Monday, April 30, 2012

Shri Krishnana Nooraru Geethegalu - 229

ಮಾರುತಿರಾಯ

ನೀನಲ್ಲದಿನ್ನನ್ಯ ಆರೊ ಕಾಯುವರೆನ್ನ
ಮೂಲರಾಮರೇ ಒಲಿದ ಮಾರುತಿರಾಯ

ಇನಿತೆನ್ನ ಜನುಮಗಳ ಕರ್ಮಕಶ್ಮಲವಳಿದು
ಶ್ರೀರಾಮ ಚರಣವನು ತೋರಿಸೆನಗೆ
ಮಾತೆ ಸೀತಾದೇವಿ ಶೋಕಮಡು ಕೆಡುಹಿದನೆ
ನಿನ್ನೊಡೆಯ ರಘುಪತಿಯ ತೋರಿಸೆನಗೆ (೧)

ದ್ವಾಪರದೆ ಬಲವಂತ ಕುರುಗರ್ವ ಭಂಗಿತನೆ
ನಿನ್ನ ದೇವ ಕೃಷ್ಣನನು ತೋರಿಸೆನಗೆ
ಪ್ರಹ್ಲಾದರಾಯರ ಪ್ರತಿರೂಪ ಭೀಮಯ್ಯ
ನಿನ್ನ ನಾರಾಯಣನ ತೋರಿಸೆನಗೆ (೨)

ನೆಚ್ಚಿಬಂದ ನರರ ಮೆಚ್ಚಿ ಸಲಹುವೆನೆಂದ
ರಾಘವೇಂದ್ರರ ನೀನು ತೋರಿಸೆನಗೆ
ದಾಸಸೇವೆಯ ಮೆಚ್ಚಿ ನಿನ್ನೊಳಗೆ ನೆಲೆಯಾದ
ಶ್ರೀನಿವಾಸ ವಿಠಲನ್ನ ತೋರಿಸೆನಗೆ (೩)

ನೀನಲ್ಲದಿನ್ನನ್ಯ ಆರೊ ಕಾಯುವರೆನ್ನ
ಮೂಲರಾಮರೇ ಒಲಿದ ಮಾರುತಿರಾಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೪.೨೦೧೨

No comments:

Post a Comment