Wednesday, October 17, 2012

Shri Krishnana Nooraru Geethegalu - 308

ದಿವ್ಯಚರಣ

ನಂಬಿಹೆನು ನಾ ನಿನ್ನ ದಿವ್ಯಚರಣವ ಕೃಷ್ಣ
ಬಿಡದೆ ಸಲಹೊ ಹರಿಯೆ ಸಿರಿಲಕುಮಿರಮಣ

ಗಾಳಿಯೊಳು ಮೂಲೋಕ ಜೀವವರಳಿಸಿದವನೆ
ಅಗ್ನಿಜಲದೊಳು ಶುದ್ಧಜಗವದನು
ಮಣ್ಣಿನೊಳು ಮುಕುತಿಯನು ನವದುದಯ ಶಕುತಿಯನು
ಸ್ವಚ್ಛದಿ ಪರಪಂಚ ನಡೆಸುವನೆ (೧)

ಆತ್ಮಂಗೆ ವಿಶ್ವಾತ್ಮ ನಿಷ್ಕ್ರಿಯಗೆ ಸಕ್ರಿಯನು
ಸಕಲ ಚರಾಚರದೆ ಅವತರಿಪ ದಿಟವೆ
ಕನಕಯ್ಯಗೊಲಿದೆಮ್ಮ ಶ್ರೀನಿವಾಸ ವಿಠಲನೆ
ಶರಣು ಬಂದೆನು ಕಾಯೊ ದೇವಭೃದ್ಗುರುವೆ (೨)

ನಂಬಿಹೆನು ನಾ ನಿನ್ನ ದಿವ್ಯಚರಣವ ಕೃಷ್ಣ
ಬಿಡದೆ ಸಲಹೊ ಹರಿಯೆ ಸಿರಿಲಕುಮಿರಮಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೦.೨೦೧೨

No comments:

Post a Comment