Wednesday, August 17, 2011

Shri Krishnana Nooraru Geethegalu - 148

ಸುಜ್ಞಾನ ರಾಜ

ಮೂಲರಾಮ ಮೇಘಶ್ಯಾಮ ಮುಖ್ಯಪ್ರಾಣರೊಲಿದನೆ
ತುಂಗಾತೀರದಿ ನೆಲೆಸಿ ಸುಜನರ ಕಾವ ರಾಘವೇಂದ್ರನೆ

ಧರೆಯ ನರರ ಸಲಹೆ ಭುವನಗಿರಿಯೊಳುದಿತ ಸೂರ್ಯನೆ
ಜ್ಞಾನ ತೇಜನೆ ಸುಜ್ಞಾನ ರಾಜನೆ ವೃಂದಾವನದ ರಾಯನೆ (೧)

ಕಲಿಯ ಕರ್ಮವ ಕಳೆಯೆ ಮೋಕ್ಷವನೊಲ್ಲೆನೆಂದ ವಿಶೇಷನೆ
ಸತ್ಯಧರ್ಮದಾದಿ ಗುರುವೆ ಶಾಪಾನುಗ್ರಹ ಹರಿಶೇಷನೆ (೨)

ಭಜಿತ ಶರಣರ ಕಲ್ಪವೃಕ್ಷವೆ ನಮಿಸೆ ಕಾಮಧೇನುವೆ
ಶ್ರೀನಿವಾಸ ವಿಠಲನೊಲಿದನೆ ಪೊರೆಯೆಮ್ಮನು ಬೇಡುವೆ (೩)

ಮೂಲರಾಮ ಮೇಘಶ್ಯಾಮ ಮುಖ್ಯಪ್ರಾಣರೊಲಿದನೆ
ತುಂಗಾತೀರದಿ ನೆಲೆಸಿ ಸುಜನರ ಕಾವ ರಾಘವೇಂದ್ರನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೮.೨೦೧೧

No comments:

Post a Comment