Monday, June 6, 2011

Shri Krishnana Nooraru Geethegalu - 124

ನಾಮಸ್ಮರಣೆಯ ಮಾಡೊ

ನಾಮಸ್ಮರಣೆಯ ಮಾಡೊ ಶ್ರೀಕೃಷ್ಣನ
ಇಂದಿರಾರಮಣ ಶ್ರೀಗೋವಿಂದನ

ಇನಿತು ಜನುಮಗಳಲ್ಲಿ ನೀಗೈದ ದುರಿತಗಳ
ಕಳೆದು ಕರುಣಿಸಿ ಕಾಯೊ ವಸುದೇವಕಂದನ
ಮುನ್ನಾರು ಜನುಮದೊಳು ಕಾಡುವ ಕರ್ಮಗಳ
ಮೆಟ್ಟಿ ಹರಸುವಯೆಮ್ಮ ರುಕ್ಮಿಣಿಯೊಡೆಯನ (೧)

ತ್ರೇತೆರಾಮನೊ ಇವನು ಪಿತವಾಕ್ಯ ಪಾಲಕನು
ಧರೆಯ ಧರ್ಮವ ಕಾಯ್ದ ಪುರುಷೋತ್ತಮ
ಸತ್ಯವಚನನೊ ರಾಮ ಸುಖದಿ ಸುಜನರ ಕಾವ
ಹನುಮ ಭೀಮರ ದೇವ ಸುಗುಣಧಾಮ (೨)

ಮದನನಯ್ಯನೊ ಇವನು ಕಂಸಕೇಡನು ಕೆಡುವಿ
ಮಾನಜನರನು ಕಾಯ್ದ ಮೇಘಶ್ಯಾಮ
ಶ್ರೀನಿವಾಸ ವಿಠಲಯ್ಯ ಗತಿ ನೀನೆ ಸಲಹೆನಲು
ಬಿಡದೆ ಕಲಿಯೊಳು ಕಾವ ಜೀವಕಾಮ (೩)

ನಾಮಸ್ಮರಣೆಯ ಮಾಡೊ ಶ್ರೀಕೃಷ್ಣನ
ಇಂದಿರಾರಮಣ ಶ್ರೀಗೋವಿಂದನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೬.೨೦೧೧

No comments:

Post a Comment