Thursday, October 27, 2011

Shri Krishnana Nooraru Geethegalu - 179

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ ನಿಜ
ನಿನ್ನೊಳ ಕೊಳೆಯದ ತೊಳಕೊಳ್ಳೊ
ಮನವೆಂಬೊ ಗುಡಿಯೊಳ ಗೋಡೆಗೋಪುರಕೆ
ಶುದ್ಧದ ಸುಣ್ಣವ ಬಳಕೊಳ್ಳೊ

ನಾನೆಂಬೊ ಕೂಳನ ಹೊರತಳ್ಳೊ ನಿಜ
ಆರೆಂಬೊ ಅಸುರರ ನೀ ಕೊಲ್ಲೊ
ಮಡಿಮೈಲಿಗೆಯೆಂಬೊ ಗಡಿಬಿಡಿ ಬದಿಗಿಡೊ
ಇಹದೀ ಮೋಹವ ಕಳಕೊಳ್ಳೊ (೧)

ಬಾಡಿಗೆ ಕಾಯವೊ ಬರಕೊಳ್ಳೊ ನಿಜ
ಅವನೇ ದಾತನು ತಿಳಕೊಳ್ಳೊ
ಶ್ರೀನಿವಾಸ ವಿಠಲನ ಸಿರಿ ಶ್ರೀಪಾದವ
ಬಿಡದೇ ಎಂದೆಂದು ಹಿಡಕೊಳ್ಳೊ (೨)

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ
ನಿನ್ನೊಳ ಕೊಳೆಯದ ತೊಳಕೊಳ್ಳೊ
ಮನವೆಂಬೊ ಗುಡಿಯೊಳ ಗೋಡೆಗೋಪುರಕೆ
ಶುದ್ಧದ ಸುಣ್ಣವ ಬಳಕೊಳ್ಳೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೧೦.೨೦೧೧

No comments:

Post a Comment