Sunday, January 1, 2012

Shri Krishnana Nooraru Geethegalu - 197

ನಾನೆಂಬುದಳಿಯಲಿ

ಬರಿದೆ ಭ್ರಮಿಸೆದೆನಯ್ಯ ನಾನು ನಾನೆಂದು
ನೀನೆ ಸರ್ವೋತ್ತಮನೊ ಅರಿವಾಯ್ತು ಎನಗಿಂದು

ನಾನು ಹುಟ್ಟಿತೊ ನನ್ನೊಳಗೆ ದೇವ
ಮನೆ ಮಡದಿ ಮದ ಮೋಹ ಇಹದ ವಿಷಯ
ಅಗಣಿತದ ಅರಸುಜನ ಅವನಿಯಾಳುವೆವೆನುತ
ಅನಾಮರಾದರೈ ಅರಿತೆ ದೇವ (೧)

ತ್ರೇತೆಯೊಳು ರಾವಣನ ಒಡಲೊಳುದಿಸಿದ ನಾನು
ದ್ವಾಪರದೆ ಕರುಳವರ ಕೇಕೆಯಾದೆ
ಭವವಾದೆ ಬಲಿಯೊಳಗೆ ಪ್ರಹ್ಲಾದ ಪಿತನೊಳಗೆ
ನಶ್ವರವು ನಾನೆಂದು ಅರಿತೆ ದೇವ (೨)

ಶ್ರೀಪಾದ ಮುಗಿವೆನೊ ಶ್ರೀಹರಿಯೆ ಕ್ಷಮಿಸೆಂದು
ಅಣುರೇಣುತೃಣದಾದಿ ದೇವ ಶರಣೆಂದು
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲಯ್ಯ
ನಾನೆಂಬುದಳಿದೆನ್ನ ನೀ ಪಾಲಿಸಯ್ಯ  (೩)

ಬರಿದೆ ಭ್ರಮಿಸೆದೆನಯ್ಯ ನಾನು ನಾನೆಂದು
ನೀನೆ ಸರ್ವೋತ್ತಮನೊ ಅರಿವಾಯ್ತು ಎನಗಿಂದು

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೧.೨೦೧೨

No comments:

Post a Comment