Friday, March 2, 2012

Shri Krishnana Nooraru Geethegalu - 210

ಮತ್ತೆ ಸಂಜೆಯಾಗಿದೆ

ಮತ್ತೆ ಸಂಜೆಯಾಗಿದೆ ನಿನ್ನ ನೆನಪೆ ಕಾಡಿದೆ
ಬೃಂದಾವನದ ಎದೆಬನದೊಳು ಮರಳಿ ಬಂದು ಯೌವ್ವನ

ತೂಗುತಿರುವ ಉಯ್ಯಾಲೆಯಲಿ ಆವುದೊ ಹೊಸ ಸಂಭ್ರಮ
ನುಡಿಸೆ ವೀಣೆ ಕಾಯುತಿಹುದು ಶೃಂಗಾರದ ಸರಿಗಮ

ನಾಚಿ ಯಮುನೆ ದೂರ ಸರಿದು ಹಕ್ಕಿ ಕೊರಳೊಲು ಗಾನ ಬರೆದು
ವಿರಹಿ ರಾಧೆಯ ಒಡಲ ಕಡಲೊಳು ಬಯಕೆ ವರ್ಣವ ಸುರಿದು

ಬಾರೊ ಪ್ರಾಣಸಖನೆ ಸನಿಹ ಶ್ರೀನಿವಾಸ ವಿಠಲ
ಕೊಡುವೆ ಒಲುಮೆ ಸಕ್ಕರೆ ಬೆರೆತ ನೊರೆಹಾಲಿನ ಬಟ್ಟಲ

ಮತ್ತೆ ಸಂಜೆಯಾಗಿದೆ ನಿನ್ನ ನೆನಪೆ ಕಾಡಿದೆ
ಬೃಂದಾವನದ ಎದೆಬನದೊಳು ಮರಳಿ ಬಂದು ಯೌವ್ವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೩.೨೦೧೨

No comments:

Post a Comment