Friday, August 30, 2013

Shri Krishnana Nooraru Geethegalu - 350

ಹೇ ಮುದ್ದುರಂಗ

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ಮಾನದೊಳು ಬಹುಮಾನ ಮೇಘಶ್ಯಾಮನ ಧ್ಯಾನ
ಮಾಳ್ಪರಿಗೆ ಧರಣಿಯೊಳು ಸಕಲ ಸಮ್ಮಾನ
ಕಲಿನರನ ನಾಲಗೆಯ ನುಡಿನುಡಿಯು ಹರಿಯೆನಲು
ಇಹದೆ ದುರ್ಗತಿಯಳಿದು ಮುಕುತಿ ಸೋಪಾನ (೧)

ತ್ರೇತೆಯೊಳು ಪವಮಾನ ದ್ವಾಪರದಿ ಬಲವಾನ
ನಂಬಿ ನೆಚ್ಚಲು ಶಬರಿ ಪಡೆದ ಮಾನ
ನಾನೆಂಬೊ ನಶ್ವರದಿ ಶ್ರೀಹರಿಯೆ ಗತಿಯೆನಲು
ಕಾಯುವುದು ಶ್ರೀನಿವಾಸ ವಿಠಲ ಚರಣ (೨)

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೩

1 comment:

  1. 'ಶ್ರೀಹರಿಯೆ ಗತಿಯೆನಲು' ಅಹುದು 'ಅನುದಿನವು ಹರಿ ನಿನ್ನ ಸಂಗ"

    ReplyDelete