Monday, November 7, 2011

Shri Krishnana Nooraru Geethegalu - 183

ಏನೊ ಕಾರಣವರಿಯೆ

ಏನೊ ಕಾರಣವರಿಯೆ ಕೃಷ್ಣನೊಲಿಯನೊ ಎನಗೆ
ಪಡೆವ ಬಗೆ ಬಲ್ಲಿದರೆ ಪೇಳಿರಯ್ಯ

ಹಲವು ಜಲದೊಳು ಮಿಂದೆ ಏಕಪಾದದಿ ನಿಂದೆ
ಮೈಮಡಿಗೆ ಜಗದೊಡೆಯನೊಲಿಯಲಿಲ್ಲ
ಮಸ್ತಕಕೆ ಮೊಗೆಮೊಗೆದು ಕ್ಷೀರವರ್ಷವನೆರೆದೆ
ಶ್ರೀಶವದನದೆ ಹರುಷ ಹಾಡಲಿಲ್ಲ (೧)

ಬಗೆಬಗೆಯ ಫಲಪುಷ್ಪ ಗಂಧಧೂಪಾರತಿಯ
ಹಚ್ಚಿದೊಡೆ ಸ್ವಚ್ಛನವ ಮೆಚ್ಚಲಿಲ್ಲ
ಸ್ವರ್ಣ ರಜತಾದಿ ಜರಿಯಪಟ್ಟೆಯನ್ನುಟ್ಟ
ಶಿಲೆಯೊಳಗೆ ಶ್ರೀಪಾದನಿರಲೇ ಇಲ್ಲ (೨)

ಗಿರಿಯ ಶಿಖರವದೇರಿ ನಾಸಿಕವ ಬಂಧಿಸಿದೆ
ಭಕ್ತವತ್ಸಲ ಹರಿಯು ಬರಲೇ ಇಲ್ಲ
ಮನವಿರದೆ ಬರಿಮೈಯ್ಯ ಮರ್ಕಟನ ಆಟಕ್ಕೆ
ಶ್ರೀನಿವಾಸ ವಿಠಲಯ್ಯ ಮಣಿಯಲಿಲ್ಲ (೩)

ಏನೊ ಕಾರಣವರಿಯೆ ಕೃಷ್ಣನೊಲಿಯನೊ ಎನಗೆ
ಪಡೆವ ಬಗೆ ಬಲ್ಲಿದರೆ ಪೇಳಿರಯ್ಯ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೧೧.೨೦೧೧

No comments:

Post a Comment