Wednesday, October 3, 2012

Shri Krishnana Nooraru Geethegalu - 302

ಅವನೆ ಕಾರಣನೊ ಶ್ರೀಪತಿ

ಅಲ್ಪನೆನ್ನಯ ಹಲ ಜನುಮದ ಕರ್ಮವ ಕಳೆದು ಕಾವನೊ ದೇವ ಶ್ರೀಹರಿ
ಮತಿಗೇಡಿ ನಿನ್ನಯ ಸದ್ಗತಿಯು ಸುಮತಿಗೆ ಅವನೆ ಕಾರಣವರಿಯೊ ಶ್ರೀಪತಿ

ಜಲಬಿಂದು ಆದಿಯೊಳು ಜಗಬಂಧು ದಶದೊಳಗೆ ಮತ್ಸ್ಯನೊ ಸತ್ಯದೊಳು ಧರಣೀಶ್ವರ
ಕೂರ್ಮನೊ ಅಮೃತಕೆ ವರಾಹನವನಿಗೆ ಕಂದ ಕಾಯೆನೆ ಸಿಂಹ ಜಗದೀಶ್ವರ

ಗರ್ವ ಮೆಟ್ಟಿದ ಪುಟ್ಟ ಕೊಡಲಿಯೆತ್ತಿದ ದಿಟ್ಟ ತ್ರೇತೆ ಸದ್ಗುಣ ರಾಮ ಸತ್ಯನಾಮ
ಶ್ರೀನಿವಾಸ ವಿಠಲ ತಾ ದ್ವಾಪರನು ಬಲರಾಮ ಬಿಡದೆ ಎಮ್ಮನು ಕಾವ ನಿತ್ಯಪ್ರೇಮ (೨)

ಅಲ್ಪನೆನ್ನಯ ಹಲ ಜನುಮದ ಕರ್ಮವ ಕಳೆದು ಕಾವನೊ ದೇವ ಶ್ರೀಹರಿ
ಮತಿಗೇಡಿ ನಿನ್ನಯ ಸದ್ಗತಿಯು ಸುಮತಿಗೆ ಅವನೆ ಕಾರಣವರಿಯೊ ಶ್ರೀಪತಿ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೧೦.೨೦೧೨

No comments:

Post a Comment