Friday, November 27, 2015

Shri Krishnana Nooraru Geethegalu - 357

ಇರಬೇಕು ಬಕುತಿ

ಹೂವ್ವಿನೊಳಗಣ ಗಂಧದಂತೆ ಇರಬೇಕು ಬಕುತಿ
ಸೋತು ಸೋತು ಶ್ರೀಪಾದಕೆ ಗೆಲುವುದೇ ಮುಕುತಿ

ಚುಕ್ಕೆಯೊಳಗಣ ಹೊಳಪಿನಂತೆ ಇರಬೇಕು ಬಕುತಿ
ಚಕ್ಕೆಯೊಳಗಣ ಘಮಲಿನಂತೆ ಇರಬೇಕು ಬಕುತಿ
ನೀರಿನೊಳಗಣ ನಾದದಂತೆ ಮೌನದೊಳಗಣ ಮಾತಿನಂತೆ
ಇಲ್ಲದಂತೆಯೇ ಇರಬೇಕು ಅವ ಮೆಚ್ಚುವ ಬಕುತಿ (೧)

ಅನೇಕದೊಳಗಣ ಏಕದಂತೆ ಇರಬೇಕು ಬಕುತಿ
ಅವನೇ ಇವನೇ ಎನ್ನದಂತೆ ಇರಬೇಕು ಬಕುತಿ
ತ್ರೇತೆಯೊಳಗೆ ಶ್ರೀರಾಮ ದ್ವಾಪರದೆ ಕೃಷ್ಣನಾಮ
ಕಲಿಯೊಳಗೆ ಶ್ರೀನಿವಾಸ ವಿಠಲ ಮೆಚ್ಚುವ ಬಕುತಿ (೨)

ಹೂವ್ವಿನೊಳಗಣ ಗಂಧದಂತೆ ಇರಬೇಕು ಬಕುತಿ
ಸೋತು ಸೋತು ಶ್ರೀಪಾದಕೆ ಗೆಲುವುದೇ ಮುಕುತಿ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೧.೨೦೧೫

No comments:

Post a Comment