Friday, July 15, 2011

Shri Krishnana Nooraru Geethegalu - 136

ಗೋವಿಂದರಾಯ

ಕಾಯುವುದೊ ಕೃಷ್ಣಯ್ಯ ಯಶೋದೆ ಪ್ರಿಯಸುತನೆ
ದ್ವಾಪರದ ಗೋಕುಲನೆ ಗೋವಿಂದರಾಯ

ಸೃಷ್ಟಿಯೊಳು ಸುಜನಂಗೆ ಸರ್ವಮಂಗಳ ನೀನೊ
ದುರಿತಸಂಹಾರಿ ಶ್ರೀದೇವದೇವ
ಅರಿಯದೆ ಹರಿಯೆಂದ ಅಜಮಿಳನ ಹರಸಿದನೆ
ಕಾಯುವುದು ಕಡೆವರೆಗು ಈ ಮೂಢನ (೧)

ಹೊನ್ನುಮಣ್ಣಿನ ದಾಹ ಮಡದಿಮಕ್ಕಳ ಮೋಹ
ಒಳಗಿರಿಸಿದವ ನೀನೊ ನಾನು ಬೊಂಬೆ
ಕಳೆದೆಲ್ಲ ಜಂಜಡವ ಕರುಣಿಸೊ ಶ್ರೀಪದವ
ಶ್ರೀನಿವಾಸ ವಿಠಲ ನೀ ಎನ್ನ ತಂದೆ (೨)

ಕಾಯುವುದೊ ಕೃಷ್ಣಯ್ಯ ಯಶೋದೆ ಪ್ರಿಯಸುತನೆ
ದ್ವಾಪರದ ಗೋಕುಲನೆ ಗೋವಿಂದರಾಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೭.೨೦೧೧

No comments:

Post a Comment