Tuesday, June 28, 2016

Shri Krishnana Nooraru Geethegalu - 358

ಕರುಣಿಸಿ ಕಾವುದು

ಕರೆತಂದನೆ ಹರಿಯೆ ಕರುಣಿಸಿ ಕಾವುದು
ಪಾಮರನೆನಗೆ ಪಾದಸೇವೆಯನಿತ್ತು

ಅಜಮಿಳನವನು ನಾರಾಯಣ ಎನಲು
ಕಂಭವ ಮುರಿದೆ ಕಂದ ತಾ ಕರೆಯಲು
ಶಿಲೆಗೊದಗಿದನೆ ಶ್ರೀರಾಮಯ್ಯ
ಜಗದೋದ್ಧಾರಕ ಜಾನಕೀರಮಣ (೧)

ಅರಿವಿತ್ತವ ನೀನೆ ಮರೆವಿತ್ತವ ನೀನೆ
ಮದ ಮೋಹ ಮತ್ಸರ ಮಾಯೆಯಿತ್ತವ ನೀನೆ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲನೆ
ತಪ್ಪುಗಳ ಮನ್ನಿಸಿ ನರನೆನ್ನ ಕಾಯೋ (೨)

ಕರೆತಂದನೆ ಹರಿಯೆ ಕರುಣಿಸಿ ಕಾವುದು
ಪಾಮರನೆನಗೆ ಪಾದಸೇವೆಯನಿತ್ತು

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೭.೨೦೧೬

No comments:

Post a Comment