Sunday, March 17, 2013

Shri Krishnana Nooraru Geethegalu - 337

ಹರಿಯ ತೋರಿಸೊ

ಹರಿಯ ತೋರಿಸೊ ಹನುಮ ಹರಿಯ ತೋರಿಸೊ
ಹರಿಯ ತೋರಿಸೆನ್ನ ಮುಕುತಿಯ ಗುರಿಯ ತೋರಿಸೊ

ಉತ್ತಮೋತ್ತಮ ರಾಮ ತ್ರೇತೆಯೋತ್ತಮನ
ರಘುವಂಶತಿಲಕ ಶ್ರೀಪುರುಷೋತ್ತಮನ
ಜಾನಕಿ ಪ್ರಾಣ ನಿನ್ನ ಶ್ರೀಚರಣ ದೇವನ
ಧರೆಯೊಳಗೆ ಧರ್ಮವನು ಕಾವನ ಶ್ರೀರಾಮನ (೧)

ಹರಿಯೆನಲಾ ಅಜಮಿಳನು ಅರೆಚಣದಿ ಮೂಡಿದನ
ನಾರಾಯಣ ಎನಲು ಕಂಬವನೆ ಸೀಳಿದನ
ಕೃಷ್ಣ ಕಾಯೋ ಎನಲು ಮಾನವಸ್ತ್ರವಾದವನ
ಧರ್ಮದಾ ಐವರಿಗೆ ನೀತಿಶಸ್ತ್ರವಾದವನ (೨)

ಕಲಿಯೊಳಗೆ ರಾಯರಾಯ ರೂಪದಿಂ ಪೊರೆವವನ
ಹಲಜನುಮದ ಕರುಮ ಕಶ್ಮಲವ ತೊಳೆವವನ
ಶುದ್ಧಾತ್ಮ ಸಜ್ಜನರಿಗೊಲಿದು ಒಳ ನೆಲೆಸುವನ
ಕಿಂಡುಡುಪಿಯೊಡೆಯ ಶ್ರೀ ಶ್ರೀನಿವಾಸ ವಿಠಲನ (೩)

ಹರಿಯ ತೋರಿಸೊ ಹನುಮ ಹರಿಯ ತೋರಿಸೊ
ಹರಿಯ ತೋರಿಸೆನ್ನ ಮುಕುತಿಯ ಗುರಿಯ ತೋರಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೩.೨೦೧೩

1 comment:

  1. ನಿಜ ಭಕ್ತಿಯ ಸೂಚಕ ಹನುಮ. "ಕಿಂಡುಡುಪಿಯೊಡೆಯ" ಒಳ್ಳೆಯ ಪದ ಪ್ರಯೋಗ.

    ReplyDelete