಬ್ಧಿಯ ಸ್ಥಿತಿಗತಿಲಯದೊಳಗೆ
ಬಹಿರಾಂತರ ಶಕ್ತಿ ನೀನಲ್ಲವೆ
ನೀನೆನ್ನ ಗತಿಯೆನಲು ಬಿಡದೇ ಸಲಹುವ ದೊರೆಯೆ
ಶ್ರೀನಿವಾಸ ವಿಠಲನು ನೀನಲ್ಲವೆ (೩)

ಏನ ಕೇಳಲೊ ಹರಿಯೆ ಎಲ್ಲವೂ ನಿನ್ನದೇ
ಎನ್ನ ಕರೆತಂದವನೂ ನೀನಲ್ಲವೇ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೧

Thursday, May 26, 2011

Shri Krishnana Nooraru Geethegalu - 117

ಬಾರಮ್ಮ ಸಿರಿಲಕುಮಿ

ಬಾರಮ್ಮ ಸಿರಿಲಕುಮಿ ಬಾರೆಮ್ಮ ಮನೆಗೆ
ಪನ್ನಗಶಯನ ಶ್ರೀವೈಕುಂಠಪತಿಯೊಡನೆ

ಸರ್ವಮಂಗಳೆ ದೇವಿ ಚಂದಿರವದನೆಯೆ
ಶಂಖ ಚಕ್ರ ಗದಾ ಪುಣ್ಯಹಸ್ತೆ
ನವರತ್ನಾಭರಣೆ ನಯನಮನೋಹರಿ
ನರಹರಿಯೊಡ ನಾಚಿ ನಲಿಯುತಲಿ (೧)

ಮಂಗಳ ಮಂಟಪದಿ ಬಿಲ್ವದಲಂಕಾರ
ಜಾಜಿ ಮಲ್ಲಿಗೆ ಪದ್ಮ ಮೊದಲಿಡುವೆ
ಅರಿಶಿಣ ಕುಂಕುಮ ಕಣ ಕಾಣಿಕೆಗಳ
ಶ್ರೀಹರಿಯೊಡತಿಯೆ ನಿನಗಿಡುವೆ (೨)

ಶ್ರೀಪಾದನೊಡನೆ ಸಿರಿಪಾದದೊಡತಿಯೆ
ಹೆಜ್ಜೆ ಬಲದೆಜ್ಜೆಯಿಟ್ಟು ನೀ ಬಾರೆ
ಶ್ರೀನಿವಾಸ ವಿಠಲನ ಶ್ರೀಪಾದ ಸೇವಕಿಯೆ
ಮೂಜಗದೊಡೆಯನ ಕರೆ ತಾರೆ (೩)

ಬಾರಮ್ಮ ಸಿರಿಲಕುಮಿ ಬಾರೆಮ್ಮ ಮನೆಗೆ
ಪನ್ನಗಶಯನ ಶ್ರೀವೈಕುಂಠಪತಿಯೊಡನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೧

Shri Krishnana Nooraru Geethegalu - 116

ಯಾಚಕ ನಾನೊ

ಯಾಚಕ ನಾನೊ ಹರಿ ನಿನ್ನ ಮುಂದೆ
ಪ್ರದಾಯಕ ನೀನೊ ಶ್ರೀಕೃಷ್ಣ ತಂದೆ

ಆದಿಮೂಲದೊಳು ಜಲರೂಪದಿ ಸಂದೆ
ಕೂರ್ಮವರಾಹನರಸಿಂಹ ರೂಪಿಂದೆ
ಬಲಿಯ ನೆತ್ತಿಯ ಮೆಟ್ಟಿ ಕಶ್ಯಪನ ಕೊಂದೆ
ಭಾರ್ಗವ ಬಲರಾಮ ಲವಕುಶ ತಂದೆ (೧)

ಸುಜನರ ಸಲಹಲು ದಶರೂಪದಿ ಬಂದೆ
ಪರಶುರಾಮ ಶ್ರೀ ಮದನನ ತಂದೆ
ಶ್ರೀಪಾದದೊಡೆಯನೆ ಶ್ರೀನಿವಾಸ ವಿಠಲ
ಕಾಯೊ ಸುಖದೊಳು ಎಮ್ಮನು ಮುಂದೆ (೨)

ಯಾಚಕ ನಾನೊ ಹರಿ ನಿನ್ನ ಮುಂದೆ
ಪ್ರದಾಯಕ ನೀನೊ ಶ್ರೀಕೃಷ್ಣ ತಂದೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೫.೨೦೧೧

Shri Krishnana Nooraru Geethegalu - 115

ರಾಧೆ ಮಾಧವ ಚೆಲುವ

ಗೋವಿಂದ ಜಯಜಯ ಗೋವಿಂದ ಕೃಷ್ಣ
ರಾಧೆ ಮಾಧವ ಚೆಲುವ ಜಯಜಯ ಕೃಷ್ಣ

ಯದುವಂಶಕುಲಜಶ್ರೀ ಗೋವಿಂದ ಕೃಷ್ಣ
ವಸುದೇವಕಂದನೆ ಗೋವಿಂದ ಕೃಷ್ಣ
ದೇವಕಿಯರವಿಂದ ಗೋವಿಂದ ಕೃಷ್ಣ
ಯಶೋದೆಯಾನಂದ ಗೋವಿಂದ ಕೃಷ್ಣ (೧)

ಸೆರೆಯೊಳು ಉದಿಸಿದ ಗೋವಿಂದ ಕೃಷ್ಣ
ಗೋಕುಲದಿ ನೆಲೆಸಿದ ಗೋವಿಂದ ಕೃಷ್ಣ
ಭಾಮೆಯ ಮನಚೋರ ಗೋವಿಂದ ಕೃಷ್ಣ
ಗೋಪಜನ ಪ್ರಿಯದೇವ ಗೋವಿಂದ ಕೃಷ್ಣ (೨)

ದುರುಳರ ಮಡುಹಿದ ಗೋವಿಂದ ಕೃಷ್ಣ
ಕುರುಜನ ಕೆಡುಹಿದ ಗೋವಿಂದ ಕೃಷ್ಣ
ಸುಜನರ ಪೊರೆವ ಶ್ರೀಗೋವಿಂದ ಕೃಷ್ಣ
ಪಾಂಡವಪ್ರಿಯನೆಮ್ಮ ಗೋವಿಂದ ಕೃಷ್ಣ (೩)

ಬಕುತಿಗೆ ಒಲಿವನೊ ಗೋವಿಂದ ಕೃಷ್ಣ
ಯುಕುತಿಲಿ ಸಲಹುವ ಗೋವಿಂದ ಕೃಷ್ಣ
ಶ್ರೀನಿವಾಸ ವಿಠಲನೊ ಗೋವಿಂದ ಕೃಷ್ಣ
ವೈಕುಂಠಪತಿಯೆಮ್ಮ ಗೋವಿಂದ ಕೃಷ್ಣ (೪)

ಗೋವಿಂದ ಜಯಜಯ ಗೋವಿಂದ ಕೃಷ್ಣ
ರಾಧೆ ಮಾಧವ ಚೆಲುವ ಜಯಜಯ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೫.೨೦೧೧

Wednesday, May 25, 2011

Shri Krishnana Nooraru Geethegalu - 114

ಸರಸಿ ಗೊಲ್ಲ

ಜಯಜಯ ವನಮಾಲಿ ಶ್ರೀಹರಿ ಜಯಜಯ ವನಮಾಲಿ
ಗೋವರ್ಧನಧಾರಿ ಕೃಷ್ಣ ಮುರಾರಿ

ನೊಸಲ ಚಂದನ ತಿಲಕ ನಯನ ತೀಡಿದ ಕಪ್ಪು
ಹವಳರೇಖೆಯ ಚಿತ್ರ ತುಟಿ ಕೆಂಪು
ಸಂಜೆ ಸೂರ್ಯನ ಗಲ್ಲ ನಯನದಿ ನಗೊ ನಲ್ಲ
ರಾಧೆ ಸಂಗದಿಯೆಮ್ಮ ಸರಸಿ ಗೊಲ್ಲ (೧)

ಶಂಖ ಚಕ್ರ ಗದಾ ಮಕರಕುಂಡಲಧರಿತ
ನವರತ್ನಾಭರಣ ಕೌಸ್ತುಭನು
ಕೇಯೂರನು ಕೃಷ್ಣ ಶ್ರೀತುಳಸಿ ಪೂಜಿತನು
ಸುಂದರ ಶ್ಯಾಮಲ ಗೋಕುಲನು (೨)

ದಶರಥಸುತನು ಧರೆಯ ಕಾಯ್ದವನು
ದ್ವಾರಕಾ ಗೋವಿಂದ ಗೋಪಾಲನು
ಕಲಿಯೊಳಗೆಮ್ಮ ಶ್ರೀನಿವಾಸ ವಿಠಲಯ್ಯ
ನಾರಾಯಣನೆನಲು ಸಲಹುವನು (೩)

ಜಯಜಯ ವನಮಾಲಿ ಶ್ರೀಹರಿ ಜಯಜಯ ವನಮಾಲಿ
ಗೋವರ್ಧನಧಾರಿ ಕೃಷ್ಣ ಮುರಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೫.೨೦೧೧

Tuesday, May 24, 2011

Shri Krishnana Nooraru Geethegalu - 113

ವೇಂಕಟನೊ ಹರಿ

ವೇಂಕಟನೊ ಹರಿ ವೇಂಕಟನೊ ಕೃಷ್ಣ
ಸುಜನರ ಸಂಕಟ ಕಳೆಯುವ ನಿಜನೆಂಟ

ಮಥುರೆಯ ಸೆರೆಯೊಳು ಪುಟ್ಟಿದನೊ ಹರಿ
ಗೋಕುಲ ಗೊಲ್ಲರನೊಪ್ಪಿದನೊ
ದುರುಳರ ತಲೆ ಕುಟ್ಟಿ ದುರಿತದಯೆದೆ ಮೆಟ್ಟಿ
ಧರಣಿ ಧರ್ಮವ ಕಾಯ್ದ ಗೋವಿಂದನೊ (೧)

ಜಲದಾದಿರೂಪನೊ ಅವತಾರಿ ಶ್ರೀಹರಿ
ದಶರೂಪದಿ ಜಗವ ಕಟ್ಟಿದನೊ
ಶರಣಯ್ಯ ಸಲಹೆನಲು ಕರಿಯು ಕುಚೇಲರು
ಕರುಣೆಯಿಂದಲಿ ಕಾಯ್ದ ಕೃಷ್ಣಯ್ಯನೊ (೨)

ಪರಮಾತ್ಮ ಪೊರೆಯೆನಲು ಭಕ್ತವತ್ಸಲ ಹರಿ
ಧರ್ಮದ ಪಾಂಡವಗೊಲಿದವನೊ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲ
ನೆಚ್ಚಿದ ನರರನು ಸಲಹುವನೊ (೩)

ವೇಂಕಟನೊ ಹರಿ ವೇಂಕಟನೊ ಕೃಷ್ಣ
ಸುಜನರ ಸಂಕಟ ಕಳೆಯುವ ನಿಜನೆಂಟ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೫.೨೦೧೧

Monday, May 23, 2011

Shri Krishnana Nooraru Geethegalu - 112

ಹರಿ ನೀನು

ಹರಿ ನೀನು ಹಗಲಯ್ಯ ಎನ್ನಿರುಳಿನೊಳಗಿಗೆ
ಅರಿವಿನಣತೆಯ ಬೆಳಗೊ ಆದಿದೇವ

ಹರಿ ನೀನು ಮಾಮರವು ನಾ ನಿನ್ನ ಕೋಕಿಲವೊ
ದಿವ್ಯನಾಮವ ನುಡಿಸೊ ದೇವದೇವ

ಹರಿ ನೀನು ಹಸಿರಯ್ಯ ಕೊನರದ ಕೊರಡೊ ನಾ
ಚಿಗುರ ಚಿತ್ರವ ಬಿಡಿಸೊ ವಾಸುದೇವ

ಹರಿ ನೀನು ಹರಿವ ನದಿ ನಾ ಬರಿಯ ಪಾತ್ರವೊ
ಒರತೆ ಇಂಗದೆ ಸಲಹೊ ದೇವದೇವ

ಹರಿ ನೀನು ದೀಪ್ತಿಯೊ ನಾನುರಿವ ದೀಪವೊ
ಉಣಿಸಿ ತೈಲವ ಪೊರೆಯೊ ಶ್ಯಾಮದೇವ

ಹರಿ ನೀನು ಧರೆ ಕಾಯ್ವ ಶ್ರೀನಿವಾಸ ವಿಠಲನೊ
ಸುಜನರಾತ್ಮದಿ ನೆಲೆಸೊ ದೇವದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೧

Saturday, May 21, 2011

Shri Krishnana Nooraru Geethegalu - 111

ಪ್ರೀತಿ ನೆನಪಿನ ವೀಣೆ

ಜನ್ಮಜನ್ಮಾಂತರದ ಸ್ಮೃತಿಗಾನ ಮಿಡಿಯುತಿದೆ
ಪ್ರೀತಿ ನೆನಪಿನ ವೀಣೆ ಆಲಿಸೊ ಕೃಷ್ಣ

ಪ್ರಾಣದೇವನೆ ಸಖ ಪುರುಷೋತ್ತಮ ನಿನಗೆ
ಜಯಮಾಲೆ ತೊಡಿಸಿದಾ ಜಾನಕಿಯೊ ನಾ
ಶ್ರೀಪಾದಸೇವೆಯನು ವೈಕುಂಠದೊಳು ಹರಿಯೆ
ದಾಸಿಯಂದದಿಗೈದ ಲಕುಮಿಯೊ ನಾ (೧)

ಗೋಕುಲದ ಗೆಳೆತನದ ಸಂಭ್ರಮದಾ ಕ್ಷಣಗಳನು
ಮುರಳಿಮೋಹನ ಕೃಷ್ಣ ಮರೆತೆಯೆನೊ
ನಿನ್ನ ಪ್ರೀತಿಯ ಹಸಿರು ಎನ್ನ ಯೌವನದಲ್ಲಿ
ಚಿಗುರಿ ನಿಂತಿಹ ಪರಿಯ ಬಲ್ಲೆಯೆನೊ (೨)

ಮದನನಯ್ಯನೆ ಕೃಷ್ಣ ಎನ್ನ ಹೃದಯದ ಜೀವ
ಒಲುಮೆ ಮೇಘಗಳೊಡೆಯ ಸನಿಹ ಬಾರೊ
ಶ್ರೀನಿವಾಸ ವಿಠಲನೆ ಎನ್ನುಸಿರ ಕೃಷ್ಣಯ್ಯ
ಪ್ರೀತಿಯಕ್ಷಯ ಮಧುವ ಎನಗೆ ತಾರೊ (೩)

ಜನ್ಮಜನ್ಮಾಂತರದ ಸ್ಮೃತಿಗಾನ ಮಿಡಿಯುತಿದೆ
ಪ್ರೀತಿ ನೆನಪಿನ ವೀಣೆ ಆಲಿಸೊ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೫.೨೦೧೧

Friday, May 20, 2011

Shri Krishnana Nooraru Geethegalu - 110

ನಮೊ ಮಾರಪಿತಂ

ವಂದೇ ತ್ರೇತಾರಾಮಂ ಕೌಸಲ್ಯೇಯಂ ಅಯೋಧ್ಯಾಪುರನಿವಾಸಂ
ಪುಣ್ಯಪುರುಷಂ ಪುರುಷೋತ್ತಮಂ ವಂದೇ ಶ್ರೀರಾಮಂ ಜಗತ್ಕಾರಣಂ

ವಂದೇ ಮಾರಪಿತಂ ಮುದ್ದುಕೃಷ್ಣಂ ರಾಧಾಹೃದಯಚೋರಂ
ಶ್ಯಾಮಲಾಂಗಂ ಗೋಕುಲವಾಸಂ ವಂದೇ ಶ್ರೀಕೃಷ್ಣಂ ಜಗತ್ ರಕ್ಷಕಂ

ವಂದೇ ನಯನಮನೋಹರಂ ನಾರಾಯಣಂ ಶ್ರೀವೈಕುಂಠನಿಲಯಂ
ಲಕ್ಷೀವಲ್ಲಭಂ ಶ್ರೀನಿವಾಸ ವಿಠಲಂ ವಂದೇ ಗೋವಿಂದಂ ಮೂಜಗಕ್ಷೇಮಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೫.೨೦೧೧

Shri Krishnana Nooraru Geethegalu - 109

ವಂದೇ ಜಗಪಾಲ

ಮುರಳೀಧರನೆ ಕೃಷ್ಣಾನಂದ ನಮಿಪೆನು ವನಮಾಲ
ರಾಧಾವಲ್ಲಭ ಶ್ರೀ ಗೋವರ್ಧನ ವಂದೇ ಜಗಪಾಲ

ಮಾತೆದೇವಕಿ ಅಷ್ಟಮಗರ್ಭನೆ ಜಯಜಯ ಗೋಪಾಲ
ಸುಜನರಾ ವಸುದೇವನ ಕಂದನೆ ಜಯಜಯ ಶ್ರೀಪಾಲ
ಯಾದವವಂಶಜ ಶ್ರೀಕುಲತಿಲಕನೆ ಜಯಜಯ ದಿಕ್ಪಾಲ
ದೇವ ಸುದೇವನೆ ಶ್ಯಾಮಲಸುಂದರ ಮೂಜಗ ಪರಿಪಾಲ (೧)

ದೇವದೇವರೊಳು ಆದಿದೇವನೆ ಜಯಜಯ ಗೋಪಾಲ
ತ್ರೇತಾರಾಮ ಗೋಕುಲಶ್ಯಾಮನೆ ಜಯಜಯ ಶ್ರೀಪಾಲ
ದಶರೂಪದೊಳು ಧರಣಿಯ ಕಾವನೆ ಜಯಜಯ ದಿಕ್ಪಾಲ
ಜಯಮಂಗಳನೆ ಶ್ರೀನಿವಾಸ ವಿಠಲ ಮೂಜಗ ಪರಿಪಾಲ (೨)

ಮುರಳೀಧರನೆ ಕೃಷ್ಣಾನಂದ ನಮಿಪೆನು ವನಮಾಲ
ರಾಧಾವಲ್ಲಭ ಶ್ರೀ ಗೋವರ್ಧನ ವಂದೇ ಜಗಪಾಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೫.೨೦೧೧

Thursday, May 19, 2011

Shri Krishnana Nooraru Geethegalu - 108

ಕೃಷ್ಣಂ ಶ್ರೀನಿಧೇ

ರಾಧಾರಮಣ ಶುಭಕಲ್ಯಾಣ ಕೃಷ್ಣಂ ಶ್ರೀನಿಧೇ
ಕೃಷ್ಣಂ ಶ್ರೀನಿಧೇ ನಮೊ ವಿಷ್ಣುಂ ಶ್ರೀನಿಧೇ

ಬೃಂದಾವನ ಸಂಚಾರಿ ಶ್ರೀಹರಿ ಕೃಷ್ಣಂ ಶ್ರೀನಿಧೇ
ಸುರಮಾಧವ ವೇಣುಲೋಲನೆ ಕೃಷ್ಣಂ ಶ್ರೀನಿಧೇ
ಗೋಕುಲವಾಸ ಜನಮನಚೋರ ಕೃಷ್ಣಂ ಶ್ರೀನಿಧೇ
ದ್ವಾಪರಾಯುಗ ಧರ್ಮರಕ್ಷಕ ಶ್ರೀಕೃಷ್ಣಂ ಶ್ರೀನಿಧೇ (೧)

ಜೀವಜಾಲ ಪರಿಪಾಲದೇವಂ ಕೃಷ್ಣಂ ಶ್ರೀನಿಧೇ
ಶರಣ ಸಜ್ಜನ ಶ್ರೀಪುರಂದರ ಕೃಷ್ಣಂ ಶ್ರೀನಿಧೇ
ತ್ರಿಪುರಕಾವ ಉಡುಪಿಯೊಡೆಯನೆ ಕೃಷ್ಣಂ ಶ್ರೀನಿಧೇ
ಕಲಿವರದನೆ ಶ್ರೀನಿವಾಸ ವಿಠಲ ಕೃಷ್ಣಂ ಶ್ರೀನಿಧೇ (೨)

ರಾಧಾರಮಣ ಶುಭಕಲ್ಯಾಣ ಕೃಷ್ಣಂ ಶ್ರೀನಿಧೇ
ಕೃಷ್ಣಂ ಶ್ರೀನಿಧೇ ನಮೊ ವಿಷ್ಣುಂ ಶ್ರೀನಿಧೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೫.೨೦೧೧

Shri Krishnana Nooraru Geethegalu - 107

ರಾಮ ರಾಮ ರಾಮನೆನಿರೊ

ರಾಮ ರಾಮ ರಾಮನೆನಿರೊ ರಾಮಧ್ಯಾನವೆ ಕ್ಷೇಮವೆನಿರೊ
ಕಲಿಯ ಕರ್ಮವ ಕಳೆದು ಪರದೊಳು ಸುಖವ ಪಡೆಯಿರೊ

ರಘುವಂಶಜ ರಾಮನೆನಿರೊ ದಶರಥಸುತ ರಾಮನೆನಿರೊ
ಕೌಸಲ್ಯೆಯ ಕಂದರಾಮ ಜನಕಸುತೆಯ ಪ್ರೇಮನೆನಿರೊ
ಶಬರಿಗೊಲಿದ ರಾಮನೆನಿರೊ ಹನುಮಗೆ ಶ್ರೀಪಾದನೆನಿರೊ
ಪುಣ್ಯಪುರುಷನ ದಿವ್ಯನಾಮವ ಭಜಿಸಿ ನಲಿಯಿರೊ

ಶುಭದಾಯಕ ರಾಮನೆನಿರೊ ಸುಗುಣಧಾಮ ರಾಮನೆನಿರೊ
ಶೂರಸುಂದರ ಶ್ಯಾಮಲಾಂಗ ಲವಕುಶರ ಪಿತನೆನಿರೊ
ದ್ವಾರಪದೊಳು ರಾಧೆರಾಮ ಕಲಿಯೊಳಗೆ ಸಕಲ ಕ್ಷೇಮ
ಶ್ರೀನಿವಾಸ ವಿಠಲ ಪದದಿ ಮುಕುತಿ ಪಡೆಯಿರೊ

ರಾಮ ರಾಮ ರಾಮನೆನಿರೊ ರಾಮಧ್ಯಾನವೆ ಕ್ಷೇಮವೆನಿರೊ
ಕಲಿಯ ಕರ್ಮವ ಕಳೆದು ಪರದೊಳು ಸುಖವ ಪಡೆಯಿರೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೫.೨೦೧೧

Shri Krishnana Nooraru Geethegalu - 106

ಇಷ್ಟದರಸ ಕೃಷ್ಣ

ಅಷ್ಟಮಹಿಷಿಯರೊಡೆಯ ಇಷ್ಟದರಸನೆ ಕೃಷ್ಣ
ಎಮ್ಮನಿಷ್ಟ ಕಷ್ಟಗಳ ಬೆನ್ನಟ್ಟಿ ಹರಸೊ

ಎನ್ನೊಳಾರ್ಭಟಿಸುತಿಹ ಆರರ ಪೂತನೆಯ ಹಾಲ
ಹಲವಳಿದೆನ್ನ ಶುದ್ಧನಾಗಿರಿಸೊ

ಶೌರಿಯೆ ಸುಭದ್ರಾಗ್ರ ಅಭಿಮನ್ಯು ಮಾವಯ್ಯ
ದುರಿತದೆನ್ನೆಯ ವ್ಯೂಹಚಕ್ರವದ ಮುರಿಯೊ

ಎನ್ನ ಮನ ಚಂಚಲಿಪ ಮಾಯಾಷ್ಟವಕ್ರೆಯನು
ಕಲಿವರದ ಶ್ರೀನಿವಾಸ ವಿಠಲನೆ ವರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೫.೨೦೧೧

Sunday, May 15, 2011

Shri Krishnana Nooraru Geethegalu - 105

ನಾರಾಯಣ ನಾಮವದು

ನಾರಾಯಣ ನಾಮವದು ಎನ್ನೊಳಗೆ ನಲಿಯಲಿ
ಅಂತರಂಗದಾತ್ಮದೊಳಗೆ ಹರಿಹಣತೆಯು ಬೆಳಗಲಿ

ಅಮ್ಮ ಲಕುಮಿ ಸಂಗದೊಳಗೆ ಆನಂದಕ್ಷೀರ ಕಡಲಲಿ
ಸರಸವಾಡೊ ಸುಂದರಾಂಗನ ಕಣ್ಣು ನೋಡಿ ತಣಿಯಲಿ (೧)

ಆದಿದೇವನ ಹಾಡಿ ಪೊಗಳುವಮೋಘ ಗಾನ ಸುಧೆಯನು
ಎನ್ನ ನಾಲಗೆ ನುಡಿದು ನಲಿಯಲಿ ಕರ್ಣಂಗಳು ಸವಿಯಲಿ (೨)

ಎನ್ನ ನಾಸಿಕವವಗೆ ಮಣಿಯಲಿ ಸರ್ವಗಂಧನ ಅಲೆಯಲಿ
ಶ್ರೀನಿವಾಸ ವಿಠಲ ನೆಲೆಸಲಿ ಎನ್ನ ಚಿತ್ತದ ಗುಡಿಯಲಿ (೩)

ನಾರಾಯಣ ನಾಮವದು ಎನ್ನೊಳಗೆ ನಲಿಯಲಿ
ಅಂತರಂಗದಾತ್ಮದೊಳಗೆ ಹರಿಹಣತೆಯು ಬೆಳಗಲಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೫.೨೦೧೧

Shri Krishnana Nooraru Geethegalu - 104

ಶ್ರೀಪಾದ ನಂಬಿದೆನೊ

ಶ್ರೀಹರಿಯೆ ಜಗದೊರೆಯೆ ನೀನೆನ್ನ ಗತಿಯೆಂದು
ಶ್ರೀಪಾದ ನಂಬಿದೆನೊ ಗೋವಿಂದ ಸಲಹೆನ್ನ

ಅಣುರೇಣುತೃಣಕಾಷ್ಠದಾದಿಮೂಲನೆ ದೇವ
ನಿನ್ನ ಸೃಷ್ಟಿಯೊಳುದಿತ ಅಂಡಾಣು ನರನೆನ್ನ
ಅಂಗದೊಳು ಕುಣಿವಾರು ಪುಂಡರಾ ಹೆಡೆಕಟ್ಟಿ
ಸರಿಯಂಕೆಯೊಳಿಟ್ಟು ಸುಖದಿ ಪೊರೆಯೆಂದು (೧)

ಪಾಪಪುಣ್ಯವ ಕೆಡುವಿ ಮೆರೆಯುವೀ ಕಲಿಯೊಳಗೆ
ಕಾಮ-ಮೋಹಗೆಳೆಂಬೊ ಸಂಸಾರ ಸಂತೆಯೊ
ಸತಿಸುತರು ಸಿರಿಯಾಳೊ ಸ್ವಾರ್ಥ ಸಡಗರದಿ
ಪಾರಮಾರ್ಥವ ಮರೆತೀ ಮೂಢನ ಕ್ಷಮಿಸೆಂದು (೨)

ಭವರೋಗಹರ ನೀನು ನರಹರಿಯು ಧರೆಯೊಳಗೆ
ನಶ್ವರದ ನರಬಾಳ್ವೆ ನರಕ ಸಾಕೊ
ತಿರುಮಲೆಯ ಕಲಿವರದ ಶ್ರೀನಿವಾಸ ವಿಠಲಯ್ಯ
ಸುಖದೊಳಗೆ ನೀನೆನ್ನ ಕಾಯಬೇಕೆಂದು (೩)

ಶ್ರೀಹರಿಯೆ ಜಗದೊರೆಯೆ ನೀನೆನ್ನ ಗತಿಯೆಂದು
ಶ್ರೀಪಾದ ನಂಬಿದೆನೊ ಗೋವಿಂದ ಸಲಹೆನ್ನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೫.೨೦೧೧

Saturday, May 14, 2011

Shri Krishnana Nooraru Geethegalu - 103

ನಿನ್ನ ನಾಮ ಭಜಿಸೆ

ನಿನ್ನ ನಾಮವ ಭಜಿಸೆ ಜನುಮ ಪಾವನವಂತೆ
ನೆಚ್ಚಿದಾ ದೀನರನು ಹರಿಯೆ ನೀ ಕಾವೆಯಂತೆ

ಅರಿಯೆನೊ ತ್ರೇತೆಯೊಳು ದಶರಥನ ಸುತನಾಗಿ
ಧರಣಿಯೊಳು ಧರ್ಮವನು ನೀ ಕಾಯ್ದೆಯಂತೆ
ಬಕುತ ಹನುಮನಿಗೊಲಿದ ಜಾನಕೀಪ್ರಿಯನಂತೆ
ಅಸುರನನುಜನನ ಮೆಚ್ಚಿ ಪಟ್ಟಗಟ್ಟಿದೆಯಂತೆ (೧)

ಅರಿಯೆನೊ ದ್ವಾಪರದೆ ವಸುದೇವ ಸುತನಾಗಿ
ಗೋಕುಲದ ಸುಜನರನು ನೀ ಪೊರೆದೆಯಂತೆ
ಧರ್ಮದೈವರಿಗೊಲಿದ ಕುರುದುರಿತಹರನಂತೆ
ಕಾಡ ಕಾಂಡವ ನುಡಿಸೊ ಕುಚೇಲಪ್ರಿಯನಂತೆ (೨)

ಅರಿಯೆನೊ ಕಲಿಯೊಳಗೆ ಭಕ್ತವತ್ಸಲನಾಗಿ
ಶರಣಂಗೆ ಸುಖಕೊಡುವ ಲಕುಮಿಪತಿಯಂತೆ
ಸ್ತುತಿಪ ದಾಸರಿಗೊಲಿದ ಭವರೋಗಹರನಂತೆ
ಶ್ರೀನಿವಾಸ ವಿಠಲ ನೀ ವೈಕುಂಠಪತಿಯಂತೆ (೩)

ನಿನ್ನ ನಾಮವ ಭಜಿಸೆ ಜನುಮ ಪಾವನವಂತೆ
ನೆಚ್ಚಿದಾ ದೀನರನು ಹರಿಯೆ ನೀ ಕಾವೆಯಂತೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೫.೨೦೧೧

Thursday, May 12, 2011

Shri Krishnana Nooraru Geethegalu - 102

ಶ್ರೀಗುರು ಪಾರ್ಥಸಾರಥಿ ವಿಠಲ

ಗುರುವು ಬಂದ ಎನ್ನ ಅರಿವು ಬಂದ
ಪಾರ್ಥಸಾರಥಿ ವಿಠಲ ದೊರೆಯು ಬಂದ

ಹಿಂದಿನಾ ಜನುಮಗಳ ಕರ್ಮವ ನೀಗಿಸಿ
ಗಾಢಾಂಧ ಮಸುಕಿದೀ ಕಂಗಳ ತೆರೆಯಿಸಿ
ಪಾಳುಕೊತ್ತಲದಂತೀ ದೇಹ ದೇವಳದಿ
ಅರಿವಿನ ಹಣತೆಯ ಬೆಳಗಿಸೊ ದೇವ (೧)

ಜಲರೂಪನುದಯವ ನಿಜದೊಳು ಸ್ಮರಿಸಿ
ಅಮರರಾಮನ ಕಥೆಯ ಎದೆಯೊಳು ನಿಲಿಸಿ
ದ್ವಾಪರದೊಡೆಯ ಶ್ರೀಕೃಷ್ಣನ ನಯವನು
ತಿಳಿಸೆನ್ನ ಭವರೋಗವಳಿಸುವ ದೇವ (೨)

ಇಂದೆನ್ನ ಜನುಮವದು ಸಾರ್ಥಕವೊ ಗುರುವೆ
ನಿನ್ನ ಸೇವೆಯ ಭಾಗ್ಯವೆನಗೆ ನೀಡೋ
ನಿನ್ನ ಶ್ರೀಪಾದದಡಿ ಧೂಳಕಣ ನಾ ಗುರುವೆ
ಶ್ರೀನಿವಾಸ ವಿಠಲ ನೀ ಎನ್ನ ಹರಸೊ (೩)

ಗುರುವು ಬಂದ ಎನ್ನ ಅರಿವು ಬಂದ
ಪಾರ್ಥಸಾರಥಿ ವಿಠಲ ದೊರೆಯು ಬಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೫.೨೦೧೧

Tuesday, May 10, 2011

Shri Krishnana Nooraru Geethegalu - 101

ನಮಿಪೆನು ಶ್ರೀಗುರುವೆ

ನಮಿಪೆನು ಶ್ರೀಗುರುವೆ ಪಾರ್ಥಸಾರಥಿ ವಿಠಲ
ಗುರಿಯಿರದೀ ಮೂಢಂಗೆ ಹರಿಯ ತೋರಿದ ದೊರೆಯೆ

ಅರಳುಮಲ್ಲಿಗೆ ಗುರುವೆ ಅರಿವಿನಕ್ಷಯವೆ
ಕಲಿಯೊಳಗೆ ನಾರದರೆ ಹರಿದಾಸರದ್ಭುತವೆ
ಹಾಲ್ಗಡಲಿನರಮನೆಯ ಹಾವಿನಾಸಿಗೆಯವನ
ಪಾಡಿ ಅಕ್ಕರೆಯೊಳಗೆ ನಲಿದಾಡುವವರೆ (೧)

ಮುನ್ನ ನಾ ಮಾಡಿದ ಪಾಪಕರ್ಮಂಗಳ
ಕಳೆದು ಕರುಣಿಸಿ ಗುರುವೆ ಈ ದೀನನ
ಉಳಿದೆನ್ನ ಕೆಲಕ್ಷಣವು ನಿಮ್ಮ ಸಾನಿಧ್ಯದೊಳು
ಸೇವೆಯ ಭಾಗ್ಯವದ ಬೇಡುವೆನು ನಾ (೨)

ಶ್ರೀಹರಿಯ ಪರಸಿರಿಯ ತೋರಿದಾ ಗುರುವೆ
ಇಹದೆನ್ನ ಸಕಲಾದಿ ಭವ ಮುರಿದ ಗುರುವೆ
ಗುರುವಿರದ ಆದಿಗುರು ಶ್ರೀನಿವಾಸ ವಿಠಲನ್ನ
ನಿಮ್ಮ ಶ್ರೀಪಾದದೊಳು ಕಂಡೆ ಶ್ರೀಗುರುವೆ (೩)

ನಮಿಪೆನು ಶ್ರೀಗುರುವೆ ಪಾರ್ಥಸಾರಥಿ ವಿಠಲ
ಗುರಿಯಿರದೀ ಮೂಢಂಗೆ ಹರಿಯ ತೋರಿದ ದೊರೆಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೫.೨೦೧೧


Monday, May 9, 2011

Shri Krishnana Nooraru Geethegalu - 100

ಹರಿಯೆ ದಯಮಾಡಿಸೊ

ಎಲ್ಲ ಕೇಳುವರೆನ್ನ ಎಲ್ಲಿಹನು ಅವನೆಂದು
ಏನ ಹೇಳಲೊ ಹರಿಯೆ ದಯಮಾಡಿಸೊ
ಎಲ್ಲೆಲ್ಲೂ ನೀನೆಂದು ಎಲ್ಲವು ನಿನದೆಂದು
ಪೇಳೆ ನಂಬರು ಹರಿಯೆ ದಯಮಾಡಿಸೊ

ಸದ್ಜನರು ಮಥುರೆಯೊಳು ಕಂಗೆಟ್ಟು ಕಾಯೆನಲು
ಕಾಪಾಡ್ದ ದ್ವಾರಕನೆ ದಯಮಾಡಿಸೊ
ಗೋಕುಲದಿ ಗೋಪಜನ ಗೋವಿಂದ ಕಾಯೆನಲು
ಗಿರಿಯೆತ್ತಿ ಸಲುಹಿದನೆ ದಯಮಾಡಿಸೊ (೧)

ಅಜಮಿಳನು ಹೃದಯದಿಂ ನಾರಾಯಣನೆನಲಾ
ಕ್ಷಣದಿ ಕಂಡವನೆ ದಯಮಾಡಿಸೊ
ಕಶ್ಯಪನ ಸುತನವನು ಶ್ರೀಹರಿಯೆ ಕಾಯೆನಲು
ಕಂಬವನೆ ಸೀಳಿದನೆ ದಯಮಾಡಿಸೊ (೨)

ಜಗಜೀವ ಸಂಕುಲದ ಸೌಭಾಗ್ಯ ಸಿರಿನಿಧಿಯೆ
ಸರ್ವಾದಿದೇವನೆ ದಯಮಾಡಿಸೊ
ಜನನಮರಣದ ಮಧ್ಯೆ ಸುಖದೆಮ್ಮ ಕಾಯುವನೆ
ಶ್ರೀನಿವಾಸ ವಿಠಲನೆ ದಯಮಾಡಿಸೊ (೩)

ಎಲ್ಲ ಕೇಳುವರೆನ್ನ ಎಲ್ಲಿಹನು ಅವನೆಂದು
ಏನ ಹೇಳಲೊ ಹರಿಯೆ ದಯಮಾಡಿಸೊ
ಎಲ್ಲೆಲ್ಲೂ ನೀನೆಂದು ಎಲ್ಲವು ನಿನದೆಂದು
ಪೇಳೆ ನಂಬರು ಹರಿಯೆ ದಯಮಾಡಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೫.೨೦೧೧

Shri Krishnana Nooraru Geethegalu - 099

ಭಕ್ತವತ್ಸಲ ಹರಿಯೆ

ಬೇಡಿದರು ಬಾರದಿಹ ಭಕ್ತವತ್ಸಲ ಹರಿಯೆ
ಬಂಧಿಯಾಗಿಹೆ ಬಿಡಿಸೊ ಭವದಾರು ಸೆರೆಯೊಳಗೆ

ಮುನ್ನ ತ್ರೇತೆಯೊಳು ಶ್ರೀರಾಮ ಸಲಹೆನಲು
ವಾನರನ ಎದೆಯೊಕ್ಕು ನಿಂತ ದೇವ
ರಾವಣನ ಶಿರಮುರಿದೆ ಶ್ರೀಹರಿಯೆ ಕಾಯೆನಲು
ಅಹಲ್ಯೆಗೊಲಿದನೆ ರಾಮಜೀವ (೧)

ಅಜಮಿಳನ ಕಾಯ್ದವನೆ ನಾರಾಯಣನೆನಲು
ಅಸುರಕಂದನ ಶ್ರೀಪ್ರಹ್ಲಾದ ದೇವ
ಕೌರವನ ತೊಡೆಮುರಿದೆ ಶ್ರೀಕೃಷ್ಣ ಕಾಯೆನಲು
ಧರ್ಮ ಪಾಂಡವಪಕ್ಷ ದೇವದೇವ (೨)

ಕಾಮ-ಕ್ರೋಧವನಿಳಿಸೊ ಲೋಭ-ಮೋಹವನಳಿಸೊ
ಎನ್ನ ಮದಮತ್ಸರವ ಹೊಡೆದುರುಳಿಸೊ
ಶುದ್ಧಾಂತರಂಗದೊಳು ಶ್ರೀನಿವಾಸ ವಿಠಲಯ್ಯ
ಬೇಡುವೆನೊ ಬಂದಲ್ಲಿ ಸ್ಥಿರದಿ ನೆಲೆಸೊ(೩)

ಬೇಡಿದರು ಬಾರದಿಹ ಭಕ್ತವತ್ಸಲ ಹರಿಯೆ
ಬಂಧಿಯಾಗಿಹೆ ಬಿಡಿಸೊ ಭವದಾರು ಸೆರೆಯೊಳಗೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೫.೨೦೧೧

Sunday, May 8, 2011

Shri Krishnana Nooraru Geethegalu - 098

ಮತ್ತೆ ಅವತರಿಸೊ

ಮುದ್ದುವಾಮನನಾಗಿ ಮತ್ತೆ ಅವತರಿಸೊ
ಎನ್ನಹಂ ನೆತ್ತಿಯೊಳು ಶ್ರೀಪಾದವಿರಿಸೊ

ಎನ್ನ ಮೈಯೊಳು ಮೊರೆವ ಕಾಮಕಾಲಿಂದಿಯ
ಕ್ರೋಧದ ಹೆಡೆಮೆಟ್ಟಿ ಥಕಧಿಮಿತ ಕುಣಿಯೊ
ಮೋಹ ವಿಷಪೂತನೆಯ ಲೋಭದಾ ಸ್ತನವೀರಿ
ಜಯಜಯತುಜಯವೆಂದು ಶ್ರೀಕೃಷ್ಣ ನಲಿಯೊ (೧)

ಎನ್ನ ಮೈಯೊಳು ಕೆನೆವ ಮತ್ಸರದ ಕೌರವನ
ಮದದ ತೊಡೆಮುರಿದು ಧರ್ಮಜಯ ಬರೆಯೊ
ಎನ್ನ ಮೈಗುಡಿಯೊಂಬೊ ಪಂಚಭೂತಾಬ್ಧಿಯೊಳು
ಶ್ರೀನಿವಾಸ ವಿಠಲನೆ ನೆಲೆಸೆನ್ನ ಹರಸೊ (೨)

ಮುದ್ದುವಾಮನನಾಗಿ ಮತ್ತೆ ಅವತರಿಸೊ
ಎನ್ನಹಂ ನೆತ್ತಿಯೊಳು ಶ್ರೀಪಾದವಿರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Shri Krishnana Nooraru Geethegalu - 097

ಶರಣ ಪರಿಪಾಲ

ಗೋಪಾಲ ಶರಣಪರಿಪಾಲ ಲೋಲ
ದ್ವಾರಕಾಪುರವಾಸ ಧರಣೀಶ ಶ್ರೀಶ

ಶ್ಯಾಮಲಾಂಗನೆ ಕೃಷ್ಣ ಕಮಲನಯನ
ಮಕರಕುಂಡಲಧರಿತ ವಸುನಂದನ
ನೊಸಲ ಚಂದನತಿಲಕ ಚೆಲುವ ಕೌಸ್ತುಭಪದಕ
ಶ್ರೀತುಳಸಿ ಶೋಭಿತನೆ ಯದುನಂದನ (೧)

ಸುಂದರಾಂಗನೆ ಕೃಷ್ಣ ಸೋಮವದನ
ನವರತ್ನಭೂಷಣನೆ ಗೋವರ್ಧನ
ನೀಳನಾಸಿಕ ಮೆರಗು ಅಧರಹೂ ಅರಳಿನಗು
ಮಯೂರ ಕೇಶವನೆ ಜನಾರ್ಧನ (೨)

ಮಂಗಳಾಂಗನೆ ಕೃಷ್ಣ ಲಕುಮಿರಮಣ
ಕ್ಷೀರಾಬ್ಧಿಯರಸ ಶ್ರೀಶೇಷಶಯನ
ಶೇಷಜನ ಸುಖಪಾಲ ಶ್ರೀನಿವಾಸ ವಿಠಲ
ದೇವದೇವನೆ ಕಾಯೊ ನಾರಾಯಣ (೩)

ಗೋಪಾಲ ಶರಣಪರಿಪಾಲ ಲೋಲ
ದ್ವಾರಕಾಪುರವಾಸ ಧರಣೀಶ ಶ್ರೀಶ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Shri Krishnana Nooraru Geethegalu - 096

ಲಕುಮಿರಮಣ

ನಾರಾಯಣ ನಮೋ ನಾರಾಯಣ
ಲಕುಮಿರಮಣ ಶ್ರೀ ಶುಭಕಲ್ಯಾಣ

ತ್ರಿಜಗ ಸೂತ್ರಶ್ರೀ ರವಿಶಶಿ ನೇತ್ರನೆ
ಪಂಚಭೂತಾದಿ ಸೃಷ್ಟಿ ಸಾಕಾರನೆ
ಆದಿ ಅದ್ಭುತ ಅಚಲ ಅನಂತದೇವನೆ
ದೇವಕೀ ಕಂದ ಶ್ರೀ ಜಗಕಾರಣನೆ (೧)

ಗೋಕುಲಪುರವಾಸ ಗೋಪಾಲಕೃಷ್ಣನೆ
ಕರುಣಾನಿಧಿ ಶ್ರೀ ಕಂಜಲೋಚನನೆ
ಜತನದೊಳು ಸುಜನರ ಸುಖ ಕಾಯ್ದವನೆ
ಯಶೋದೆನಂದನ ಶ್ರೀಗೋವಿಂದನೆ (೨)

ಕಲಿಯೊಳು ಧರೆಕಾಯ್ವ ವೈಕುಂಠವಾಸನೆ
ಸಪ್ತಗಿರೀಶ ಸಿರಿನಿಧಿಯೊಡಯನೆ
ಗತಿ ನೀನೆ ತಿರುಮಲೆಯ ತಿಮ್ಮಪ್ಪನೆನ್ನಲು
ತಲೆಕಾಯ್ವ ನಮ್ಮಪ್ಪ ಶ್ರೀನಿವಾಸ ವಿಠಲನೆ (೩)

ನಾರಾಯಣ ನಮೋ ನಾರಾಯಣ
ಲಕುಮಿರಮಣ ಶ್ರೀ ಶುಭಕಲ್ಯಾಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Saturday, May 7, 2011

Shri Krishnana Nooraru Geethegalu - 095

ಗುಣನಿಧಿ ಗೋವಿಂದ

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ಬೃಂದಾವನ ಸಂಚಾರಿ ಶ್ರೀಹರಿ
ಪ್ರಿಯಸಖಿ ರಾಧಾ ಮನಚೋರಿ
ಗಿರಿಧಾರಿ ಕೃಷ್ಣ ತ್ರಿಜಗವಿಹಾರಿ
ಮದನಮೋಹನ ಗೋಕುಲಶೌರಿ (೧)

ನಾರಾಯಣ ನಮೋ ನಿರಂಜನ
ಪದುಮನಾಭ ಶ್ರೀ ಸನಾತನ
ನರಕುಲಕಾವ ನಿರ್ಗುಣ ಪಾವನ
ಆದಿದೇವ ಶ್ರೀಹರಿ ಚಿರನೂತನ (೨)

ದಯಾನಿಧಿ ಸಿರಿ ಸುಖಾಂಬುಧಿ
ಗುಣನಿಧಿ ಸಹಜ ಶ್ರೀಪಾದಿ
ಶ್ರೀನಿವಾಸ ವಿಠಲನೆ ಜಗದಾದಿ
ಸಕಲವ ಸಲಹೊ ಕರುಣದಿ (೩)

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

Thursday, May 5, 2011

Shri Krishnana Nooraru Geethegalu - 094

ದೇವದೇವಂ

ದೇವದೇವಂ ವಾಸುದೇವಂ
ಸಕಲಶುಭ ಪ್ರದಾಯಕಂ

ದೇವಕಿಸುತಂ ಗೋಪನಂದಂ
ಯಾದವಕುಲ ತಿಲಕಂ

ಆದಿಪುರುಷಂ ಅಂತ್ಯರಹಿತಂ
ಅನೇಕ ವರದಾಯಕಂ

ಸುಜನವರಂ ದುರಿತಹರಂ
ತ್ರಿಕಾಲ ಲೋಕಪಾಲಂ

ಕಲಿವರದಂ ನಾರಾಯಣಂ
ನರಕುಲ ಕಲ್ಯಾಣಂ

ವಂದೇ ರಾಮಂ ವಂದೇ ಶ್ಯಾಮಂ
ಶ್ರೀನಿವಾಸ ವಿಠಲಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

Wednesday, May 4, 2011

Shri Krishnana Nooraru Geethegalu - 093

ಕೊಳಲಾಗಿಸೊ ಕೃಷ್ಣ

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ಕಾಡ ಕಾಂಡದ ಕೊಳವೆ ನಿರ್ಜೀವ ನಾನಯ್ಯ
ಒದಗೊ ಎನ್ನೊಲವ ಜೀವಸಂಗೀತ
ಉಣಿಸೊ ರಾಗದ ಸುಧೆಯ ಸಪ್ತಸರಿಗಮದಲ್ಲಿ
ಹರಿಸಿ ಜೀವದವುಸಿರ ಪ್ರೇಮನಾಥ (೧)

ನುಡಿಸಿದೊಳು ನೀನೆನ್ನ ನಲಿವೆನೊ ಕೃಷ್ಣಯ್ಯ
ನಿನ್ನಧರ ದಡೆ ಮೀರಿ ನಾದಯಮುನೆ
ತಣಿಸೊ ವಿರಹಿರಾಧೆ ಕಾದು ಗೋಕುಲದಲ್ಲಿ
ನಿನ್ನ ಮೋಹದ ಕರೆಗೆ ಒಂದೆ ಸಮನೆ (೨)

ನಿನ್ನ ಸನಿಹದೊಳಿರುವ ಮಹದಾಸೆ ಎನದಯ್ಯ
ಎನ್ನಗಲಿ ಪೋಗದಿರೊ ದೇವದೇವ
ಕೊನರದ ಕೊರಡಿನ ಕೊಳಲೆಂದು ಬಿಸುಡದಿರೊ
ಶ್ರೀನಿವಾಸ ವಿಠಲನೆ ಎನ್ನ ಜೀವ (೩)

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೫.೨೦೧೧

Tuesday, May 3, 2011

Shri Krishnana Nooraru Geethegalu - 092

ಎನ್ನ ಹೃದಯದಿ

ಎನ್ನ ಹೃದಯದಿ ನಿನ್ನುದಯವೊ ಹರಿಯೆ
ನಿನ್ನ ಜಗದುದರದೊಳ ಜೀವಾಣು ನಾ

ನಯನ ನಿನ್ನವು ಹರಿಯೆ ನೋಡ್ವ ನೋಟವು
ಕರ್ಣದೊಳ ಶ್ರವಣವದು ನಿನ್ನದಯ್ಯ
ನಾಸಿಕದ ವಾಯುವೊಳ ಸರ್ವಗಂಧನು ನೀನೆ
ನಾಲಗೆಯದು ನುಡಿವ ನಾರಾಯಣ (೧)

ದೇಹ ನಿನ್ನದು ಹರಿಯೆ ನಿನ್ನದೀ ಗುಡಿಯು
ಒಳಮನೆಯ ಆತ್ಮವದು ನಿನ್ನದಯ್ಯ
ಶುದ್ಧಿಯೊಳು ಬೇಡುವೆನೊ ಶ್ರೀನಿವಾಸ ವಿಠಲನೆ
ಸುಖದೊಳಗೆ ನೆಲೆಸಲ್ಲಿ ನಾರಾಯಣ (೨)

ಎನ್ನ ಹೃದಯದಿ ನಿನ್ನುದಯವೊ ಹರಿಯೆ
ನಿನ್ನ ಜಗದುದರದೊಳ ಜೀವಾಣು ನಾ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೫.೨೦೧೧

Monday, May 2, 2011

Shri Krishnana Nooraru Geethegalu - 091

ಬೇಡವೊ ನಿನ್ನ ಸಂಗ

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ಸೆರೆಯೊಳು ಜನಿಸಿದನೆ ಮಾಯದಿ ನೆಲೆಸಿದನೆ
ನವನೀತಚೋರನೆಂ ಗೋಪಕುಲ ದೂರುವನೆ
ಪುಂಡಪೋರರ ಕೂಡಿ ಕಂಡೋರ ಮನೆಸೇರಿ
ಕೆನೆಹಾಲುಮೊಸರ ಮೆದ್ದೆದ್ದು ಓಡುವನೆ (೧)

ಕಾಡುಹೂಗಳನಾಯ್ದು ವನಮಾಲೆ ಧರಿಸುವನೆ
ಬಿದಿರಕಾಂಡದ ಕೊಳಲ ರಾಗವ ಪಾಡುವನೆ
ಸಿಕ್ಕ ಬಿಕ್ಕೆಯ ಹಣ್ಣು ಜೇನ್ಹಿಂಡಿ ಉಣುವವನೆ
ಗೋಕುಲದ ದನಗಾಹಿ ಗೋಪಾಲ ಗೊಲ್ಲನೆ (೨)

ನಿತ್ಯವಸುರರ ಮಡುಹಿ ರಕುತ ಚೆಲ್ಲಾಡುವನೆ
ಮಾತೆಯೆಂ ಪೂತನೆ ವಿಷಮೊಲೆಯನುಣುವನೆ
ಆವುದೊ ಮಾಯದೊಳು ಗೋವರ್ಧನವೆತ್ತಿದನೆ
ಅಣುರೇಣು ನೀನೆನುವ ಶ್ರೀನಿವಾಸ ವಿಠಲನೆ (೩)

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೫.೨೦೧೧

Sunday, May 1, 2011

Shri Krishnana Nooraru Geethegalu - 090

ಭಜಿಸಿರೊ ಶ್ರೀಹರಿಯ

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ಸಪ್ತಗಿರಿಯೆತ್ತರದಿ ಪಂಚಭೂತಾಬ್ಧಿಯೊಳು
ವೈಭವದಿ ವಿರಮಿಸಿಹ ವೈಕುಂಠನ
ಮೂಜಗದಿ ಮುಕ್ಕೋಟಿಜೀವರನು ನೂರ್ಕಾಲ
ಉದರದೊಳುದ್ಧರಿಪ ನಿಜನೆಂಟನ (೧)

ದಿಕ್ಕೆಟ್ಟು ಜೀವನದಿ ಹರಿ ನೀನೆ ಗತಿಯೆನಲು
ಸರಿದಾರಿ ಸರಿಗಮದ ಸಂಗೀತನ
ನಾರಾಯಣನೆನುವ ನರಜನುಮ ನಾಲಗೆಗೆ
ನಾಕ ನವಕೋಟಿ ಸುಖವರದನ (೨)

ಮನಬಾಗಿ ಮದದ ಶಿರಬಾಗಿ ಶರಣೆನಲು
ಅನಿತು ಕರ್ಮಾಂಧದ ಕೊಳೆ ಕಳೆವನ
ಕ್ಷಮಿಸಿ ಕಾಯೊ ಎನಲು ಶ್ರೀನಿವಾಸ ವಿಠಲಯ್ಯ
ಎದೆಯೆಂಬೊ ಗುಡಿಯೊಳು ನೆಲೆನಿಲುವನ (೩)

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧

Saturday, April 30, 2011

Shri Krishnana Nooraru Geethegalu - 089

ಕಾಯಬೇಕೊ ದೀನ ನಾ

ಪಾಂಡುರಂಗ ನಿನ್ನ ಸಂಗಯಿರಲೆನಗೆ ಅನುಕ್ಷಣ
ಭಕ್ತವತ್ಸಲ ಕೃಷ್ಣ ಕಾಯಬೇಕೊ ದೀನ ನಾ

ಕಂಸಕತ್ತಲೊಳುದಿಸಿ ಗೋಕುಲದಿ ನೆಲೆಸಿ
ಅಬ್ಬರಿಸಿದಸುರರಹಂ ಮೆಟ್ಟಿ ಸಂಹರಿಸಿ
ಶುದ್ಧಾಂತರಂಗದೊಳು ಶ್ರೀರಂಗ ಗತಿಯೆನಲು
ಉದ್ಧರಿಸಿ ಸಲಹುವನೆ ಬಿಡದೆ ಕಾಯೆನ್ನ (೧)

ಆಚಾರ ಸುವಿಚಾರದಾಳವರಿಯೆನೊ ಹರಿಯೆ
ನಿನ್ನ ಶ್ರೀನಾಮದುಚ್ಛಾರದೊರತು
ಎನ್ನಂತರಂಗದೊಳು ಹೊಕ್ಕಾರು ದೈತ್ಯರನು
ದೂರಟ್ಟಿ ಜಗಜಟ್ಟಿ ಬಿಡದೆ ಕಾಯೆನ್ನ (೨)

ಆದಿಯೊಳು ಜಲರೂಪ ಕೃತದೊಳಗೆ ಮತ್ಸ್ಯ
ತ್ರೇತೆಯೊಳು ಶ್ರೀರಾಮ ಗೋಕುಲದ ಕೃಷ್ಣ
ಕಲಿಯೊಳಗೆ ವೇಂಕಟೇಶ ಶ್ರೀನಿವಾಸ ವಿಠಲಯ್ಯ
ನೆಚ್ಚಿ ಬಂದಿಹೆ ನಿನ್ನ ಬಿಡದೆ ಕಾಯೆನ್ನ (೩)

ಪಾಂಡುರಂಗ ನಿನ್ನ ಸಂಗಯಿರಲೆನಗೆ ಅನುಕ್ಷಣ
ಭಕ್ತವತ್ಸಲ ಕೃಷ್ಣ ಕಾಯಬೇಕೊ ದೀನ ನಾ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧

Thursday, April 28, 2011

Shri Krishnana Nooraru Geethegalu - 088

ಪಂಢರಿ ನಮೊ ಪಂಢರಿ

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ಸಾಧುಸಂತ ಸುಜನಗೊಲಿದ ಪಂಢರಿ ನಮೊ ಪಂಢರಿ

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ತ್ರೇತೆಯೊಳಗೆ ರಾಮರೂಪನೆ ಪುಣ್ಯಪುರುಷನೆ ಶ್ರೀಹರಿ (೧)

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ದ್ವಾಪರದಿ ಶ್ಯಾಮರೂಪನೆ ಯಾದವೇಂದ್ರನೆ ಮುರಾರಿ (೨)

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ಕಲಿಯೊಳಗೆ ಶ್ರೀನಿವಾಸ ವಿಠಲರೂಪನೆ ನರಹರಿ (೩)

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ಸಾಧುಸಂತ ಸುಜನಗೊಲಿದ ಪಂಢರಿ ನಮೊ ಪಂಢರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೪.೨೦೧೧

Tuesday, April 26, 2011

Shri Krishnana Nooraru Geethegalu - 087


ನೀ ಮಾಡಿದಡುಗೆ


ನೀ ಮಾಡಿದಡುಗೆಯ ನೀನೇ ಉಣಬೇಕು
ಉಪ್ಪುಖಾರದ ಲೆಕ್ಕ ಶ್ರೀಹರಿಗಿಡಬೇಕು

ಧರ್ಮವ ಮರೆತಯ್ಯೋ ಅಧರ್ಮ ಬೆರೆತಡುಗೆ
ಕದ್ದಾಡಿ ಕನಕವ ಕಾಯ್ದಿಟ್ಟ ಅಡುಗೆ
ಅನ್ಯರ ಹೀನದೊಳಾಡಿ ಅಬ್ಬರದಹಂ ಅಡುಗೆ
ಶ್ರೀಹರಿಯೊಪ್ಪದ ಸಪ್ಪಾದ ಅಡುಗೆ (೧)

ಬಕುತಿಯ ಮರೆತಯ್ಯೋ ಶಕುತಿ ಮೆರೆದಡುಗೆ
ಹೆಣ್ಣು ಮಣ್ಣಿನ ಮೋಹ ಮದವೇರಿದಡುಗೆ
ತ್ರೇತೆಯಿಂ ಕಲಿವರೆಗೂ ಕುಣಿದ ಕೇಕೆಯ ಅಡುಗೆ
ದ್ವಾಪರದಿ ಕೇಶವನು ಕೆಣಕಿ ಕೆಟ್ಟಡುಗೆ (೨)

ಮನಶುದ್ಧ ಪಾತ್ರೆಯಲಿ ಮಾಡಬೇಕೊ ಅಡುಗೆ
ಹರಿಸ್ಮರಣೆ ಶುಚಿಬೆರೆತ ರುಚಿಯನ್ನದಡುಗೆ
ಶ್ರೀನಿವಾಸ ವಿಠಲನೆಂಬ ಲವಣವಿರದಡುಗೆ
ಹಾಲಹಲದೊಳ ಅಮೃತದ ಅಡುಗೆ (೩)

ನೀ ಮಾಡಿದಡುಗೆಯ ನೀನೇ ಉಣಬೇಕು
ಉಪ್ಪುಖಾರದ ಲೆಕ್ಕ ಶ್ರೀಹರಿಗಿಡಬೇಕು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೧

Shri Krishnana Nooraru Geethegalu - 086

ಗೋವಿಂದ ಕೃಷ್ಣ ಹರೇ

ಗೋವಿಂದ ಕೃಷ್ಣ ಹರೇ ಹರೇ ಗೋಪಾಲ ಕೃಷ್ಣ ಹರೇ
ವಸುದೇವಸುತ ಶ್ರೀ ದೇವಕಿನಂದನ ಜಗದಾನಂದ ಹರೇ

ಅಚ್ಯುತಾಚಲ ಆದಿತ್ಯಾದ್ಭುತ ಅನಂತ ದೇವ ಹರೇ
ಅಜೇಯಾಜನ್ಮ ಅನಾದಿ ಅಕ್ಷರ ಅಪರಾಜಿತನೆ ಹರೇ (೦೧)

ಶಂಖ ಚಕ್ರ ಗದಾ ಪದ್ಮ ಪೂರ್ಣ ಪುಣ್ಯಾಸ್ತ ಹರೇ
ಪದಕ ಕೌಸ್ತುಭ ವಜ್ರಕಿರೀಟ ಕುಂಡಲಧರನೆ ಹರೇ (೦೨)

ಕಮಲನಯನ ನಿರ್ಮಲವದನ ತಿಲಕಚಂದನ ಹರೇ
ವನಮಾಲಾಧರ ಕೇಯೂರನೆ ಶ್ರೀಹರಿಕೃಷ್ಣ ಹರೇ (೦೩)

ದೇವಾದಿದೇವ ಶ್ರೀದಾನವೇಂದ್ರ ದಯಾನಿಧಿಯೆ ಹರೇ
ದುರಿತಹರ ಶ್ರೀಧರ್ಮಾಧ್ಯಕ್ಷನೆ ದ್ವಾರಕಾಧೀಶ ಹರೇ (೦೪)

ಬಾಲಗೋಪಾಲ ಮೂಜಗಪಾಲ ಶ್ರೀಗೋವರ್ಧನ ಹರೇ
ಜಗನ್ನಾಥ ಜಯಜನಾರ್ಧನ ಜಯಂತ ಜ್ಯೋತಿ ಹರೇ (೦೫)

ಕಂಜಲೋಚನ ಕಮಲನಾಥ ಶ್ರೀಕೇಶವಕೃಷ್ಣ ಹರೇ
ಲಕ್ಷ್ಮೀಕಾಂತ ಲೋಕಾಧ್ಯಕ್ಷನೆ ತ್ರಿಲೋಕರೂಪ ಹರೇ (೦೬)

ಮಧುಸೂದನ ಮದನಮಾಧವ ಮಯೂರಾಧರನೆ ಹರೇ
ಮನೋಹರ ಶ್ರೀಮುರಳೀಧರನೆ ಮಹೇಂದ್ರದೇವ ಹರೇ (೦೭)

ನಿರ್ಗುಣಾದಿ ನಿರಂಜನರೂಪ ನಾರಾಯಣ ದೇವ ಹರೇ
ಪ್ರಜಾಪತಿ ಶ್ರೀಪಾರ್ಥಸಾರಥಿ ಪುಣ್ಯಪುರುಷ ಹರೇ (೦೮)

ಸತ್ಯವಾಚನ ಶ್ಯಾಮಲಸುಂದರ ಸುಶೀಲದೇವ ಹರೇ
ಪನ್ನಗಶಯನ ಶ್ರೀವೈಕುಂಠ ಶ್ರೀನಿವಾಸ ವಿಠಲ ಹರೇ (೦೯)

ಗೋವಿಂದ ಕೃಷ್ಣ ಹರೇ ಹರೇ ಗೋಪಾಲ ಕೃಷ್ಣ ಹರೇ
ವಸುದೇವಸುತ ಶ್ರೀ ದೇವಕಿನಂದನ ಜಗದಾನಂದ ಹರೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೧

Sunday, April 24, 2011

Shri Krishnana Nooraru Geethegalu - 085

ವಾಸುದೇವ

ಕಾವನು ನೀನೆಂದೆ ನಂಬಿ ನಿನ್ನನು ಬಂದೆ
ನಿಗಮಗೋಚರ ಕೃಷ್ಣ ವಾಸುದೇವ

ಬುವಿ ನೀನು ಬಾನ ರವಿ ನೀನು ದೊರೆಯೆ
ನೆಲಜಲವು ಜಗಸಕಲ ದೇವದೇವ
ನಿನ್ನೊಲವ ಜೀವದಣುವೆನ್ನಯ ಮೊರೆಯ
ಆಲಿಸೊ ಶ್ರೀಪಾದ ವಾಸುದೇವ (೧)

ಬಿಡದೆ ಬಕುತಿಯೊಳು ಬೇಡುವೆನೊ ಹರಿಯೆ
ಆದಿ ಅನಂತಾತ್ಮ ದೇವದೇವ
ಕರೆತಂದವ ನೀನು ಕಾಯವುದು ಕೊನೆವರೆಗು
ಪ್ರಹ್ಲಾದವರದನೆ ವಾಸುದೇವ (೨)

ಹಲವು ಅವತಾರದೊಲು ಅನಿತು ಜೀವರಿಗೆ
ಇಹಪರದಿ ಪಾಲಿಪನೆ ದೇವದೇವ
ನೆಚ್ಚಿಬಂದೆನೊ ನಿನ್ನ ಶ್ರೀನಿವಾಸ ವಿಠಲಯ್ಯ
ಸಲಹು ಸುಖದೊಳಗೆನ್ನ ವಾಸುದೇವ (೩)

ಕಾವನು ನೀನೆಂದೆ ನಂಬಿ ನಿನ್ನನು ಬಂದೆ
ನಿಗಮಗೋಚರ ಕೃಷ್ಣ ವಾಸುದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೪.೨೦೧೧

Tuesday, April 19, 2011

Shri Krishnana Nooraru Geethegalu - 084

ನಾರಾಯಣ ನಾಮ

ನಾರಾಯಣ ನಿನ್ನ ನಾಮವ ಜಪಿಸಲು
ನಾಲಗೆಯದು ನಲಿದಾಡುವುದು
ಹಲವು ಜನುಮದಿ ನುಡಿದನ್ಯದ ಕರ್ಮ
ಹರಿಯೆ ನಿನ್ನನು ಭಜಿಸೆ ಕಳೆಯುವುದು

ಕೈಕೇಯಿ ದುರ್ನುಡಿಯನ್ನರುವಿ ದಶರಥಗೆ
ಅಯೋಧ್ಯೆರಾಮನ ಅಡವಿಗಟ್ಟಿದ ಕರ್ಮ
ಅಸುರನ ಮೋಹವದು ಹರಿಣಿಯವತಾರದಿ
ಜನಕಸುತೆಯನು ಶೋಕಕೆಳೆಸಿದ ಕರ್ಮ (೧)

ಅಗಸನ ನುಡಿಯವು ಜಗದ ಕರ್ಣದೊಲು
ಅಮರಗೆ ಅನುಮಾನವಾವರಿಸಿ ಕರ್ಮ
ಸಂದೇಹದಗ್ನಿಯು ಅವತಾರಿ ಲಕುಮಿಯನು
ಬುವಿಯ ಬಾಯ್ಗಿಟ್ಟ ಯುಗದ ಕರ್ಮ (೨)

ಸುಳ್ಳು ತಟವಟದೀ ಕಲಿಯೆಂಬೊ ಸಂತೆಯೊಳು
ಮಾನ ಮಂತ್ರದ ಜಪವ ಮರೆತ ಕರ್ಮ
ಶ್ರೀನಿವಾಸ ವಿಠಲನ ಈಗಲಾದರು ಭಜಿಸೆ
ಕಳೆವವೊ ಸಕಲ ಜನುಮದ ಕರ್ಮ (೩)

ನಾರಾಯಣ ನಿನ್ನ ನಾಮವ ಜಪಿಸಲು
ನಾಲಗೆಯದು ನಲಿದಾಡುವುದು
ಹಲವು ಜನುಮದಿ ನುಡಿದನ್ಯದ ಕರ್ಮ
ಹರಿಯೆ ನಿನ್ನನು ಭಜಿಸೆ ಕಳೆಯುವುದು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೪.೨೦೧೧

Monday, April 18, 2011

Shri Krishnana Nooraru Geethegalu - 083

ಜೋಜೋ ಶ್ರೀಗೋವಿಂದ

ಮಲಗಯ್ಯ ತೂಗುವೆ ಮುದ್ದು ಅರವಿಂದ
ಮಲಗಯ್ಯ ಜೋಜೋ ಶ್ರೀಗೋವಿಂದ

ಮಲಗೊ ಸುಂದರರಾಮ ಮಲಗೊ ನಿರ್ಮಲರಾಮ
ಮಲಗಯ್ಯ ಜೋಜೋ ಪುರುಷೋತ್ತಮ
ಮಲಗೊ ಸೀತಾರಾಮ ಮಲಗೊ ಶಬರಿರಾಮ
ಮಲಗಯ್ಯ ಜೋಜೋ ವಾನರಪ್ರೇಮ (೧)

ಮಲಗೊ ಕಮಲನಯನ ಮಲಗೊ ಚಂದಿರವದನ
ಮಲಗಯ್ಯ ಜೋಜೋ ಮನಮೋಹನ
ಮಲಗೊ ರಾಧಾರಮಣ ಮಲಗೊ ಶ್ಯಾಮಲವರ್ಣ
ಮಲಗಯ್ಯ ಜೋಜೋ ಯದುನಂದನ (೨)

ಮಲಗೊ ಶ್ರೀನಿರಂಜನ ಮಲಗೊ ಶ್ರೀನಾರಾಯಣ
ಮಲಗಯ್ಯ ಜೋಜೋ ಜಗಕಾರಣ
ಮಲಗೊ ತಿರುಮಲೆವಾಸ ಶ್ರೀನಿವಾಸ ವಿಠಲಯ್ಯ
ಮಲಗಯ್ಯ ಜೋಜೋ ಮೂಜಗಕ್ಷೇಮ (೩)

ಮಲಗಯ್ಯ ತೂಗುವೆ ಮುದ್ದು ಅರವಿಂದ
ಮಲಗಯ್ಯ ಜೋಜೋ ಶ್ರೀಗೋವಿಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೪.೨೦೧೧

Sunday, April 17, 2011

Shri Krishnana Nooraru Geethegalu - 082

ದೇವ ತಿಮ್ಮಪ್ಪ

ಇವ ದೇವ ತಿಮ್ಮಪ್ಪ ಎಮ್ಮ ಕಾಯುವನಪ್ಪ
ಜಗದಾದಿವಂದ್ಯ ಶ್ರೀ ಭಕ್ತವತ್ಸಲನು

ಶಂಖ ಚಕ್ರ ಗದಾ ಪದ್ಮಹಸ್ತನು
ಕಮಲನಯನ ಹರಿ ಚಂದನ ತಿಲಕನು
ಕೌಸ್ತುಭ ಕೇಯೂರ ವನಮಾಲೆ ಧರಿತನು
ಪ್ರಹ್ಲಾದವರದ ನಾರಾಯಣನು (೧)

ವೇದಪಿತ ಬ್ರಹ್ಮಗೆ ಇವನಾದಿ ಪಿತನು
ದ್ವಾಪರದಿ ದೇವಕಿಯ ಕೃಷ್ಣಯ್ಯ ಸುತನು
ಅಷ್ಟಮಹಿಷಿಯರೊಡೆಯ ಧರಣೀಶನಿವನು
ಪೂತನೆವರದ ಯದುವಂಶಜನು (೨)

ಕಲಿಯೊಳು ದೇವರ ದೇವನೊ ಇವನು
ಹನುಮ-ಭೀಮ-ಶ್ರೀಮಧ್ವರ ರಾಯನು
ಜಗದೊಡೆಯ ಎಮ್ಮ ಶ್ರೀನಿವಾಸ ವಿಠಲನು
ಸೇವಿಪ ಸುಜನರ ಅನುಕ್ಷಣ ಕಾವನು (೩)

ಇವ ದೇವ ತಿಮ್ಮಪ್ಪ ಎಮ್ಮ ಕಾಯುವನಪ್ಪ
ಜಗದಾದಿವಂದ್ಯ ಶ್ರೀ ಭಕ್ತವತ್ಸಲನು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೪.೨೦೧೧

Saturday, April 16, 2011

Shri Krishnana Nooraru Geethegalu - 081

ಶುಭವರದೆ

ಶುಭವರದೆ ಶ್ರೀ ಶಿವಕರಿ ಭಾಸ್ಕರಿ
ಹರಿವಲ್ಲಭೆ ಜಯೆ ಸುಂದರಿಯೆ
ಪದ್ಮಮಾಲಾಧರೆ ಪುಣ್ಯಹಸ್ತೆಯೆ
ಸುಜನರ ಪೊರೆವಳೆ ಸಿರಿನಿಧಿಯೆ

ಮಂಗಳೆ ಸಿಂಧೂರೆ ಮುತೈದೆ ಮಾಂಗಲ್ಯೆ
ಶ್ರೀ ಧರ್ಮನಿಲಯೆ ಲೋಕಮಾತೆ
ಇಂದುಶೀತಲೆ ದೇವಿ ಆಹ್ಲಾದಜನನಿ
ಸಿದ್ಧಿದಾಯಿನಿ ಸಕಲೆ ಸುಖದಾತೆ (೧)

ಸಾಗರತನಯೆ ಹೇಮಾಮಾಲಿನಿ
ವಸುಪ್ರದೆ ಹರಿಣಿ ನಾರಾಯಣಿ
ದಾರಿದ್ರ್ಯನಾಶಿನಿ ಸಿರಿ ಸಂವರ್ಷಿಣಿ
ಭುವನೇಶ್ವರಿಯೆ ಶ್ರೀ ಕರುಣಿ (೨)

ಮಹಾಲಕ್ಷ್ಮಿ ನಮೊ ವರಲಕ್ಷ್ಮಿ ನಮೊ
ಪದ್ಮಾಕ್ಷೆ ಪ್ರೇಮ ಪುಷ್ಕರಣಿ
ಶ್ರೀನಿವಾಸ ವಿಠಲನ ಸಮಬಲೆ ತಾಯೆ
ಕಾಯೆಮ್ಮ ನಮೊ ಜಗಕಾರಣಿ (೩)

ಶುಭವರದೆ ಶ್ರೀ ಶಿವಕರಿ ಭಾಸ್ಕರಿ
ಹರಿವಲ್ಲಭೆ ಜಯೆ ಸುಂದರಿಯೆ
ಪದ್ಮಮಾಲಾಧರೆ ಪುಣ್ಯಹಸ್ತೆಯೆ
ಸುಜನರ ಪೊರೆವಳೆ ಸಿರಿನಿಧಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೪.೨೦೧೧

Shri Krishnana Nooraru Geethegalu - 080

ಶ್ರೀನಿಧಿಪಾದ

ಪಾದ ಪಾವನಪಾದ ಶ್ರೀಹರಿ ದಿವ್ಯಪಾದ
ಸುಜನರ ಧರೆಯೊಳು ಕಾವ ಶ್ರೀನಿಧಿಪಾದ

ಕುಲಗೋತ್ರಂಗಳ ಮಡಿ ಸೂತ್ರಂಗಳ
ಗಣಿಸದೆ ಸಲಹುವ ಶುಭಪಾದ
ಸಿರಿಯನೆಣಿಸದೆ ಗುಣಿಗಳ ಗುಣಿಸುವ
ಭಾಗ್ಯದ ಗಣಿಯೊ ಹರಿಪಾದ (೧)

ಕಂದ ಪ್ರಹ್ಲಾದರ ಪಾಂಡವರೈವರ
ಕ್ಷೇಮವನೊಪ್ಪಿದ ಸಿರಿಪಾದ
ಮಾವ ಕಂಸನ ಕಟ್ಟಿ ಬಲಿಯಹಂ ಮೆಟ್ಟಿ
ಅಸುರರನಟ್ಟಿದ ಶ್ರೀಪಾದ (೨)

ಮಾತೆ ಕೌಸಲ್ಯೆಯ ಮಡಿಲೊಳಗಾಡಿದ
ಮುದ್ದು ರಾಮಯ್ಯನ ಪುಣ್ಯಪಾದ
ಪುರಂದರ-ಕನಕಾದಿ ದಾಸರು ಪೊಗಳಿದ
ಶ್ರೀನಿವಾಸ ವಿಠಲ ಧನ್ಯಪಾದ (೩)

ಪಾದ ಪಾವನಪಾದ ಶ್ರೀಹರಿ ದಿವ್ಯಪಾದ
ಸುಜನರ ಧರೆಯೊಳು ಕಾವ ಶ್ರೀನಿಧಿಪಾದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೧

Friday, April 15, 2011

Shri Krishnana Nooraru Geethegalu - 079

ಮಾಯದ ಕುದುರಿ

ಮನಸು ಮಾಯದ ಕುದುರಿ ಶ್ರೀಹರಿ
ನಡೆಸಯ್ಯ ನೀನೇರಿ ಇದರ ಸವಾರಿ
ಕಟ್ಟುಕಟ್ಟಳೆ ಕಿತ್ತು ಅಂಕುಡೊಂಕಿನ ತಿಟ್ಟು
ಹತ್ತಿ ಎತ್ತಲೊ ಕೆಟ್ಟು ಅರಿಯನೊ ದಾರಿ

ದಶಶಿರ ದುರುಳನ ಲಾಯದೊಳಿತ್ತು
ವಂಚಿಸಿ ಸೀತೆಯ ಹೊತ್ತೋಡಿತ್ತು
ಲೋಕದ ನಿಂದೆಯ ನಿಶೆಯೊಳಗಿಟ್ಟು
ರಾಮರ ಅಂಬಿಗೆ ಓಟವ ಕಿತ್ತು (೧)

ಕೌರವ ತೊಡೆಯಲಿ ಕೆನೆದಾಡಿತ್ತು
ಐವಗೆ ಪಗಡೆಯ ಸೋಲಾಗಿತ್ತು
ದುಷ್ಟಗೆ ದ್ರೌಪದಿ ಸೆರಗನು ಕೊಟ್ಟು
ಧರ್ಮಪ್ರಹಾರಕೆ ಹೆದರೋಡಿತ್ತು (೨)

ತ್ರೇತೆಯ ರಾಮಗೆ ಭಯದೊಳಗಿತ್ತು
ಗೋಕುಲ ಕೃಷ್ಣಗೆ ಬಕುತಿಯೊಳಿತ್ತು
ಕಲಿಯೊಳು ಶ್ರೀನಿವಾಸ ವಿಠಲ ಸವಾರನ
ಶ್ರೀಪಾದವನೊಪ್ಪಿ ಶರಣಾಗಿತ್ತು (೩)

ಮನಸು ಮಾಯದ ಕುದುರಿ ಶ್ರೀಹರಿ
ನಡೆಸಯ್ಯ ನೀನೇರಿ ಇದರ ಸವಾರಿ
ಕಟ್ಟುಕಟ್ಟಳೆ ಕಿತ್ತು ಅಂಕುಡೊಂಕಿನ ತಿಟ್ಟು
ಹತ್ತಿ ಎತ್ತಲೊ ಕೆಟ್ಟು ಅರಿಯನೊ ದಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೧

Wednesday, April 13, 2011

Shri Krishnana Nooraru Geethegalu - 078


ನಮೊ ವೇಂಕಟೇಶಾಯ


ನಮೊ ವೇಂಕಟೇಶಾಯ ಶೇಷಾದ್ರಿ ನಿಲಯ
ವಾಸುದೇವಾಯ ಅನಂತಚರಣ

ನಮೊ ನಿರಂಜನಾಯ ನೀಲಾದ್ರಿ ನಿಲಯ
ಶ್ರೀನಿವಾಸಾಯ ನಾರಾಯಣ

ನಮೊ ಭವಹರಾಯ ಭದ್ರಾಚಲ ನಿಲಯ
ಪದ್ಮನಾಭಾಯ ಪರಿಪೂರ್ಣ

ನಮೊ ಸರ್ವೇಶಾಯ ಸಿಂಹಾಚಲ ನಿಲಯ
ರಾಮಚಂದ್ರಾಯ ದಯಾಕರುಣ

ನಮೊ ತ್ರಿವಿಕ್ರಮಾಯ ತ್ರಿಪುರಾಚಲ ನಿಲಯ
ಪರಶುರಾಮಾಯ ಪಾಪಹರಣ

ನಮೊ ವಿಶ್ವಾತ್ಮಾಯ ವೃಷಭಾಚಲ ನಿಲಯ
ದಾಮೋದರಾಯ ಧರ್ಮಗುಣ

ನಮೊ ಸನಾತನಾಯ ಶ್ರೀಶೈಲಾಚಲ ನಿಲಯ
ಹೃಷಿಕೇಶಾಯ ಸಿರಿರಮಣ

ನಮೊ ಕಮಲನಾಥಾಯ ಕ್ಷೀರಾಬ್ಧಿ ನಿಲಯ
ವರಪ್ರದಾಯ ಸುಜನಪ್ರಾಣ

ನಮೊ ಗೋವಿಂದಾಯ ಗೋಕುಲ ನಿಲಯ
ಗೋಪನಂದಾಯ ಮನಮೋಹನ

ನಮೊ ವಿಷ್ಣುದೇವಾಯ ವೈಕುಂಠ ನಿಲಯ
ದಶರೂಪಾಯ ಗೋವರ್ಧನ

ನಮೊ ವಿಶ್ವರೂಪಾಯ ವರಾಹಚಲ ನಿಲಯ
ಶ್ರೀನಿವಾಸ ವಿಠಲಾಯ ಜನಾರ್ಧನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೪.೨೦೧೧

Shri Krishnana Nooraru Geethegalu - 077

ನಮೊ ನಾರಾಯಣ

ಓಂ ನಮೊ ನಾರಾಯಣ
ಶ್ರೀ ಶುಭಗುಣ ಲೋಕಕಲ್ಯಾಣ

ಓಂ ನಮೊ ನಾರಾಯಣ
ಪಾವನ ಕರುಣ ವಾಮನ ಶ್ರೀಚರಣ

ಓಂ ನಮೊ ನಾರಾಯಣ
ಸಕಲ ಸದ್ಗುಣ ಪುಣ್ಯಯಮುನಾ

ಓಂ ನಮೊ ನಾರಾಯಣ
ಸತ್ಚರಿತ ಸುಗುಣ ಚರಾಚರ ಕಾರಣ

ಓಂ ನಮೊ ನಾರಾಯಣ
ಕಮಲನಯನ ಸುಂದರ ವದನ

ಓಂ ನಮೊ ನಾರಾಯಣ
ಮನಮೋಹನ ಮೂನಾಮ ಚಂದನ

ಓಂ ನಮೊ ನಾರಾಯಣ
ಆದಿ ಸನಾತನ ಸೂರ್ಯಲೋಚನ

ಓಂ ನಮೊ ನಾರಾಯಣ
ಸುಮುಖ ಸತ್ದರ್ಶನ ಸುದರ್ಶನ

ಓಂ ನಮೊ ನಾರಾಯಣ
ಜೀವಜಾಲ ಪಾಲನ ಜನಾರ್ಧನ

ಓಂ ನಮೊ ನಾರಾಯಣ
ಶ್ರೀನಿವಾಸ ವಿಠಲ ವಸುನಂದನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೪.೨೦೧೧

Monday, April 11, 2011

Shri Krishnana Nooraru Geethegalu - 076

ನಂಬಿ ಭಜಿಸಿರೊ

ನಂಬಿ ಭಜಿಸಿರೊ ಇವನ ನೆಚ್ಚಿ ಭಜಿಸಿರೊ ಇವನ
ತ್ರೇತೆಯಿಂ ಕಲಿವರೆಗು ಧರೆ ಕಾಯ್ದ ಶ್ರೀಧರನ

ರಾಮ ರಾಮಯೆನಲು ಎದೆಯೊಕ್ಕು ಕೂತವನ
ಬಕುತಿಯಿಂ ಬಾ ಎನಲು ಶಬರಿಗೊಲಿದವನ
ಶಿಲೆಯಾದಹಲ್ಯೆಯ ಶಾಪ ಪರಿಹಾರಕನ
ಕೌಸಲ್ಯೆ ಕಂದನ ಪಿತವಾಕ್ಯ ಪಾಲಕನ (೧)

ಹರಿ ನೀನೆ ಗತಿಯೆನಲು ಕರಿಯ ಕಾಯ್ದವನ
ನಾರಾಯಣನೆನಲು ನರಸಿಂಹನಾದವನ
ಅಬಲೆಯಾರ್ತದ ಮೊರೆಗೆ ವಸ್ತ್ರದಕ್ಷಯನ
ಯಶೋದೆ ಕಂದ ಶ್ರೀ ದ್ವಾರಕಾನಂದನ (೨)

ಸಲಹೊ ಶ್ರೀನಿಧಿಯೆನಲು ಬಿಡದೆ ಬೆನ್ನಾದನ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲ
ಕರುಣಿಪನೊ ಭಜಿಪರಿಗೆ ಸುಕೃತವು ಸನ್ಮಾನ
ಕಳೆದಲವು ಜನುಮದ ಅಕ್ಷಮ್ಯದಪಮಾನ (೩)

ನಂಬಿ ಭಜಿಸಿರೊ ಇವನ ನೆಚ್ಚಿ ಭಜಿಸಿರೊ ಇವನ
ತ್ರೇತೆಯಿಂ ಕಲಿವರೆಗು ಧರೆ ಕಾಯ್ದ ಶ್ರೀಧರನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೪.೨೦೧೧

Sunday, April 10, 2011

Shri Krishnana Nooraru Geethegalu - 075

ಕನಕಗೊಲಿದನೆ ಕೃಷ್ಣ

ಕನಕಗೊಲಿದನೆ ಕೃಷ್ಣ ಆಲಿಸೆನ್ನೆಯ ಮೊರೆಯ
ಪಾಮರರ ಪಾಲಿಪನೆ ವಾಸುದೇವ

ಆವುದಾದಿಯೊ ಅರಿಯೆ ಅಂತ್ಯವೆಲ್ಲಿಯೊ ಅರಿಯೆ
ಬಲ್ಲಿದನೆ ನಡುವೆ ನೀ ನಡೆಸಬೇಕೊ
ಕಾಯ ನಿನ್ನದು ಹರಿಯೆ ಮೋಹವೆಂದರೂ ಹರಿಯೆ
ಹೃದಯ ಸತ್ಯದಿ ನೀ ನುಡಿಸಬೇಕೊ (೧)

ಆದಿಬ್ರಹ್ಮನೆ ಹರಿಯೆ ಆವ ಶಾಸ್ತ್ರವನರಿಯೆ
ನಿನ್ನುದುರದೊಳಗೆನ್ನ ಕಾಯಬೇಕೊ
ಕುಲಗೋತ್ರ ಸೂತ್ರವದ ಅರಿಯೆ ಗೋಕುಲನೆ
ಮಾನಜನರೊಳಗೆನ್ನ ಸಲಹಬೇಕೊ (೨)

ನಿನ್ನ ಸೃಷ್ಠಿಯೊ ಹರಿಯೆ ನಿನ್ನ ಬಿಟ್ಟಿರಲರಿಯೆ
ಶ್ರೀಪಾದ ಸನಿಹದ ಕರುಣೆ ಬೇಕೊ
ಶ್ರೀನಿವಾಸ ವಿಠಲನೆ ಕಿಂಡುಡುಪಿ ಕೃಷ್ಣಯ್ಯ
ನಿನ್ನ ರಕ್ಷೆಯು ನಿರತವೆನಗೆ ಬೇಕೊ (೩)

ಕನಕಗೊಲಿದನೆ ಕೃಷ್ಣ ಆಲಿಸೆನ್ನೆಯ ಮೊರೆಯ
ಪಾಮರರ ಪಾಲಿಪನೆ ವಾಸುದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೪.೨೦೧೧