Tuesday, October 4, 2011

Shri Krishnana Nooraru Geethegalu - 167

ಮನವ ನಿನ್ನೊಳು ನಿಲಿಸೊ

ಮನವ ನಿನ್ನೊಳು ನಿಲಿಸೊ ಮಾಧವ ಎನ್ನ
ಮನದ ತಮವ ಹರಿಸೊ

ಮೃಗಶಿರವೆನ್ನ ಚಿತ್ತ ನಿಲ್ಲದೊ ಒಂದತ್ತ
ಸಂಚಿನೊಳಾರೆಂಬೊ ಪಾಶ-ಮೋಹದ ಹುತ್ತ
ಹರಿ ನಿನ್ನ ಇರುವನೆ ಅರಿಯದೆ ಅತ್ತಿತ್ತ
ಚಂಚಲ ಕಾಲಿಂದಿ ಎನ್ನೊಳು ಬುಸುಗುಡುತ (೧)

ತ್ರೇತೆಯೊಳು ರಾವಣಗೆ ಕಾಮವಾಗೆರಗಿತ್ತೊ
ಜಾನಕಿಗೆ ಜಗನಿಂದೆ ಮಾಯೆಯಾಗಿತ್ತೊ
ಧರ್ಮದಂಬಿಗೆ ಬೆದರಿ ದೂರ ಓಡಿತ್ತೊ
ಶ್ರೀರಾಮ ಪಾದದೊಳು ಶರಣಾಗಿತ್ತೊ (೨)

ಕುರುಕುಲನ ದುರಿತದಾ ತೊಡೆಯೊಳಗಡಗಿತ್ತೊ
ದ್ರೌಪದಿಯ ಮಾನಕ್ಕೆ ಕೈಯ್ಯ ಚಾಚಿತ್ತೊ
ಹದಿನೆಂಟೆ ದಿನಗಳಲಿ ಅಂಕೆಯೊಳ ಬಂತೊ
ಶ್ರೀನಿವಾಸ ವಿಠಲಂಗೆ ಶಿರಬಾಗಿ ನಿಂತೊ (೩)

ಮನವ ನಿನ್ನೊಳು ನಿಲಿಸೊ ಮಾಧವ ಎನ್ನ
ಮನದ ತಮವ ಹರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೧೦.೨೦೧೧

No comments:

Post a Comment