Saturday, September 17, 2011

Shri Krishnana Nooraru Geethegalu - 158


ಧರಣಿ ಧರ್ಮಸಾರಥಿ

ರಾಮರಾಮರಾಮನೆನಿರೊ ರಾಮನಾಮವ ಪಾಡಿರೊ
ಅಳಿದು ಇಹದ ಕ್ಷಾಮ ಪೊರೆವ ಸುಗುಣ ಪ್ರೇಮಧಾಮ

ಕೌಸಲ್ಯೆಯ ಕಂದನಿವನೊ ಕರುಣಾಂಬುಧಿ ಮೂರುತಿ
ರಘುವಂಶಜ ರಾಮಚಂದಿರ ಧರಣಿ ಧರ್ಮಸಾರಥಿ
ಉತ್ತಮರೊಳು ಪುರುಷೋತ್ತಮ ರಾಮನಿವನ ಕಿರುತಿ
ಹಾಡಿಪೊಗಳಿರೊ ಆದಿದೇವನ ಒಲಿವನೆಮ್ಮ ಮಾರುತಿ (೧)

ದ್ವಾಪರದೊಳು ಗೋಪಾಲನು ಗೋಕುಲವನು ಕಾದನು
ಯದುವಂಶಜ ವಾಸುದೇವ ನಂದಗೋಪಿಯ ಕಂದನು
ದುರಿತ ಸಂಹಾರ ಕೃಷ್ಣ ಶರಣ ಸುಜನರ ಕಾವನು
ಹಾಡಿಪೊಗಳಿರೊ ರಾಧೆಶ್ಯಾಮನ ಒಲಿವ ಭೀಮರಾಯನು (೨)

ಕಲಿಯೊಳಗೆ ನಾರಾಯಣ ನರರ ಪೊರೆವ ದೇವನು
ವ್ಯಾಸವಾದಿರಾಯ ರೂಪದಿ ಧರೆಯ ಸಲಹುತಿರುವನು
ಹರಿ-ವಾಯು-ಗುರುವೆಮಗೆ ಶ್ರೀನಿವಾಸ ವಿಠಲನು
ಹಾಡಿಪೊಗಳಿರೊ ದಶದದೇವನ ಒಲಿವ ಮಧ್ವರಾಯನು (೩)

ರಾಮರಾಮರಾಮನೆನಿರೊ ರಾಮನಾಮವ ಪಾಡಿರೊ
ಅಳಿದು ಇಹದ ಕ್ಷಾಮ ಪೊರೆವ ಸುಗುಣ ಪ್ರೇಮಧಾಮ

     ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೧

No comments:

Post a Comment