Saturday, August 20, 2011

Shri Krishnana Nooraru Geethegalu - 149

ವಾಗ್ನಿಧಿ

ಸಲಹೊ ವಾಗ್ನಿಧಿಯೆ ಕರುಣಿಯೆನ್ನಯ ದೊರೆಯೆ
ಶಾಪಾನುಗ್ರಹದೇವ ಶ್ರೀರಾಘವೇಂದ್ರ

ಹರಿವಾಯುವೊಲಿದವನೆ ಅಣುರೇಣ ಪೊರೆವವನೆ
ಅವನಿಯೊಳು ಶ್ರೀಹರಿಯ ಶೇಷ ಮಹನೀಯ
ಸಕಲಬಲ್ಲಿದ ಗುರುವೆ ಎನ್ನ ಮರೆವುದು ಸರಿಯೆ
ಮೊರೆಬಂದೆ ನಿನ್ನ ಪಾದ ಕಾಯೊ ಗುರುರಾಯ (೧)

ನಿನ್ನ ಕರುಣೆಯೆ ಗುರುವೆ ಕ್ಷಯಗೆ ಅಕ್ಷಯವು
ಅಂಧಕಗೆ ಹರಿಬೆಳಕು ಮೂಢನಾ ತಿಳಿವು
ಮಮತೆಮಾರುತ ನೀನೊ ಧರಣಿಮಡಿಲಿನ ತಣಿವು
ನರಜನುಮದುಲ್ಲಾಸ ಅನ್ನ ಉಳಿವು (೨)

ಕಲಿಯ ಕತ್ತಲೆಯೊಳಗೆ ಅರಿಯದೆ ನಿನ್ನಿರುವ
ಹಲವನ್ಯವೆಸಗಿಹೆನು ಕ್ಷಮಿಸೆನ್ನನು
ಕರೆತಂದ ಶ್ರೀಗುರುವೆ ಮರೆತೆನ್ನ ಮೋಸಗಳ
ಶ್ರೀನಿವಾಸ ವಿಠಲನ್ನ ತೋರಿಸಿನ್ನು (೩)

ಸಲಹೊ ವಾಗ್ನಿಧಿಯೆ ಕರುಣಿಯೆನ್ನಯ ದೊರೆಯೆ
ಶಾಪಾನುಗ್ರಹದೇವ ಶ್ರೀರಾಘವೇಂದ್ರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೮.೨೦೧೧

No comments:

Post a Comment