Thursday, October 4, 2012

Shri Krishnana Nooraru Geethegalu - 303

ನಿತ್ಯವಾಗಲೊ

ನಿನ್ನ ಮಧುರ ಮುರಳಿಗಾನವು ನಿತ್ಯವಾಗಲೊ
ಕರುಣೆ ನಿನ್ನದು ಸುಜನ ಬಕುತಗೆ ಸತ್ಯವಾಗಲೊ

ಮುಗಿಲ ಮಳೆಹನಿ ಬುವಿಗೆ ಮರಳಿ ಬಸಿರು ಮೊಳೆಯಲೊ
ಚಿಗುರಿ ಹಸಿರೊಳು ತೆನೆಯು ಸಾಸಿರ ಅನ್ನವಾಗಲೊ (೧)

ನೀನೆ ಬೆಳಗಿದೀ ಜೀವ ಹಣತೆಯು ಅಂಧ ಕಳೆಯಲೊ
ರವಿಯು ಮೂಡಲಿ ಚಂದ್ರ ಕಾಡಲಿ ಚಕ್ರವುರುಳಲೊ (೨)

ಯುಗಯುಗದೊಳು ಪ್ರೀತಿಯಮುನೆ ಬಿಡದೆ ಹರಿಯಲೊ
ಶ್ರೀನಿವಾಸ ವಿಠಲ ರಾಧೆಯು ಎನ್ನೊಳಗೆ ನಲಿಯಲೊ (೩)

ನಿನ್ನ ಮಧುರ ಮುರಳಿಗಾನವು ನಿತ್ಯವಾಗಲೊ
ಕರುಣೆ ನಿನ್ನದು ಸುಜನ ಬಕುತಗೆ ಸತ್ಯವಾಗಲೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೧೦.೨೦೧೨

No comments:

Post a Comment