Saturday, June 18, 2011

Shri Krishnana Nooraru Geethegalu - 128

ಆದಿನಾಥ ಶ್ರೀನಾಥ

ಸನಾತನ ಸಲಹೀ ಅನಾಥನ ದೀನ
ನಾಥನಾಮದಾದಿನಾಥ ಶ್ರೀನಾಥ

ನೀನಿತ್ತ ತನುಮನವೊ ಬಹುಶುದ್ಧದೊಳು ಹರಿಯೆ
ಪಂಚಾಬ್ಧಿಯೊಳರಂಗ ಸರಿಶುದ್ಧವೊ
ನಡೆ ನೇರ ನುಡಿ ನೇರ ನಿಯತಿ ನಿನ್ನೊಳು ಹರಿಯೆ
ವೈಕುಂಠಪತಿ ಪೊರೆಯೊ ನಾರಾಯಣ (೧)

ಆದಿಯೊಳು ಅಜಮಿಳನ ಹರಿಯೆಂದಸುರಸುತನ
ಧರ್ಮವ ಗೆಲಿಸೆಂದು ಮೊರೆಬಂದ ಪಾಂಡವನ
ನೇಮದೊಳು ನಡೆಸಿದೆಯೊ ಶ್ರೀನಿವಾಸ ವಿಠಲಯ್ಯ
ಸುಖದೊಳಗೆ ನಡೆಸಿನ್ನು ಈ ದೀನನ (೨)

ಸನಾತನ ಸಲಹೀ ಅನಾಥನ ದೀನ
ನಾಥನಾಮದಾದಿನಾಥ ಶ್ರೀನಾಥ

(ದಿನಾಂಕ ೨೦.೦೬.೨೦೧೧ರಂದು ತಿರುಮಲ ಶ್ರೀನಿವಾಸ ಸನ್ನಿಧಿಯಲ್ಲಿ ಪರಿಷ್ಕರಿಸಿ ಬರೆದದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೧

No comments:

Post a Comment