Tuesday, July 9, 2013

Shri Krishnana Nooraru Geethegalu - 343

ಎಂದಿಗಾದರೂ ಒಲಿಯೊ

ಎಂದಿಗಾದರೂ ಒಲಿಯೊ ಇಂದಿರೆ ರಮಣ ನೀ
ಇಂದು ಮುಂದೆಂದೆಂದು ನಂಬಿಹೆನೊ ನಾ ನಿನ್ನ

ಕ್ಷಣದ ಜೀವವೊ ನಾನು ಅಣುಕ್ಷಣವು ಹರಿಯೆನುವೆ
ಅಣುರೇಣುತೃಣ ಕಾವ ದೇವ ದೇವ
ಎನಿತು ಜನುಮದಿ ಕರೆಯೊ ನಿನ್ನೊಡನೆ ನಾ ಬರುವೆ
ದಿವ್ಯಚರಣವ ಸ್ಮರಿಸೆ ಜಗವ ಕಾವ (೧)

ಅಜಮಿಳನು ಹರಿಯೆನಲು ಆ ಕ್ಷಣದಿ ಕಂಡವನೆ
ಪಾಮರನ ದೀನನುಡಿ ನೀ ಕೇಳೆಯಾ
ರಾಮರಾಮಾ ಎನಲು ಆ ಶಬರಿಗೊಲಿದವನೆ
ನಾ ಕರೆಯೆ ಶ್ರೀಹರಿಯೆ ಬರದಿರುವೆಯಾ (೨)

ಕಲಿಯೊಳಗೆ ಜಪಮರೆತು ಭವದ ತಪನೆಯೊಳಿರುವೆ
ಕರೆತಂದವ ನೀನು ಕ್ಷಮಿಸು ಹರಿಯೆ
ಜಗದ ಸೂತ್ರಕ ನೀನೊ ಶ್ರೀನಿವಾಸ ವಿಠಲಯ್ಯ
ಎನ್ನ ತೊರೆದಿರುವುದು ನಿನಗೆ ಸರಿಯೆ (೩)

ಎಂದಿಗಾದರೂ ಒಲಿಯೊ ಇಂದಿರೆ ರಮಣ ನೀ
ಇಂದು ಮುಂದೆಂದೆಂದು ನಂಬಿಹೆನೊ ನಾ ನಿನ್ನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೭.೨೦೧೩

1 comment:

  1. ನಿಜ ಕರೆತಂದವನೇ ಅವನು ಪೊರೆಯಬೇಕಾದ್ದೂ ಅವನೇ!

    ಅಜಮಿಳನು ಹರಿಯೆನಲು ಆ ಕ್ಷಣದಿ ಕಂಡವನೆ
    ಪಾಮರನ ದೀನನುಡಿ ನೀ ಕೇಳೆಯಾ
    ರಾಮರಾಮಾ ಎನಲು ಆ ಶಬರಿಗೊಲಿದವನೆ
    ನಾ ಕರೆಯೆ ಶ್ರೀಹರಿಯೆ ಬರದಿರುವೆಯಾ (೨)

    ಇದು ನನ್ನ ಅಳಲೂ ಸಹ ಆಧುನಿಕ ದಾಸೋತ್ತಮ..

    ReplyDelete