Sunday, June 10, 2012

Shri Krishnana Nooraru Geethegalu - 238

ನೀನೆ ಕರುಣಾಕರನೊ

ನೀನೆ ಕರುಣಾಕರನೊ ಕೃಷ್ಣ ಕೃಷ್ಣ
ನೀನೆ ಸಲಹುವುದೆನ್ನ ಕೃಷ್ಣ ಶ್ರೀಕೃಷ್ಣ

ನೀನೆ ಕೃತದೊಳು ನಿಜವು ಮತ್ಸ್ಯಾದಿ ಸೋಜಿಗವು
ನೀನಯ್ಯ ಮೂಜಗವು ಸುಜನ ಸುಖವು
ನೀನೆ ನರಕೇಸರಿಯು ಬಲಿಯ ಮೆಟ್ಟಿದ ಹರಿಯು
ನೀನಯ್ಯ ಧರೆ ದುರಿತವಳಿದ ದೊರೆಯು (೧)

ನೀನೆ ಗೋಕುಲ ಗೊಲ್ಲ ಮುದ್ದುರಾಧೆಯ ನಲ್ಲ
ನರನೆಂಬಿ ಗೋವುಗಳ ಕಾವ ಗೋಪಾಲ
ಕರವ ಮುಗಿವೆನೊ ತಂದೆ ನಾಮ ನಂಬಿಹೆ ಮುಂದೆ
ಕಾಯೆಮ್ಮ ಅನವರತ ಶ್ರೀನಿವಾಸ ವಿಠಲ (೨)

ನೀನೆ ಕರುಣಾಕರನೊ ಕೃಷ್ಣ ಕೃಷ್ಣ
ನೀನೆ ಸಲಹುವುದೆನ್ನ ಕೃಷ್ಣ ಶ್ರೀಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೬.೨೦೧೨

No comments:

Post a Comment