Wednesday, January 4, 2012

Shri Krishnana Nooraru Geethegalu - 199

ವಂದಿಪೆ ಹನುಮ

ವಂದಿಪೆ ಹನುಮ ನರಕುಲ ಕ್ಷೇಮ
ಪಾವನ ಪವನ ಶುಭಕಲ್ಯಾಣ

ವಾನರ ಸಂಜಾತ ಅಂಜನಾಸುತ ಶೂರ
ದೈತ್ಯಕುಲಾಂತಕ ದಶಬಾಹವೆ
ಭೀಮಸಹಾಯಕ ಭಜರಂಗಿ ಬಲದೇವ
ಧೀರಾತಿಧೀರ ಶ್ರೀದೀನಬಂಧವೆ (೧)

ಶ್ರೀರಾಮದೂತ ರಾಮನಾಮ ಪ್ರೀತ
ಸೀತಾರಾಘವ ಶ್ರೀಪಾದಸೇವಿತ
ಸಂಜೀವರಾಯನೆ ಲಕ್ಷ್ಮಣ ಪ್ರಾಣದಾತ
ಸಂಕಟಮೋಚಕ ಸುರಗಣವಂದಿತ (೨)

ಮುಗಿವೆನೊ ಕರಗಳ ಹರಿಸೆನ್ನ ಕರ್ಮವ
ಪಾಲಿಸೊ ಕಲಿಯೊಳು ಗುಣವಂತ
ಶ್ರೀನಿವಾಸ ವಿಠಲನ ಧ್ಯಾನವೆ ಜಯವೆಂಬ
ಸೂತ್ರವ ಅರಿತನೆ ಹನುಮಂತ (೩)

ವಂದಿಪೆ ಹನುಮ ನರಕುಲ ಕ್ಷೇಮ
ಪಾವನ ಪವನ ಶುಭಕಲ್ಯಾಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೧.೨೦೧೨

No comments:

Post a Comment