Wednesday, February 1, 2012

Shri Krishnana Nooraru Geethegalu - 203

ಪುಣ್ಯಪಾದ ಕೃಷ್ಣ

ಕೃಷ್ಣ ಮುರಳಿ ಮೋಹನ
ಪಾಲಿಸೆಮ್ಮ ಪಾವನ
ಅಣುರೇಣುತೃಣಮೂಲನೆ
ಸುಖದೊಳಿರಿಸೊ ಜೀವನ

ದುರಿತಗಳನು ಅಳಿಸೊ ಎಮ್ಮ
ಸುಪಥದೊಳು ನಡೆಸೊ
ಸುಕೃತಗಳನು ಹರಸಿ ಕೃಷ್ಣ
ಅಂತರಂಗದಿ ನೆಲೆಸೊ (೧)

ಆದಿ ಯುಗಗಳಿಂದ ಜಗವ
ಪೊರೆದ ಪುಣ್ಯ ಪಾದ ಕೃಷ್ಣ
ಬೇಡುವೆನೊ ಬಿನ್ನಹವು ಎನ್ನದು
ಶ್ರೀನಿವಾಸ ವಿಠಲ ಕಾಯೊ (೨)

ಕೃಷ್ಣ ಮುರಳಿ ಮೋಹನ
ಪಾಲಿಸೆಮ್ಮ ಪಾವನ
ಅಣುರೇಣುತೃಣ ಮೂಲನೆ
ಸುಖದೊಳಿರಿಸೊ ಜೀವನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೧.೨೦೧೨

No comments:

Post a Comment