Sunday, March 11, 2012

Shri Krishnana Nooraru Geethegalu - 214

ಪಾವನ ವನಮಾಲ

ತುಳಸೀ ದಳಮಾಲೆ ತಂದೆ ದೇವ ಅರ್ಪಿಸೆ ನಿನಗೆಂದೆ ಕೃಷ್ಣ
ಪೂಜಿಸೆ ನಿನ್ನಯ ಶ್ರೀಪಾದ ಕೃಷ್ಣ
ಜೀವನವೆನ್ನದು ಪಾವನ ವನಮಾಲ

ನಿನ್ನಯ ಕರದೊಳು ಮುರಳಿಯು ನಾನಯ್ಯ
ನವರಾಗ ನುಡಿಸೆನ್ನ ಶ್ರೀಮಾಧವ
ಎನ್ನ ಹೃದಯದ ಮಣಿವೀಣೆಯ ಮೀಟೆ
ಉಲಿವುದು ನಿನ್ನಯ ಶ್ರೀನಾಮನಾದ (೧)

ನವನೀತಚೋರನೆ ಗೋಕುಲ ಕೃಷ್ಣಯ್ಯ
ಎನ್ನ ಮನಚೋರನು ನೀನೆ ಕಾಣಯ್ಯ
ಎನ್ನ ಪ್ರಾಣವು ನೀನೊ ಶ್ರೀನಿವಾಸ ವಿಠಲಯ್ಯ
ಪ್ರೇಮದೀ ತುಳಸಿಮಾಲೆಯ ಧರಿಸಯ್ಯ (೨)

ತುಳಸೀ ದಳಮಾಲೆ ತಂದೆ ದೇವ ಅರ್ಪಿಸೆ ನಿನಗೆಂದೆ ಕೃಷ್ಣ
ಪೂಜಿಸೆ ನಿನ್ನಯ ಶ್ರೀಪಾದ ಕೃಷ್ಣ
ಜೀವನವೆನ್ನದು ಪಾವನ ವನಮಾಲ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೩.೨೦೧೨

No comments:

Post a Comment