Friday, November 16, 2012

Shri Krishnana Nooraru Geethegalu - 314

ಪ್ರಣವರೂಪ

ಪಾಲಿಪುದು ಪಾವನನೆ ಪಾಪನಾಶನ ಕೃಷ್ಣ
ಪುರುಷೋತ್ತಮ ವಂದೆ ಪ್ರಣವರೂಪ

ಜಗದಾದಿ ಜಂತುಜನ ಕಲುಷವನು ನಿಮಿಷದೊಳು
ಕಳೆದು ಕಾವನೆ ದೇವ ಪರಮ ಪರುಷ
ಸಕಲ ಸುರಗಣ ವಂದ್ಯ ಮುನಿಜನಾತ್ಮನೆ ಕೃಷ್ಣ
ಸ್ಮರಣೆ ಮಾತ್ರದೆ ನಿನ್ನ ಮೂಜಗದೆ ಹರುಷ (೧)

ಮೂಸೃಷ್ಟಿಯ ಪ್ರಭುವೆ ನೀ ನಾಕುನುಡಿರೂಪ
ಹಲವು ನಿಜದೊಳು ನೀನೆ ಏಕಸ್ವರೂಪ
ಬಿಡದೆನ್ನ ಮಸುಕಿದೀ ಮೌಢ್ಯತೆಯ ತಿಮಿರವನು
ಬಿಡಿಸೆನ್ನ ಸಲಹೊ ನೀ ಶ್ರೀನಿವಾಸ ವಿಠಲ (೨)

ಪಾಲಿಪುದು ಪಾವನನೆ ಪಾಪನಾಶನ ಕೃಷ್ಣ
ಪುರುಷೋತ್ತಮ ವಂದೆ ಪ್ರಣವರೂಪ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೧೧.೨೦೧೨

No comments:

Post a Comment