Thursday, September 1, 2011

Shri Krishnana Nooraru Geethegalu - 153

ಜೀವ ಸಂಜೀವ

ಅಂಜನಾಸುತ ವಂದೇ ಆಂಜನೇಯ
ರಾಮಸೇವಕ ಶರಣು ಕಾಯೋ ಮಹನೀಯ

ಬಕುತಾಭರಣನೊ ಶ್ರೀರಾಮ ಮುಖ್ಯಪ್ರಾಣ
ರಘುಕುಲಜ ಲಕ್ಷ್ಮಣಗೆ ಜೀವ ಸಂಜೀವ
ವೀರಕೇಸರಿಪುತ್ರ ವಿಭೀಷಣ ಮಿತ್ರ
ಲೋಕಪೂಜಿತ ಹನುಮ ಶ್ರೀರಾಮದೂತ (೧)

ಆ ಶೋಕೆ ಜಾನಕಿಗೆ ಅಭಯಮುದ್ರೆಯನಿತ್ತು
ಅಸುರನಾ ಲಂಕೆಯನು ದಹಿಸಿದವನೆ
ಪಾಪಹಾರಕದೇವ ಪವನಪುತ್ರನೆ ಹನುಮ
ಭಕ್ತವತ್ಸಲ ಕಾಯೋ ದಶಬಾಹವೆ (೨)

ರತ್ನಕುಂಡಲಧರಿತ ರುದ್ರವೀರ್ಯನೆ ದೇವ
ದೀನಬಂಧವೆ ಶರಣು ದುರಿತಾಂತಕ
ಶ್ರೀನಿವಾಸ ವಿಠಲನ್ನ ಆದಿರೂಪದೊಳುಂಡ
ರಾಮಪಾದನೆ ಸಲಹೊ ವರದಾಯಕ (೩)

ಅಂಜನಾಸುತ ವಂದೇ ಆಂಜನೇಯ
ರಾಮಸೇವಕ ಶರಣು ಕಾಯೋ ಮಹನೀಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೯.೨೦೧೧

No comments:

Post a Comment