Monday, July 9, 2012

Shri Krishnana Nooraru Geethegalu - 246

ನಿನ್ನೊಲುಮೆ ಇರದೆನ್ನ

ನಿನ್ನೊಲುಮೆ ಇರದೆನ್ನ ಬದುಕುಂಟೆ ಮಾಧವ
ನಾ ಬರಿಯ ಬೊಂಬೆಯೊ ನೀನೆನ್ನ ಜೀವ

ಮೂಜಗದ ಅಣುಕಣದ ಜೀವ ಜೀವನ ನೀನೊ
ಚರಣದೊಳು ಶರಣಾದೆ ಕರುಣ ಹರಸು
ನೀನಿತ್ತ ಬದುಕಿದುವು ನೀ ದಿವ್ಯ ಬೆಳಕಯ್ಯ
ನಿಶೆ ಹರಿದು ಉಷೆಯೆಡೆಗೆ ಎನ್ನ ನಡೆಸು (೧)

ಧರೆ-ಧರ್ಮವನು ಪೊರೆದ ದಶರೂಪನೊ ನೀನು
ಎನ್ನೊಳಗಿನಂಧಕನ ತೊಲಗಿಸಿನ್ನು
ಪಂಚಾಬ್ಧಿ ದೇಹದೀ ಶುದ್ಧಾತ್ಮದಾಲಯದೆ
ಶ್ರೀನಿವಾಸ ವಿಠಲಯ್ಯ ನೆಲೆಸೊ ಇನ್ನು (೨)

ನಿನ್ನೊಲುಮೆ ಇರದೆನ್ನ ಬದುಕುಂಟೆ ಮಾಧವ
ನಾ ಬರಿಯ ಬೊಂಬೆಯೊ ನೀನೆನ್ನ ಜೀವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೭.೨೦೧೨

No comments:

Post a Comment