Tuesday, December 6, 2011

Shri Krishnana Nooraru Geethegalu - 189


ಮೂನಾಮ


ಮನಶುದ್ಧವಿರದಿರೆ ಮೂನಾಮನೊಲಿಯನೊ
ಶುದ್ಧಾತ್ಮರಂಗದೊಳು ಭಜಿಸವನ ಮನುಜ

ಎಂಜಲ ಫಲದವಳ ಬಿನ್ನಹಕ್ಕೊಲಿದವನೊ
ಮುನಿ ಶಾಪಾಂಧಳ ಶಿಲೆಗೊಲಿದವನೊ
ವಿಷಮೊಲೆಯಸುರೆಯ ಮಾತೆ ನೀನೆಂದವನೊ
ಶ್ರೀಪಾದಸೇವಕನ ಸಿರಿಯೆದೆಯಾಶ್ರಿತನೊ (೧)

ಬಹುಕುರು ಕುಲತೊರೆದು ಐವರಿಗೊಲಿದನೊ
ಜಲದೊಳಗಡಗಿದನ ದುರುತೊಡೆ ಮುರಿದನೊ
ಧರ್ಮಾದಿ ದಶದೇವ ಶ್ರೀನಿವಾಸ ವಿಠಲ ತಾ
ಎಂಟು ವಕ್ರದ ಹೆಣ್ಣ ನೆಂಟನಾದವನೊ (೨)

ಮನಶುದ್ಧವಿರದಿರೆ ಮೂನಾಮನೊಲಿಯನೊ
ಶುದ್ಧಾತ್ಮರಂಗದೊಳು ಭಜಿಸವನ ಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೧೨.೨೦೧೧

No comments:

Post a Comment