Wednesday, August 7, 2013

Shri Krishnana Nooraru Geethegalu - 346

ಕಂಡೆನಾ ಕೃಷ್ಣನ

ಕಂಡೆನಾ ಕೃಷ್ಣನ ಕಂಡೆನಾ ಕೃಷ್ಣನ (ಪ)

ಕಂಡೆನಾ ಕೃಷ್ಣನ ದೇವಕಿಯ ಕಂದನ
ಜಗದೋದ್ಧಾರ ಶ್ರೀ ತಂದೆ ಗೋವಿಂದನ (ಅ ಪ)

ಜಗದಾದಿ ವಂದ್ಯನ ದೇವ ವಾಸುದೇವನ
ಯದುಕುಲೋತ್ತಮನೆಮ್ಮ ನಂದನಾನಂದನ (೧)

ಮಾವಕಂಸನ ಕೊಂದನ ಉರಗವೇರಿ ನಿಂದನ
ಭವದ ಭಯವ ಕಳೆವಯೆಮ್ಮ ಬಾಲಗೋಪಾಲನ (೨)

ತ್ರೇತೆಯಾ ರಾಮನ ಗೋಕುಲದ ಶ್ಯಾಮನ
ಧರೆಯೊಳಗೆ ಸುಜನಗೊಲಿದ ಶ್ರೀನಿವಾಸ ವಿಠಲನ (೩)

ಕಂಡೆನಾ ಕೃಷ್ಣನ ಕಂಡೆನಾ ಕೃಷ್ಣನ (ಪ)

ಕಂಡೆನಾ ಕೃಷ್ಣನ ದೇವಕಿಯ ಕಂದನ
ಜಗದೋದ್ಧಾರ ಶ್ರೀ ತಂದೆ ಗೋವಿಂದನ (ಅ ಪ)

(ಇಂದು ಕನಕಪುರ ರಸ್ತೆಯಲ್ಲಿನ ಹಾಗೂ ರಾಜಾಜಿನಗರದ ಇಸ್ಕಾನಿನಲ್ಲಿ ಶ್ರೀಕೃಷ್ಣ ದರ್ಶನದ ನಂತರ ಮೂಡಿದ್ದು)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೩

1 comment:

  1. ಭವದ ಭಯವ ಕಳೆವವನ ಬಗ್ಗೆ ಒಳ್ಳೆಯ ದಾಸರ ಪದ.

    ReplyDelete