Wednesday, June 27, 2012

Shri Krishnana Nooraru Geethegalu - 241

ತುಂಗಾತೀರನಿವಾಸ

ತುಂಗಾತೀರ ನಿವಾಸ ಶ್ರೀಗುರು ರಾಯವಿಶೇಷ
ಮುದ್ದು ಗೋವಿಂದನ ಶ್ರೀಪಾದ ದಾಸ

ನೀ ಇರುವೆಡೆಯೊಳೆ ಎನ್ನಿರುವೊ ತಂದೆ
ಗತಿ ಎನಗಾರೊ ಓಡೋಡಿ ಬಂದೆ
ನರಬೊಂಬೆಯೊ ನಾನು ಅನ್ಯಗಳಾಗರ
ಸೂತ್ರಕ ನೀನೊ ಶುದ್ಧದಿ ಸಲಯೆನ್ನ (೧)

ಬಲ್ಲೆನೊ ಕೃತದಿಂದ ನೀನೆನ್ನ ಪೊರೆದವನು
ಕಲಿಯುಗ ವರದನು ಅಕ್ಷಯ ಕಾಮಧೇನು
ಶ್ರೀನಿವಾಸ ವಿಠಲನೆ ಒಲಿದೆಮ್ಮ ಕಲ್ಪವೃಕ್ಷ
ವಾಯು ಬಲದೇವ ಮಧ್ವಶ್ರೀ ಜಗರಕ್ಷ (೨)

ತುಂಗಾತೀರ ನಿವಾಸ ಶ್ರೀಗುರು ರಾಯವಿಶೇಷ
ಮುದ್ದು ಗೋವಿಂದನ ಶ್ರೀಪಾದ ದಾಸ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೬.೨೦೧೨

No comments:

Post a Comment