Tuesday, May 21, 2013

Shri Krishna Vachanagalu

ತೆಂಗಿನ ತಲೆಯೊಡೆದು ಬಾಳೆತುದಿಯನು ಚಿವುಟಿ ಕಪ್ಪುರ
ಗಿರಿಯುರಿದು ಧಗಧಗ ಧೂಪಹೊಗೆ ಮನವದು ಮುಗಿಯ
ದಿದ್ದೊಡೆ ಹರಿಗೆ ಫಲವೇನೆಂದ ಶ್ರೀನಿವಾಸ ವಿಠಲ (011)

ಮತಿಯ ಮಸುಕಿದೀ ನಿಶೆಯ ಬಡಿದಟ್ಟು ದಿಸೆದಿಸೆಯೊಳು
ಹೊಸ ಅರಿವಿನುಶೆ ಹರಿಬಿಟ್ಟು ಸಹಜದೀ ಕತ್ತಲಮಾಯೆ
ಗೆ ನಂಬುಗೆಯ ಹಣತೆ ಹಚ್ಚಿಟ್ಟೆಂದನೆಮ್ಮ ಶ್ರೀನಿವಾಸ ವಿಠಲ (012)

ಸಂಭವವು ಅಸುರನಬ್ಬರವವನಿಯೊಳು ಸುರತನವದು
ಸುಮ್ಮನಿರೆ ಮತ್ತಾರರಾರ್ಭಟದಾ ಬಲಿಕೇಕೆ ನಿನ್ನೊಳು
ನಂಬಿದೊಡೆ ಕಾವನವ ದಶದೊಳೆಂದ ಶ್ರೀನಿವಾಸ ವಿಠಲ (013)

ಪಕಳೆಗಳರಳಿಸುವವು ಮೊಗ್ಗು ಹಾಡುವವು ಹಕ್ಕಿ ಕೊರಳ
ಕೊಳಲುಲಿದು ತಮ್ಮಾತ್ಮದಾನಂದಕೆ ನೋಡ್ವರ ಕೇಳ್ವರ
ಮನೋಲ್ಲಾಸಪಡುವಚ್ಚರಿಗೆ ಬೆರಗಾದ ಶ್ರೀನಿವಾಸ ವಿಠಲ (014)

ಕೂಸ ಬಸಿರಿನೊಳಗೊಂದು ಕೂಸುದುಸುವಚ್ಚರಿ
ಆಡದ ಬಾಯೊಳಗದುವು ಅಬ್ಬರಿಸಿದಾಕ್ಷಣದಿ
ಕೂಸದರಕೂಸಿನವಸಾನವೆಂದ ಶ್ರೀನಿವಾಸ ವಿಠಲ (015)

ಇಳಿ ಮೊದಲು ನಿನ್ನಾಳಕೆ ಅದರಾಳಕೆ ಅತಳ ಸುತಳ ಪಾತಳಕೆ
ಕದಡು ಹಾಲಾಹಲ ಮುರಿದದರೊಳಗಾರರಸುರರ ಕೋಲಾಹಲ
ನಿಶ್ಚಯವು ಜಯವೆಂದು ನಿನಗಮೃತಬಿಂದು ಶ್ರೀನಿವಾಸ ವಿಠಲ (016)

ಬೇವಸವೇಕೆ ಅಸುವಿಗೆ ವ್ಯಸನವೇಕೆ ವಸುವಿಗೆ ಮಣ್ಣಾಗುವ ಕಸು
ವಿಗೆ ಶತಕೋಟಿಶಿರಗಳಾಳ್ದ ಅವನಿಗೆ ಉತ್ತಮರುಸಿರದಳಿದರೂ
ಯುಗಯುಗದಲಿ ಪುಣ್ಯದೆಸರುಳಿವುದೆಂದ ಶ್ರೀನಿವಾಸ ವಿಠಲ (017)

ಅಷ್ಟದಿಕ್ಕುಗಳಿರ್ಪ ಅವನಿಯನೊಲ್ಲೆನು ಐರಾವತ ಕುಮುದಾಂಜನಾದಿ ಅಷ್ಟದಿಗ್ಗಜಗಳ
ಅಷ್ಟಭೋಗಗಳೆಂಬೊ ನಿಧಿ ನಿಕ್ಷೇಪ ಮತ್ತಲವನು ಒಲ್ಲೆನಯ್ಯ ಅಷ್ಟೈಶ್ವರ್ಯ ಮಂಗಲವ
ಎನ್ನೊಳಡಗಿದ ಅಷ್ಟಮದಗಳ ನೀ ಮುರಿದೊಡೆ ಮತ್ತೆಲ್ಲವುಗಳ ದೊರೆ ನಾನು ಶ್ರೀನಿವಾಸ ವಿಠಲ (018)

ಛಲದೊಳು ಕುರುಜನಾಗು ಬಲದೊಳು ಮಧ್ವ ಪೂರ್ವಾವತಾರಿ
ನಯದೊಳು ದ್ವಾರಕಾಧೀಶನಾಗು ಎಲ್ಲಕು ಮೊದಲು ಕೊಡು
ವಿಕೆಯಲಿ ಕುಂತಿಯ ಹಿರಿಬಸಿರು ನೀನಾಗೆಂದ ಶ್ರೀನಿವಾಸ ವಿಠಲ (019)

ರುಚಿಬಾಳೆ ಉಂಡಂತಿರಲಿ ನೀ ಬರೆದಿದ್ದೊದುಗನಿಗೆ ಕುಡಿದಂತೆ
ಸವಿಕಾವೇರಿಯನು ಅಲ್ಲದ ಬರಹವದು ತೊಳೆಬಿಡಿಸದ್ಹಲಸ
ನೆಂಟರ ಗಂಟಲೊಳಿಸಿದಂತೆಂದನೆಮ್ಮ ಶ್ರೀನಿವಾಸ ವಿಠಲ (020)

No comments:

Post a Comment