Wednesday, September 28, 2011

Shri Krishnana Nooraru Geethegalu - 164

ಮಾನಜನ ಮನದೇವ

ಸಲಹೊ ಸುಖದೊಳಗೆನ್ನ ಶ್ರೀಹರಿಯೆ
ಸಲಹಯ್ಯ ಸಲಹೆನ್ನ ಶುಭನಿಧಿಯೆ

ಕರೆತಂದವ ನೀನೊ ನೆಚ್ಚಿಬಂದವ ನಾನೊ
ಪೊರೆವುದೆನ್ನನು ದೇವ ನಿನ್ನ ಧರ್ಮ
ಜಗನೇಮಕ ನೀನೊ ತ್ರಿಜಗದೇವನೆ ಕೃಷ್ಣ
ಎನಗಾರೊ ನಿನ್ನನ್ಯವೆನುವ ಮರ್ಮ (೧)

ಮಾತೆ ಕೌಸಲ್ಯೆಯ ಮಡಿಲ ಮಮತೆಯ ಸುಖವ
ದ್ವಾಪರದೆ ದೇವಕಿಯ ಗರ್ಭದಾ ಸುಖವ
ನಂದಗೋಪಿಯ ತೋಳ ತೊಟ್ಟಿಲೊಳ ಅತಿಸುಖವ
ಉಂಡವನೆ ಸಲಹೆನ್ನ ಸೌಖ್ಯದೊಳು ಕೇಶವ (೨)

ತ್ರೇತೆಯೊಳು ಸುಜನರನು ಸಲಹಿದನೆ ರಾಮಯ್ಯ
ಗೋಕುಲದ ಮಾನಜನ ಮನದೇವ ಶ್ಯಾಮಯ್ಯ
ನರಕುಲವ ಧರಣಿಯೊಳು ಕರುಣದೊಳು ಕಾಯಯ್ಯ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲಯ್ಯ (೩)

ಸಲಹೊ ಸುಖದೊಳಗೆನ್ನ ಶ್ರೀಹರಿಯೆ
ಸಲಹಯ್ಯ ಸಲಹೆನ್ನ ಶುಭನಿಧಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೯.೨೦೧೧

No comments:

Post a Comment