Friday, April 6, 2012

Shri Krishnana Nooraru Geethegalu - 222

ಗುರುರಾಯ ವರದಾಯ

ಗುರುರಾಯರ ವರದಾಯರ ಸ್ಮರಣೆ ಮಾಡಿರೊ
ಶ್ರೀಹರಿಯ ಪದತಲದಿ ನಿಂತು ನರರ ಕಾವ ಎಮ್ಮ

ತುಂಗೆಯಂದದಿ ಸ್ಫಟಿಕ ಶುದ್ಧ ಆತ್ಮವೆಮ್ಮ ರಾಘವೇಂದ್ರ
ದೇವರೂಪಿ ಶಂಖುಕರ್ಣ ಪ್ರಹ್ಲಾದ ವ್ಯಾಸರಾಯ
ಮಂದಮತಿಗೆ ಸುಮತೀಂದ್ರರೊ ಅಕ್ಷಯ ಸಿರಿಸುಖದಾಯ
ಕಲಿವರದ ಕಲ್ಪವೃಕ್ಷ ಕಾಮಧೇನು ಮಂತ್ರಾಲಯದ (೧)

ಭುವನಗಿರಿಯ ಭಾಗ್ಯವಯ್ಯ ಮೂಲರಾಮರೊಲಿದ ಜೀಯ
ಕರುಣಾನಿಧಿ ಸುಗುಣ ಶರಧಿ ಎಮ್ಮ ಪುಣ್ಯ ರಾಘವೇಂದ್ರ
ಮೇಲುಕೋಟೆಯ ಚೆಲುವನೆಮ್ಮ ಶ್ರೀನಿವಾಸ ವಿಠಲರಾಯನ
ಹನುಮ-ಭೀಮ-ಮಧ್ವ ರಾಯ ರೂಪದಿಂದ ಸೇವೆಗೈದ (೨)

ಗುರುರಾಯರ ವರದಾಯರ ಸ್ಮರಣೆ ಮಾಡಿರೊ
ಶ್ರೀಹರಿಯ ಪದತಲದಿ ನಿಂತು ನರರ ಕಾವ ಎಮ್ಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೨

No comments:

Post a Comment