Monday, October 8, 2012

Shri Krishnana Nooraru Geethegalu - 304

ಶ್ರೀಚರಣ ಕೃಷ್ಣ

ನೀನಲ್ಲದಿನ್ಯಾವ ದೇವರನು ನಾ ಅರಿಯೆ
ಸಿರಿಲಕುಮಿ ದೊರೆಯೆನ್ನ ದಿವ್ಯಚರಣನೆ ಕೃಷ್ಣ

ಧರ್ಮಜಗೆ ಪಗಡೆಯೊಳು ಸೋಲ ಬರೆದವ ನೀನೆ
ಸೋತು ಗೆಲುವುದೆ ಜಗದ ಧರ್ಮವೆಂದರುಹಿದನೆ
ಕುರುಜನಹಂ ಕೇಕೆಗು ಮೂಲಕಾರಣ ನೀನೆ
ರಣದೊಳಗೆ ಜೀವನವ ಮಧ್ಯಮಗೆ ತಿಳುಹಿದನೆ (೧)

ಅಷ್ಟಮಹಿಷಿಯರೊಡೆಯ ನಿಷ್ಠ ರಾಧೆಗು ಹೃದಯ
ಗಿರಿಯೆತ್ತಿ ಗೋಕುಲವ ಸಲುಹಿದವನೆ
ಬಿಂದು ಪದ್ಮದ ಪತ್ರ ಬದುಕೆಂದ ಜಗಸೂತ್ರ
ಶ್ರೀನಿವಾಸ ವಿಠಲ ನಮೊ ಧರಣೀಶನೆ (೨)

ನೀನಲ್ಲದಿನ್ಯಾವ ದೇವರನು ನಾ ಅರಿಯೆ
ಸಿರಿಲಕುಮಿ ದೊರೆಯೆನ್ನ ದಿವ್ಯಚರಣನೆ ಕೃಷ್ಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೦.೨೦೧೨

No comments:

Post a Comment