Friday, April 20, 2012

Shri Krishnana Nooraru Geethegalu - 225

ಸಿರಿಲಕುಮಿರಮಣ

ಶ್ರೀಹರಿಯೆ ಪಾಲಿಸೊ ಸಿರಿಲಕುಮಿರಮಣ
ಅಣುರೇಣುತೃಣಂಗಳ ಆದಿಯಿಂ ಸಲಹುವ

ಹರಿಯೆನಲು ಅಜಮಿಳನು ಅಕ್ಕರದಿ ಹರಸಿದನೆ
ಕರಿಯದುವು ಮೊರೆಯಿಡಲು ಕ್ಷಣದಿ ಒದಗಿದನೆ
ನಾರಾಯಣ ನೀನೆ ಗತಿಯೆನಲು ಪ್ರಹ್ಲಾದ
ಕಂಬವನು ಸೀಳಿ ತಾ ನರಸಿಂಹನಾದವನೆ (೧)

ರಾವಣನ ಶಿರಮುರಿದು ಶಬರಿಗೂ ಒಲಿದವನೆ
ದ್ವಾಪರದೆ ದುರುಹರಿದು ಧರ್ಮಜನ ಗೆಲಿಸಿದನೆ
ಕಲಿಯೊಳಗೆ ಸುಜನಂಗೆ ಸಕಲ ಮಂಗಳವೀವ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲನೆ (೨)

ಶ್ರೀಹರಿಯೆ ಪಾಲಿಸೊ ಸಿರಿಲಕುಮಿರಮಣ
ಅಣುರೇಣುತೃಣಂಗಳ ಆದಿಯಿಂ ಸಲಹುವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೪.೨೦೧೨

No comments:

Post a Comment