Thursday, June 28, 2012

Shri Krishnana Nooraru Geethegalu - 242

ಏನೊ ತಳಮಳ ಇವಳಿಗೆ

ಏನೊ ತಳಮಳ ಇವಳಿಗೆ ಗೋಕುಲದ ಸಿರಿ ಚೆಲುವೆಗೆ
ನಯನದಂಚೊಳು ಬಯಕೆ ನವಿಲು ಕಾಯುತಿಹಳಾ ಚೆಲುವಗೆ

ಬೃಂದಾವನಕವ ಬರುವನೊ ಒಲುಮೆ ಹೂಮಳೆಗರೆವನೊ
ಬಳ್ಳಿ ತೆರದೊಳು ಬಳಸಿ ನಡುವನು ನಲುಮೆಚಿತ್ರ ಬರೆವನೊ (೧)

ನಯನ ನಯನವ ಸೆಳೆವನೊ ಅಧರಕಧರವ ಬೆಸೆವನೊ
ವಿರಹದೊಡಲ ವೀಣೆ ಮೀಟಿ ಕಡಲಿನಂದದಿ ಮೊರೆವನೊ (೨)

ಚೆಲುವರೊಳಗೆ ಚೆಲುವನೊ ಜಗದ ಪ್ರೀತಿಗೆ ಮಿಡಿವನೊ
ಶ್ರೀನಿವಾಸ ವಿಠಲ ಕೃಷ್ಣ ಅದಾರ ಮಿಲನದೊಳಿರುವನೊ (೩)

ಏನೊ ತಳಮಳ ಇವಳಿಗೆ ಗೋಕುಲದ ಸಿರಿ ಚೆಲುವೆಗೆ
ನಯನದಂಚೊಳು ಬಯಕೆ ನವಿಲು ಕಾಯುತಿಹಳಾ ಚೆಲುವಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೬.೨೦೧೨

No comments:

Post a Comment