Monday, December 17, 2012

Shri Krishnana Nooraru Geethegalu - 323

ಬಾರೊ ಮೋಹನ

ಮೋಹನ ಎನ್ನ ಮೋಹನ ಬೇಸರವು ಬೃಂದಾವನ
ಒಲುಮೆ ಮುರಳಿಯ ಉಲಿದು ಬಾರೊ ತೆರೆವೆ ಎದೆಯ ಕದವ ನಾ

ಮೋಹನ ಮನಮೋಹನ ಚಡಪಡಿಸಿದೆ ಈ ಮನ
ವಿರಹವೆನ್ನೊಳು ಮೊರೆದು ಕೇಳಿದೆ ನಿನ್ನ ಮಾಧವ ಬರುವನಾ

ಮೋಹನ ಎನ್ನ ಮೋಹನ ನೀನೀ ಹೃದಯ ಗಾಯನ
ಚಂದ್ರನಿರದ ಬರಿ ಬಾನದು ಸೊಗಸೆ ಹೇಳೊ ಪಾವನ

ಮೋಹನ ಮನಮೋಹನ ರಾಧೆ ಜೀವ ಜೀವನ
ಶ್ರೀನಿವಾಸ ವಿಠಲ ಬಾರೊ ಯುಮುನೆತೀರದೆ ಕಾಯ್ವೆ ನಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೧೨.೨೦೧೨

1 comment:

  1. ವಿರಹದ ಕರೆ ಕೇಳುವನು ಕೃಷ್ಣ ಬೇಗನೇ...

    ReplyDelete