Saturday, June 11, 2011

Shri Krishnana Nooraru Geethegalu - 127

ಸ್ಮರಣೆಯೆ ಪುಣ್ಯವೊ

ಸ್ಮರಣೆಯೆ ಪುಣ್ಯವೊ ಹರಿನಾಮ..ನಾಮ
ಇಹಗತಿ ಮುಕುತಿಗೆ ಸುಖಧಾಮ..ರಾಮ

ಬ್ರಹ್ಮಮಾನಸಸುತ ತಂಬೂರನಾರದರು
ನಾದದೊಳ್ಹಾಡಿದ ಹರಿನಾಮ
ದ್ವೈಪಾಯನ ಶ್ರೀಮುನಿವೇದವ್ಯಾಸರು
ವೇದದೊಳೋದಿದ ಹರಿನಾಮ (೧)

ಮಧ್ಯಮಪಾಂಡವ ವೀರಾರ್ಜುನ ಧರ್ಮ
ವಿಜಯಕೆ ನೆಚ್ಚಿದ ಹರಿನಾಮ
ಕೇಸರಿಸುತ ಶ್ರೀಹನುಮಂತದೇವನು ಬಕುತಿ
ಯೊಳೊಪ್ಪಿದ ಹರಿನಾಮ (೨)

ದಾಸಾದಿದಾಸ ಶ್ರೀಪುರಂದರದಾಸರು ಕಲಿ
ಯೊಳು ಜಪಿಸಿದ ಹರಿನಾಮ
ಶ್ರೀನಿವಾಸ ವಿಠಲನೆ ನೀನೆಮ್ಮ ಗತಿಯೆನಲು
ಕರುಣಿಸಿ ಕಾಯುವ ಹರಿನಾಮ (೩)

ಸ್ಮರಣೆಯೆ ಪುಣ್ಯವೊ ಹರಿನಾಮ..ನಾಮ
ಇಹಗತಿ ಮುಕುತಿಗೆ ಸುಖಧಾಮ..ರಾಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೬.೨೦೧೧

No comments:

Post a Comment