Saturday, September 24, 2011

Shri Krishnana Nooraru Geethegalu - 163

ಕಾಯುವುದೊ ಕರುಣದೊಳು

ಕಾಯುವುದೊ ಕರುಣದೊಳು ಕಾಮನಯ್ಯನೆ ಎಮ್ಮ
ದಶದೊಳಗೆ ಧರಣಿಯನು ಸಲಹಿದನೆ ಕೃಷ್ಣ

ಕರಿಯದುವು ಆದಿಯೊಳು ಹರಿ ನೀನೆ ಗತಿಯೆನಲು
ಅರಿಯದೆ ಅಜಮಿಳನು ಹರಿ ಹರಿ ಹರಿಯೆನಲು
ಅಸುರಸುತ ಹರಿಯೆಂದು ಬಕುತಿಯೊಳು ಧ್ಯಾನಿಸಲು
ಆ ಕ್ಷಣವೇ ಅವತರಿಸಿ ಹರಿಸಿದನೆ ಕೃಷ್ಣ (೧)

ಪಾಂಡವರು ಧರ್ಮವನು ಗೆಲಿಸೊ ಶ್ರೀಹರಿಯೆನಲು
ದ್ರೌಪದಿಯು ಮಾನವದ ಕಾಯೊ ಕೃಷ್ಣಯೆನಲು
ಮಥುರೆಯೊಳು ಮಾನಜನ ಹರಿಯೆಂದು ಮೊರೆಯಿಡಲು
ಅವಸರಿಸಿ ಅವತರಿಸಿ ಹರಿಸಿದನೆ ಕೃಷ್ಣ (೨)

ತ್ರೇತೆಯೊಳು ಹನುಮಯ್ಯ ದ್ವಾಪರದೆ ಭೀಮಯ್ಯ
ನೆಚ್ಚಿದೊಳು ಕಲಿಯೊಳಗೆ ಶ್ರೀಮಧ್ವರಾಯ
ಪೊರೆದವನೆ ಜಗದೊಡೆಯ ಶ್ರೀನಿವಾಸ ವಿಠಲಯ್ಯ
ಮೊರೆಬಂದೆ ಶ್ರೀಪಾದ ಕಾಯೊ ಮಹನೀಯ (೩)

ಕಾಯುವುದೊ ಕರುಣದೊಳು ಕಾಮನಯ್ಯನೆ ಎಮ್ಮ
ದಶದೊಳಗೆ ಧರಣಿಯನು ಸಲಹಿದನೆ ಕೃಷ್ಣ

       ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ದಿನಾಂಕ ೨೪.೦೯.೨೦೧೧

No comments:

Post a Comment