Sunday, March 4, 2012

Shri Krishnana Nooraru Geethegalu - 211

ನೀನಿರದೆ ಮಾಧವ

ಬೇಸರವೀ ಸಂಜೆಯು ನೀನಿರದೆ ಮಾಧವ
ಎಲ್ಲಿರುವೆಯೊ ಸಖನೆ ತಾಳೆನೀ ವಿರಹವ

ಹರಿವ ಯಮುನೆಯೆ ಪೇಳೆ ಗಾನ ಕಾಜಾಣವೆ
ಚಿಗುರು ಹಸಿರಿನ ನಡುವೆ ನಗುವ ಸುಮವೆ
ಗೋಪಾಲನೆಲ್ಲಿಹನು ಹೇಳಿ ಗೋ-ಕರುಗಳೆ
ಕಂಡರವ ಬರಲೇಳಿ ಕಾದಿಹೆನು ಈಗಲೆ (೧)

ಎನ್ನೊಡಲ ವೀಣೆಯದು ಮೌನ ವೈಣಿಕನಿರದೆ
ನುಡಿಸು ಬಾರೆಲೊ ಕೃಷ್ಣ ಶೃಂಗಾರ ರಾಗ
ಚೆಲುವರೊಳು ಚೆಲುವ ನೀ ಶ್ರೀನಿವಾಸ ವಿಠಲನೆ
ನಿನ್ನವಳೊ ಈ ರಾಧೆ ನಂಬೊ ನನ್ನಾಣೆ (೨)

ಬೇಸರವೀ ಸಂಜೆಯು ನೀನಿರದೆ ಮಾಧವ
ಎಲ್ಲಿರುವೆಯೊ ಸಖನೆ ತಾಳೆನೀ ವಿರಹವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೩.೨೦೧೨

No comments:

Post a Comment