Monday, June 20, 2011

Shri Krishnana Nooraru Geethegalu - 129

ಕರೆತಂದವ ನೀನು

ಕರೆತಂದವ ನೀನೊ ಇಲ್ಲವೆನದಿರು ರಂಗ
ಕಾಯುವುದು ನಿನ್ನ ಧರ್ಮ ಕಾಯಕವೊ ಗೋವಿಂದ

ನೀನೆತ್ತ ಪೋಗುವೆಯೊ ಕರೆದೋಗು ಎಂದೆ ನಾ
ನಿನ್ನ ಶ್ರೀಪಾದದೊಳು ಎನ್ನಿರುವು ಎಂದೆ ನಾ
ಆವುದೋ ಯೋನಿಯಲಿ ಜೀವವಾಗಿಸಿ ಎನ್ನ
ಕರೆತಂದ ಕರುಣಾಳೆ ಕಾಪಾಡೊ ಗೋವಿಂದ (೧)

ಹಸಿವನಿಟ್ಟವ ನೀನು ಅನ್ನವನು ಇಕ್ಕುವುದು
ಹರಸಿ ಆಶೀರ್ವದಿಸಿ ಆಶ್ರಯದೊಳು
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲನೆ
ಸರ್ವಮಂಗಳ ಸುಖದಿ ಸಲಹಯ್ಯ ಎನ್ನ (೨)

ಕರೆತಂದವ ನೀನೊ ಇಲ್ಲವೆನದಿರು ರಂಗ
ಕಾಯುವುದು ನಿನ್ನ ಧರ್ಮ ಕಾಯಕವೊ ಗೋವಿಂದ

(ದಿನಾಂಕ ೨೦.೦೬.೨೦೧೧ರಂದು ತಿರುಮಲ ಶ್ರೀನಿವಾಸ ಸನ್ನಿಧಿಯಲ್ಲಿ ರಚಿಸಿದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೧

No comments:

Post a Comment