Monday, December 10, 2012

Sri Krishnana Nooraru Geethegalu - 319

ಮೀರೆಯ ಮೊರೆಯ

ಮೀರೆಯ ಮೊರೆಯ ಕೇಳೆನ್ನ ದೊರೆಯೆ
ಗೋಕುಲ ಚೆಲುವನೆ  ಮುದ್ದುಕೃಷ್ಣಯ್ಯ

ರವಿ ಬರುವನೊ ತಾ ಮೂಡಣದೊಳಗೆ
ಸಾಸಿರ ಕಿರಣದಿ ನಿನ್ನನು ಮುಗಿಯೆ
ನದಿ ತಾ ಹರಿವುದೊ ಶ್ರೀಚರಣವ ತೊಳೆಯೆ
ಮೊಗ್ಗದು ಅರಳಿ ಹೂ ನಿನ್ನ ಮಾಲೆಯಾಗೆ (೧)

ನಿನ್ನೆದೆಯೊಲುಮೆಯ ಕೊಡೊ ಶ್ರೀಪ್ರಭುವೆ
ಜನುಮಜನುಮಕು ನಾ ನಿನ್ನವಳಾಗುವೆ
ನಿನ್ನಲ್ಲದನ್ಯವೂ ತೃಣವೆನಗೆ ಕೃಷ್ಣಯ್ಯ
ಶ್ರೀನಿವಾಸ ವಿಠಲನೆ ಸೇರೆನ್ನ ಬೇಡುವೆ (೨)

ಮೀರೆಯ ಮೊರೆಯ ಕೇಳೆನ್ನ ದೊರೆಯೆ
ಗೋಕುಲ ಚೆಲುವನೆ  ಮುದ್ದುಕೃಷ್ಣಯ್ಯ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೨

No comments:

Post a Comment