Wednesday, September 7, 2011

Shri Krishnana Nooraru Geethegalu - 154

ಕಾಯುವುದು ಕರುಣದೊಳು

ಕಾಯುವುದು ಕರುಣದೊಳು ಕೇಸರಿಸುತನೆಮ್ಮ
ಅಂಜನಾಸಂಭೂತ ಶ್ರೀಆಂಜನೇಯ

ರಾಘವ ದೂತನೆ ಶ್ರೀರಾಮ ಬಕುತ
ಧೀಮಂತ ಗುಣವಂತ ಶ್ರೀಹನುಮಂತ
ಸಿರಿಹೃದಯಸೇವೆಯಿಂ ಪುಣ್ಯ ಶ್ರೀಚರಣಕೆ
ಸೇತುಬಂಧವ ಬೆಸೆದ ಪಾವನ ಬಲವಂತ (೧)

ಜಾಂಬವಪ್ರೀತನೆ ಜಾನಕೀ ಶೋಕಹರ
ವಾನರ ಕುಲದೀಪ ದಶಶಿರ ಸಂಹಾರ
ಸಂಕಟಮೋಚಕನೆ ಸುಚರಿತ ಸಂಜೀವ
ಪವನಪುತ್ರನೆ ಶ್ರೀಮಾರುತಿ ದೇವದೇವ (೨)

ಪಂಚವದನನೆ ಅರ್ಜುನ ಧ್ವಜವಾಸ
ದ್ವಾಪರ ಭೀಮಯ್ಯ ಕೃಷ್ಣವಿಶೇಷ
ಎಮ್ಮಮ್ಮ ಲಕುಮಿಯ ತ್ರೇತಾ ಅಭಯನೆ
ಶ್ರೀನಿವಾಸ ವಿಠಲನ ರಾಮರೂಪದಿ ಭಜಿಪ (೩)

ಕಾಯುವುದು ಕರುಣದೊಳು ಕೇಸರಿಸುತನೆಮ್ಮ
ಅಂಜನಾಸಂಭೂತ ಶ್ರೀಆಂಜನೇಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೧

No comments:

Post a Comment