Saturday, October 26, 2013

Shri Krishna Nooraru Geethegalu - 352

ನಿನ್ನ ದಿವ್ಯ ಚರಣತಲದಿ

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ಪುಟ್ಟಪಾದದ ದಿಟ್ಟದೊರೆಯೆ ಬಲಿಯ ಇಳೆಗೆ ಮೆಟ್ಟಿದಂದದಿ
ಕಲಿಯೊಳಡಗಿಹ ಅಹಂನಸುರನ ಶಿರವ ಕೆಡವಿ ನಿಶೆಯ ಕಳೆಯೊ (೧)

ಕಂದಗೊಲಿದನೆ ನಾರಸಿಂಹನೆ ನರನ ದೇಹದೀ ಕಂಭ ಸೀಳಿ
ಅಬ್ಬರಿಸಿಹ ಆರರಸುರರ ಕರುಳ ಕಡಿದು ದೂರಕಟ್ಟೋ (೨)

ಶಬರಿಗೊಲಿದನೆ ಸೀತಾರಾಮನೆ ರಾವಣನ ದುರುಮುರಿದನೆ
ಧರಣಿಯೊಳಗೆ ಕಾಮಕಪಟವ ಕಳೆದು ಸಲಹೊ ನಿಷ್ಕಾಮನೆ (೩)

ಮತ್ಸ್ಯನಾದನೆ ಕೂರ್ಮರೂಪನೆ ಪರುಶುರಾಮ ವರಾಹನೆ
ದ್ವಾಪರದೊಳು ಸುಜನಗೊಲಿದನೆ ಶ್ರೀನಿವಾಸ ವಿಠಲನೆ (೪)

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೧೦.೨೦೧೩

1 comment:

  1. 'ಅಹಂನಸುರ' ಒಳ್ಳೆಯ ಪ್ರಯೋಗ. ಉತ್ತಮ ಸಾಹಿತ್ಯ.

    ReplyDelete