Wednesday, March 7, 2012

Shri Krishnana Nooraru Geethegalu - 213

ಸ್ಮರಣೆ ಮಾಡಿರೊ ಶ್ರೀರಾಯರ

ಸ್ಮರಣೆ ಮಾಡಿರೊ ಶ್ರೀರಾಯರ ಕರುಣೆ ಕಾಣಿರೊ
ಹಲವು ರೂಪಗಳಲಿ ಹರಿಯ ಸೇವೆಗೈದ ಪುಣ್ಯಯತಿಯ

ಶಂಖಕರ್ಣ ಬಾಹ್ಲಿಕ ಪ್ರಹ್ಲಾದರಾದಿ ವ್ಯಾಸರಾಜ
ಭುವನಗಿರಿಯ ಭಾಗ್ಯವೆಮ್ಮ ರಾಘವೇಂದ್ರರಾಯರ (೧)

ಯತಿಗಳಲಿ ಸುಯತೀಂದ್ರ ಮತಿಯೊಳು ತಾ ಸುಮತೀಂದ್ರ
ನಿರ್ಗತಿಗೆ ಸುಗತಿಯೆಮ್ಮ ರಾಘವೇಂದ್ರರಾಯರ (೨)

ಶರಣ ಕಾಮಧೇನುವ ಸುಜನ ಕಲ್ಪವೃಕ್ಷವ
ಒಲಿದ ನರಗೆ ಸನ್ಮಂಗಳವೀವ ರಾಘವೇಂದ್ರರಾಯರ (೩)

ತುಂಗಾತೀರದೊಡೆಯನ ಮುಖ್ಯಪ್ರಾಣರೊಲಿದನ
ಶ್ರೀನಿವಾಸ ವಿಠಲ ಪ್ರಿಯನ ರಾಘವೇಂದ್ರರಾಯರ (೪)

ಸ್ಮರಣೆ ಮಾಡಿರೊ ಶ್ರೀರಾಯರ ಕರುಣೆ ಕಾಣಿರೊ
ಹಲವು ರೂಪಗಳಲಿ ಹರಿಯ ಸೇವೆಗೈದ ಪುಣ್ಯಯತಿಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೩.೨೦೧೨

No comments:

Post a Comment