Tuesday, August 30, 2011

Shri Krishnana Nooraru Geethegalu - 151

ಕರ್ಮನೇಮಕ ಕೃಷ್ಣ

ಹರಿ ಅದ್ಭುತನೊ ಗೋಗಿರಿ ಎತ್ತಿದನೊ
ಇಂದ್ರಗರ್ವವನಿಳಿಸಿ ಕರ್ಮನೇಮಕ ಕೃಷ್ಣ

ಸೆರೆಯೊಳುದ್ಭವಿಸಿ ನಂದನೊಳು ನೆಲೆಸಿ
ಮಥುರಾಂಧನ ವಧಿಸಿ ಸುಜನರುದ್ಧರಿಸಿದಾ (೧)

ಕಾಲಿಯ ಹೆಡೆಮೆಟ್ಟಿ ದ್ವಾರಕೆಯನು ಕಟ್ಟಿ
ಪೂತನಾದಿ ದುರಿತರ ಯಮಪುರಿಗಟ್ಟಿದಾ (೨)

ಯದುಕುಲ ಶ್ರೀತಿಲಕ ಗೋಪಜನ ಮೈಪುಳಕ
ರಾಧೆಯ ಹೃದಯದ ಸರಿಗಮ ನುಡಿಸುವಾ (೩)

ಮೂಜಗ ಶ್ರೀಲೋಲ ಗೋವಿಂದ ಗೋಪಾಲ
ದಶರೂಪದಿ ಸಲಹೋ ಶ್ರೀನಿವಾಸ ವಿಠಲ (೪)

ಹರಿ ಅದ್ಭುತನೊ ಗೋಗಿರಿ ಎತ್ತಿದನೊ
ಇಂದ್ರಗರ್ವವನಿಳಿಸಿ ಕರ್ಮನೇಮಕ ಕೃಷ್ಣ

              ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೧

No comments:

Post a Comment