Thursday, April 12, 2012

Shri Krishnana Nooraru Geethegalu - 223

ಪಾಮರ ಜನುಮ

ಪಾವನವಾಗಿಸೊ ಪಾಮರ ಜನುಮ
ಹನುಮನಿಗೊಲಿದನೆ ದೊರೆಯೆನ್ನ ಶ್ರೀರಾಮ

ನುಡಿಯಲಿಲ್ಲವೊ ಎನ್ನ ನಾಲಗೆಯು ರಾಮನೆಂದು
ನೋಡಲಿಲ್ಲವೊ ನಯನ ಆ ದಿವ್ಯರೂಪವನ್ನು
ಕರ್ಣ ಮರೆತವೊ ದೇವ ಶ್ರೀನಾಮ ಶ್ರವಣವನು
ಆದಿದೇವಗೆ ಕರವು ಮುಗಿವುದು ಪುಣ್ಯವೆಂದು (೧)

ನೀ ತಂದೆ ನಾ ಬಂದೆ ದಶರಥಸುತ ರಾಮ
ನಿನ್ನಿಂದಲೆ ಸಕಲ ಅರಿವಾಯ್ತೊ ಜಗಕ್ಷೇಮ
ಮಂದಮತಿಯನು ಕ್ಷಮಿಸೊ ಶ್ರೀನಿವಾಸ ವಿಠಲಯ್ಯ
ಕರ್ಮ ಕಶ್ಮಲವಳಿದು ನೀ ಕಾಯೊ ಎನ್ನಯ್ಯ (೨)

ಪಾವನವಾಗಿಸೊ ಪಾಮರ ಜನುಮ
ಹನುಮನಿಗೊಲಿದನೆ ದೊರೆಯೆನ್ನ ಶ್ರೀರಾಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೪.೨೦೧೨

No comments:

Post a Comment