Wednesday, August 3, 2011

Shri Krishnana Nooraru Geethegalu - 144

ಬರುವನೆ ಮಾಧವ

ಬರುವನೆ ಮಾಧವ ಹೇಳೆ ಸಖಿ ಇಂದು
ಬಾರನೇ ದುಗುಡವು ಕೇಳೆ ಸಖಿ

ಹಿಂದಿನ ಇರುಳು ತಡವಾಗಿ ಬಂದ
ಮನ್ನಿಸೆ ರಾಧೆ ಎನುತ ಗೋವಿಂದ
ಲೋಕಕಾರ್ಯವೆ ಅದಕೆ ಕಾರಣವೆನುತ
ಅಧರದೊಳಧರವ ಇರಿಸುತ ರಮಿಸುತ (೧)

ಬರುವವಸರದಿ ಮುರಳಿಯ ಮರೆತೆ
ನಾದವಾಲಿಸುವೆ ವೀಣೆಯ ನುಡಿಸೆಂದ
ಎನ್ನೆದೆ ವಿರಹದ ಬಯಕೆ ಬೃಂದಾವನದಿ
ಒಲವಿನ ಹೂಗಳ ಅರಳಿಸಿ ಅರವಿಂದ (೨)

ಮೂಜಗ ಮೋಹಿಸೊ ಮೋಹನನೆ ಅವನು
ಗೋಕುಲ ಪ್ರೀತಿಸೊ ಮದನನ ಪಿತನು
ಕರೆದೊಡೆ ಒಲುಮೆಯೊಳ್ ಓಡೋಡಿಬರುವ
ಎನ್ನಕ್ಕ ಲಕುಮಿಯ ಶ್ರೀನಿವಾಸ ವಿಠಲನು (೩)

ಬರುವನೆ ಮಾಧವ ಹೇಳೆ ಸಖಿ ಇಂದು
ಬಾರನೇ ದುಗುಡವು ಕೇಳೆ ಸಖಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೮.೨೦೧೧

No comments:

Post a Comment